Tel: 7676775624 | Mail: info@yellowandred.in

Language: EN KAN

    Follow us :


ನಗರದ ನ್ಯೂ ಜಿ ಎಫ್ ಸಿ ಹೋಟೆಲ್ ಗೆ ಭೇಟಿ ನೀಡಿ ರುಚಿ ಸವಿದ ಪಾರೂ ಧಾರಾವಾಹಿ ಯ ನಟನಟಿಯರು

Posted date: 07 Mar, 2020

Powered by:     Yellow and Red

ನಗರದ ನ್ಯೂ ಜಿ ಎಫ್ ಸಿ ಹೋಟೆಲ್ ಗೆ ಭೇಟಿ ನೀಡಿ ರುಚಿ ಸವಿದ ಪಾರೂ ಧಾರಾವಾಹಿ ಯ ನಟನಟಿಯರು

ಚನ್ನಪಟ್ಟಣ:ರಾಜ್ಯದ ಹೆಂಗಳೆಯರ ಮನೆಮಾತಾಗಿರುವ ದಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ *ಪಾರೂ* ದಾರಾವಾಹಿಯ ಕಿರುಚಿತ್ರ ತಂಡ ನಗರದ ಚರ್ಚ್ ರಸ್ತೆಯಲ್ಲಿರುವ ಮಾಂಸಹಾರಿ *ಹೋಟೆಲ್ 

ನ್ಯೂ ಜಿ.ಎಫ್.ಸಿ. ಗೆ ಭೇಟಿ ನೀಡಿ ನೂತನ 

ಖಾದ್ಯಗಳ ರುಚಿಯನ್ನು ಸವಿದರು.ಸುಮಾರು ೨೦ ಕ್ಕೂ ಹೆಚ್ಚು ಮಂದಿ ಕಲಾವಿದರ ತಂಡ ಅದರಲ್ಲೂ ಪಾರೂ ದಾರಾವಾಹಿಯ ಖ್ಯಾತ ನಟಿ ಪಾರೂ (ಪಾರ್ವತಿ) ಹೋಟೆಲ್‍ನಲ್ಲಿದ್ದ ಗ್ರಾಹಕರ ಜೊತೆ ಹಸನ್ಮುಖಿಯಾಗಿ ಮಾತನಾಡಿ ಪ್ರತಿಯೊಬ್ಬರ ಜೊತೆ ಪೋಟೋ ಹಾಗೂ ಸೆಲ್ಪಿಗೆ ಪೋಸ್‍ ಕೊಟ್ಟರು.


ಈ ಸಂದರ್ಭದಲ್ಲಿ ಮಾತನಾಡಿದ ಹೆಂಗಳೆಯರ ಪ್ರೀತಿಯ ನಟಿ ಪಾರೂ, ಪಾರೂ ದಾರಾವಾಹಿಯ ಮುಖಾಂತರ ಪರಿಚಯಗೊಂಡ ನನ್ನನ್ನು ರಾಜ್ಯದ ಯಾವೊಂಯ ಹಳ್ಳಿಗೆ ಹೋದರೂ ಅಲ್ಲಿ ನನ್ನನ್ನು ಪಾರೂ ಹೆಸರಿನಿಂದಲೇ ಗುರುತಿಸಿ ಗೌರವಿಸಿ ಅಭಿಮಾನ ತೋರುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ತನಗಾಗುತ್ತಿರುವ ಸಂತಷವನ್ನು 

ವ್ಯಕ್ತಪಡಿಸಿದರು.


ಹೋಟೆಲ್‍ನಲ್ಲಿ ತಾನು ಬಂದಿರುವ 

ಮಾಹಿತಿ ಪಡೆದು ಬಂದ ಶಾಲಾಕಾಲೇಜು 

ವಿದ್ಯಾರ್ಥಿನಿಯರು ಹಾಗೂ ಅಭಿಮಾನಿಗಳಿಗೆ 

ಮನಸೋತ ಅವರು ಒಂದು ತಾಸಿಗೂ 

ಹೆಚ್ಚುಕಾಲ ತಾನು ಊಟ ಮಾಡುತ್ತಿದ್ದರೂ 

ಅಭಿಮಾನಿಗಳ ಆಸೆಗೆ ಪದೆಪದೆ ಎದ್ದು 

ಪೋಟೋಗೆ ಪೋಸ್ ನೀಡುತ್ತಿದ್ದರು.

ಪಾರೂ ದಾರಾವಾಹಿಯ ನಿರ್ದೇಶಕ 

ರಾಮನಗರ ಜಿಲ್ಲೆಯ ಹಾರೋಹಳ್ಳಿಯ 

ಗ್ರಾಮದವರಾದ ಗುರುಪ್ರಸಾದ್ ಈ 

ಸಂದರ್ಭದಲ್ಲಿ ಮಾತನಾಡಿ ಈಗಾಗಲೇ ೧೫ 

ದಾರಾವಾಹಿಗಳನ್ನು ನಿರ್ದೇಶನ ಮಾಡಿದ್ದು, 

ತಮಗೆ ಖ್ಯಾತಿ ತಂದುಕೊಟ್ಟ 

ದಾರಾವಾಹಿಗಳಲ್ಲಿ ರಂಗೋಲಿ ಬಿಟ್ಟರೆ 

ಪಾರೂ ದಾರಾವಾಹಿ ಒಂದು ರೀತಿಯ 

ಸಂಚಲವನ್ನೇ ಸೃಷ್ಟಿ ಮಾಡಿದೆ ಎಂದರು. ಖ್ಯಾತ ನಿರ್ದೇಶಕ, ಜನಪ್ರಿಯ ನಟ 

ಎಸ್.ನಾರಾಯಣ್‍ ರವರ ನಟನೆಯೊಂದಿಗೆ 

ಪಾರೂ ದಾರಾವಾಹಿಗೆ ಮೆರಗು ಬಂದಿದ್ದು, 

ಅದರಲ್ಲೂ ದಾರಾವಾಹಿಯ ನಿರ್ಮಾಪಕರಾದ 

ದಿಲೀಪ್‍ ರಾಜು ರವರ ಸಂಪೂರ್ಣ ಸಹಕಾರದಲ್ಲಿ 

ಪಾರೂ ರಾಜ್ಯದಲ್ಲಿ ಅಬ್ಬರದಿಂದ 

ಪ್ರದರ್ಶನಗೊಳ್ಳುತ್ತಿರುವುದು, 

ದಾರಾವಾಹಿಯ ಪ್ರತಿಯೊಬ್ಬ ಕಲಾವಿದರ 

ಹಾಗೂ ಸಿಬ್ಬಂದಿವರ್ಗದವರ ಪರಿಶ್ರಮವಿದೆ 

ಎಂದು ತಿಳಿಸಿದರು.


ನೂತನವಾಗಿ ಆಧುನಿಕರಿಸಿಕೊಂಡು 

ಗ್ರಾಹಕರಿಗೆ ರುಚಿಕಟ್ಟಾದ ಮಾಂಸಹಾರಿಯ ಖಾದ್ಯಗಳನ್ನು ನೀಡುವಲ್ಲಿ ಪ್ರಸಿದ್ದಿ ಪಡೆಯುತ್ತಿರುವ 

ಹೋಟೆಲ್ ನ್ಯೂ.ಜಿ.ಎಫ್.ಸಿಗೆ ಕೃತಜ್ಞತೆ 

ಅರ್ಪಿಸಿದ ಪಾರೂ ಚಿತ್ರ ತಂಡ, ದೇವರಹಳ್ಳಿಯಲ್ಲಿ 

ನಡೆಯುತ್ತಿರುವ ದಾರಾವಾಹಿಯ 

ಮುಂದಿನ ಚಿತ್ರೀಕರಣಕ್ಕೆ ತೆರಳಿತು.


ಈ ಸಂದರ್ಭದಲ್ಲಿ ಸಾರ್ವಜನಿಕ 

ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್  

ಎಂ.ವೇದಮೂರ್ತಿ, ಹೋಟೆಲ್ ಮಾಲೀಕ ಪುರುಷೋತ್ತಮ್ ದಂಪತಿಗಳು, ಧಾರಾವಾಹಿಯ ನಟ ಪ್ರೀತು, ನಟಿಯರಾದ 

ಪ್ರೇಮ, ಜನನಿ, ಕಾಮಿಡಿ ಕಿಲಾಡಿ ಖ್ಯಾತಿಯ 

ಅಜ್ಜಿ (ಕಲ್ಪನ), ವ್ಯವಸ್ಥಾಪಕ ದೇವರಾಜು, 

ಮಂದಿಪ್‍ರೈ, ಕ್ಯಾಮರಾ ಮನ್ 

ರಾಘವೇಂದ್ರ, ವೇದಾಂತ್, ಸಹಾಯಕ 

ನಿರ್ದೇಶಕ ಬಿ.ವಿ.ಹಳ್ಳಿ ಮಹಂತೇಶ್‍ಗೌಡ, 

ನಟ ಕೃಷ್ಣಕಾಂತ್ ಮಂಗಳವಾರಪೇಟೆಯ ಕಿರಣ್ ಹಾಗೂ ಹಲವಾರು ಮಂದಿ ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑