ಗುಬ್ಬಿ ತಾಲ್ಲೂಕು ದಂಡಾಧಿಕಾರಿ ವಜಾಗೊಳಿದಸುವಂತೆ ಕಕಜವೇ ಪ್ರತಿಭಟನೆ
ಚನ್ನಪಟ್ಟಣ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ಗ್ರಾಮ ಲೆಕ್ಕಿಗ, ಕಂದಾಯಾಧಿಕಾರಿ ಮಾಡಿದ ತಪ್ಪಿಗೆ ಅಮಾಯಕ ಮಹಿಳೆಯ ನೂರಾರು ಮರಗಳನ್ನು
ಕಡಿದು ತೋಟ ನಾಶ ಮಾಡಿದ ತಹಶೀಲ್ದಾರ್ ಕ್ರಮದ ವಿರುದ್ಧ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಇಂದು ಪ್ರತಿಭಟನೆ ಕೈಗೊಂಡಿತ್ತು.
ಇಂದು ನಗರದ ಕಾವೇರಿ ವೃತ್ತದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡ ಮಾತನಾಡಿ, ಸಿದ್ದಮ್ಮ ಎಂಬ ಮಹಿಳೆಯು ಕಡುಬಡತನದವಳಾಗಿದ್ದು, ಆಕೆ ಕಷ್ಟ ಪಟ್ಟು ಬೆಳೆದ
ತೆಂಗಿನ ಮರಗಳನ್ನು, ಅಡಿಕೆ ಮರಗಳನ್ನು ನಿರ್ಧಾಕ್ಷಿಣ್ಯವಾಗಿ ನೆಲಕ್ಕುರುಳಿಸಿದ್ದು, ತಾಲೂಕು ದಂಡಾಧಿಕಾರಿ ಮತ್ತು ಕಂದಾಯ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗ ರೈತರಿಗೆ ಅನ್ಯಾಯ ಮಾಡಿದ್ದಾರೆ. ಪರಿಸರ ಕಾಳಜಿ ಇಲ್ಲದಿರುವ ಇಂತಹ ಅಧಿಕಾರಿಗಳನ್ನು ಈ ಕೂಡಲೇ ವೃತ್ತಿಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಯಡಿಯೂರಪ್ಪ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ. ರೈತರ ಬೆಳೆದ ಬೆಳೆಯನ್ನು ಅಧಿಕಾರಿಯೇ ಮುಂದೆ ನಿಂತು ಕತ್ತರಿಸಿಹಾಕಲು ಅನುವು ಮಾಡಿಕೊಟ್ಟಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದ್ದು, ಒಂದು ಮರವನ್ನು ಬೆಳೆಸಬೇಕಾದರೆ ರೈತರು ಎಷ್ಟು ಕಷ್ಟಪಡಬೇಕೆಂಬ ಅರಿವು ಇಲ್ಲಿದಿರುವ ಇಂತಹ ಅಧಿಕಾರಿಗಳನ್ನು ಈ ಕೂಡಲೇ ವೃತ್ತಿಯಿಂದ ವಜಗೊಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್, ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಂಜಿತ್ಗೌಡ, ಪದಾಧಿಕಾರಿಗಳಾದ ಮರಿಅಂಕೇಗೌಡ, ಮಾರ್ಚನಹಳ್ಳಿ ನರಸಿಂಹ, ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು