ಆಯುರ್ವೇದ ಔಷಧ ರೋಗಿಗಳಿಗೆ ರಾಮಬಾಣ ಸಿ ಪುಟ್ಟಸ್ವಾಮಿ
ಚನ್ನಪಟ್ಟಣ: ಪೌರಾಣಿಕ ಹಾಗೂ ಇತಿಹಾಸದ ಹಿನ್ನೆಲೆಯ ಪಾರಂಪರಿಕ ಮತ್ತು ಆಯುರ್ವೇದ ಔಷಧವೂ ರೋಗಿಗಳ ಕಾಯಿಲೆಗಳಿಗೆ ರಾಮಬಾಣವಾಗಿದ್ದು, ಆಧುನಿಕ ಇಂಗ್ಲಿಷ್ ಔಷಧ ಗಳ ಗುಣಮಟ್ಟವನ್ನು ಮೆಟ್ಟಿ ತನ್ನದೇ ಮಹತ್ವವನ್ನು ಉಳಿಸಿಕೊಂಡಿದೆ ಎಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಅಭಿಪ್ರಾಯ ಪಟ್ಟರು.
ಅವರು ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು ಮತ್ತು ಕರ್ನಾಟಕ ನಗರ ಮತ್ತು ಗ್ರಾಮೀಣ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯು ಜಂಟಿಯಾಗಿ ಆಯೋಜಿಸಿದ್ದ ಉಚಿತ ಆಯುರ್ವೇದ ವೈದ್ಯಕೀಯ ಚಿಕಿತ್ಸಾ ಶಿಬಿರ ಹಾಗೂ ಔಷಧ ವಿತರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ ಆಗುತ್ತಿದ್ದರೂ ಕಾಯಿಲೆಗಳನ್ನು ಗುಣಪಡಿಸುವ ಔಷಧ ದ ಗುಣಮಟ್ಟವು ಇನ್ನೂ ಸುಧಾರಣೆಯಾಗಿಲ್ಲ. ಆದರೆ ಪುರಾತನ ಆಯುರ್ವೇದ ಔಷಧವು ರೋಗಿಗಳ ಖಾಯಿಲೆಗಳನ್ನು ಗುಣಪಡಿಸುವ ಮೂಲಕ ಆಧುನಿಕ ಯುಗದಲ್ಲಿಯೂ ತನ್ನ ತನವನ್ನು ಉಳಿಸಿಕೊಂಡಿದೆ ಎಂದು ಬಣ್ಣಿಸಿದರು.
ಎಸ್ ಸಿ ಪಿ ಟಿ ಎಸ್ ಪಿ ಮತ್ತು ಎನ್ ಎಸ್ ಎಸ್ ಘಟಕದ ಯೋಜಾಧಿಕಾರಿ ಡಾ ಶ್ರೀನಿವಾಸ ಯಾದವ್ ರವರು ಆಯುರ್ವೇದ ಔಷಧದಿಂದ ವಾಸಿಯಾಗುವ ಖಾಯಿಲೆಗಳ ವಿವರ, ಔಷಧಗಳ ಕಿರುಪರಿಚಯವನ್ನು ಮಾಡಿಕೊಟ್ಟರು.
ಸಂಸ್ಥೆಯ ಮುಖ್ಯಸ್ಥರಾದ ಮೋಹನಕುಮಾರಿ ಯವರು ಮಾತನಾಡಿ ಆಯುರ್ವೇದ ನಮ್ಮ ಪೂರ್ವಜರ ಅನುಭವದ ಕೊಡುಗೆಯಾಗಿದ್ದು ಅದನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ.
ಕಾಡುಗಳನ್ನು ಉಳಿಸುವ ಮೂಲಕ ಜೀವವೈವಿಧ್ಯತೆಯ ಜೊತೆಗೆ ಅನೇಕ ಔಷಧೀಯ ಗುಣಗಳುಳ್ಳ ಸಸ್ಯ ಪ್ರಬೇಧಗಳನ್ನು ಉಳಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಕ್ಕರೆ ಖಾಯಿಲೆ, ರಕ್ತದೊತ್ತಡ, ಗ್ಯಾಸ್ಟ್ರಿಕ್, ಅಸ್ತಮಾ, ಮಂಡಿನೋವು, ಕೈಕಾಲು ನೋವು, ಕಿವಿ, ಮೂಗು, ಗಂಟಲು, ಚರ್ಮರೋಗ, ಮನೋರೋಗ, ಸ್ತ್ರೀ ರೋಗ ಹಾಗೂ ಮಕ್ಕಳ ತಜ್ಞರು ಆಗಮಿಸಿದ್ದು ಸುಮಾರು ಐದುನೂರಕ್ಕೂ ಹೆಚ್ಚು ರೋಗಿಗಳು ಉಪಯೋಗ ಪಡೆದುಕೊಂಡರು.
ಶಿಬಿರದಲ್ಲಿ ಶಿಕ್ಷಕ ಸುರೇಶ್ ಮತ್ತು ಸಹ ಶಿಕ್ಷಕರು ಹಾಗೂ ವೈದ್ಯಕೀಯ ಮಹಾವಿದ್ಯಾಲಯ ದ ಡಾ ರವಿರಾಜ್, ಡಾ ಸಂತೋಷ್ ಶಿವಣ್ಣನವರ್, ಡಾ ಮೇಘ, ಡಾ ಚಂದ್ರಕಲಾ, ಡಾ ಸತೀಶ್, ಡಾ ಅವಿನಾಶ್ ರಾಜೇಶ್ವರಿ, ಷಡಕ್ಷರಿ, ಮೂರ್ತಿ, ನಾಗೇಗೌಡ, ಶಿವಣ್ಣ ಮತ್ತು ಮೂರನೇ ಸೆಮಿಸ್ಟರ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು