ತಾಳೆಯೋಲೆ ೧೭೬: ದೋಷಿಗಳ ಬಗ್ಗೆ ನಾವು ಯಾವ ವಿಧವಾಗಿ ಪ್ರವರ್ತಿಸಬೇಕು?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ
ದೋಷಿಗಳ ಬಗ್ಗೆ ನಾವು ಯಾವ ವಿಧವಾಗಿ ಪ್ರವರ್ತಿಸಬೇಕು ?
ಸಮಾಜದಲ್ಲಿ ಪಾಪಕರ್ಮದವರು ಸದಾ ಇರುವರು. ಆದರೆ ಆಧುನಿಕ ಯುಗದಲ್ಲಿ ಅವರೇ ಹೆಚ್ಚಿನದಾಗಿರುವರು. ಇಲ್ಲಿ ಪಾಪಕರ್ಮರೆಂದರೆ ಸತ್ಕರ್ಮಗಳಿಗಿಂತ ದುಷ್ಕರ್ಮಗಳನ್ನು ಹೆಚ್ಚಾಗಿ ಮಾಡುವರೆಂದು ಅರ್ಥ ಮಾಡಿಕೊಳ್ಳಬೇಕು. ಈ ರೀತಿಯ ಪಾಪಕರ್ಮದವರನ್ನು ಜನರು ದ್ವೇಷಿಸುವರು. ಇದು ಸಹಜ ! ಆದರೆ ಅವರನ್ನು ದ್ವೇಷಿಸುವುದು ಅಷ್ಟು ಬುದ್ಧಿವಂತಿಕೆಯ ವಿಧಾನವಲ್ಲ.
ಸಮಾಜದಲ್ಲಿ ಕೆಲವರು ಇದುರಿರುವರ ಬಗ್ಗೆ ತುಂಬಾ ಮರ್ಯಾದೆ ರಹಿತವಾಗಿ ಧರ್ಮಾ ಧರ್ಮಗಳ ವಿಚಕ್ಷಣೆ ಇಲ್ಲದೆ ಪ್ರವರ್ತಿಸುತ್ತಿರುತ್ತಾರೆ. *ಏಟಿಗೆ ಏಟು* ಎನ್ನುವುದು ಅವರು ನಂಬಿರುವ ಸೂತ್ರ. ಕೆಲವೊಮ್ಮೆ ಎದುರಿನವರಿಂದ ತಮಗೆ ತೊಂದರೆ ಇಲ್ಲದಿದ್ದರೂ ಅವರನ್ನು ತೊಂದರೆಪಡಿಸಿ ರಾಕ್ಷಾಸಾನಂದವನ್ನು ಹೊಂದುತ್ತಾರೆ. ಪಾಪಕೃತ್ಯಗಳನ್ನು ಮಾಡುತ್ತಿರುವವರಿಗೆ ಜನಾಧರಣೆಯ ಅಭಾವ ಆಗುವುದಲ್ಲದೆ ಬಂಧು ಮಿತ್ರರೆಲ್ಲರೂ ಸಹ ಅವರನ್ನು ನಿರಾಧರಿಸುತ್ತಾರೆ. ಆದರೆ ನಮ್ಮ ಋಷಿ ಪುಂಗವರು ಈ ರೀತಿಯಾದ ಮಾನವ ತತ್ವರಹಿತ ಕ್ಷಮಾರಹಿತ ಗುಣವನ್ನು ಖಂಡಿಸುವರು. *ದ್ವೇಷವನ್ನು ಪ್ರೇಮದಿಂದ, ಹಿಂಸೆಯನ್ನು ಅಹಿಂಸೆಯಿಂದ ಜಯಿಸಬೇಕೆಂದು* ಅವರ ಸಿದ್ದಾಂತ ಸಹನದಿಂದ ಕ್ಷಮಾಗುಣದಿಂದ ಹಾಗೂ ಬ್ರಾತೃತ್ವದಿಂದ ಪಾಪಕರ್ಮಗಳನ್ನು ಜಯಿಸಬೇಕೆಂದು ಅವಕಾಶ ಸಿಕ್ಕಿದರೆ ಅವರನ್ನು ಒಳ್ಳೆಯವರನ್ನಾಗಿ ಬದಲಾಯಿಸಬೇಕೆಂದು, ಅವಕಾಶ ಸಿಕ್ಕಿದರೆ ಅವರನ್ನು ಒಳ್ಳೆಯವರನ್ನಾಗಿ ಬದಲಾಯಿಸಬೇಕೆಂದು ನಮ್ಮ ಸಾಧುಸಂತರು ಹೇಳುವರು.
ಅಹಿಂಸೆಯನ್ನು ಸತ್ಯ ಧರ್ಮಗಳನ್ನು ಭಗವತ್ ಭಕ್ತಿಯನ್ನು ತ್ರಿಕರಣ ಶುದ್ಧಿಯಾಗಿ ಸಾಧನೆ ಮಾಡುವರೋ, ಅಂತಹ ಮಂಗಳಕರುಗಳಿಗೆ ಎಂತಹ ಕ್ರೂರ ಮೃಗವಾದರೂ ಹಾನಿ ಮಾಡುವುದಕ್ಕೆ ಸಂದೇಹಿಸಿ ಹಿಂತಿರುಗಿ ಹೋಗುತ್ತದೆ ಎನ್ನುವುದನ್ನು ನಮ್ಮ ಋಷಿಗಳು ಹೇಳಿರುವರು. ಸಮನೆ ಹಾಗೂ ಪವಿತ್ರ ಪ್ರೇಮದಿಂದ ತುಂಬಿದ ಹೃದಯವು ಅತ್ಯಂತ ಶಕ್ತಿಯುತವಾದುದು. ಇವುಗಳಿಂದ ಪ್ರಪಂಚವನ್ನೇ ಜಯಿಸಬಹುದೆಂದು ಹೇಳಲಾಗಿದೆ. ಆದ್ದರಿಂದ ಕೆಟ್ಟದ್ದನ್ನು ಒಳ್ಳೆಯತನದಿಂದ ಜಯಿಸಬೇಕೆಂಬುದು ನಮ್ಮ ಸನಾತನ ಧರ್ಮ ಭೋಧಿಸುತ್ತಿದೆ. ಆದ್ದರಿಂದ ಶಾಂತಿ ಹಾಗೂ ದಯಾಗುಣವೇ ಭಾರತೀಯರಿಗೆ ಆಭರಣಗಳಾಗಿರುವವು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು