ಎಐಸಿಸಿ ಯಿಂದ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಆಯ್ಕೆ, ಕಾರ್ಯಕರ್ತರ ಸಂಭ್ರಮ
ಚನ್ನಪಟ್ಟಣ: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಕಾಂಗ್ರೆಸ್ ನ ಕಟ್ಟಾಳು ಡಿ.ಕೆ.ಶಿವಕುಮಾರ್ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಸಂಭ್ರಮಾಚರಣೆ ನಡೆಯಿತು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಒಡಗೂಡಿದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಮುಖಂಡರುಗಳು ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿದರು.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು.
ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ತಾಲೂಕು ಕಾಂಗ್ರೆಸ್ ಮುಖಂಡರುಗಳು, ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಸಾರಥ್ಯ ಸಿಕ್ಕಿರುವುದರಿಂದ ಪಕ್ಷಕ್ಕೆ ಬಲ ಬಂದಂತಾಗಿದೆ, ಪಕ್ಷ ಪರಿಣಾಮಕಾರಿಯಾಗಿ ಸಂಘಟನೆಯಾಗಲಿದ್ದು ಮುಂದೆ
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತರಲು ಅವರು ಶ್ರಮಿಸಲಿದ್ದಾರೆ, ಡಿಕೆಶಿ ಅವರು ಆಯ್ಕೆಯಾಗಿರುವುದರಿಂದ ಪಕ್ಷದಲ್ಲಿರುವ ಯುವ ಉತ್ಸಾಹಿ ಪಡೆಗೆ ಸಂಘಟನೆ ಮಾಡಲು ಆನೆಬಲ ಬಂದಂತಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರಾಗಿ ಸಧ್ಯ ಆಯ್ಕೆಯಾಗಿದ್ದು ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆಂದು ಮುಖಂಡರು ಆಶಯ ವ್ಯಕ್ತಪಡಿಸಿದರು. ಡಿಕೆಶಿ ಅವರು ಪಕ್ಷಕ್ಕೆ ದುಡಿದಿರುವುದನ್ನು ಗಂಭೀರವಾಗಿ ಪರಿಗಣಿಸಿ ಹೈಕಮಾಂಡ್ ಈ ಸ್ಥಾನ ನೀಡಿದೆ,
ರಾಜ್ಯದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಡಿಕೆಶಿ ಮುಂದಾಗಲಿದ್ದಾರೆ, ಅವರಿಗೆ ಪ್ರತಿ ತಾಲೂಕಿನ ಪ್ರತಿ ಗ್ರಾಮದಿಂದಲೂ ಸಹಕಾರ
ನೀಡುತ್ತೇವೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಶಿವಮಾದು, ಮುಖಂಡರಾದ ಪಿ.ಡಿ.ರಾಜು, ಮಲ್ಲೇಶ್, ಮಂಗಾಡಹಳ್ಳಿ ರಾಜಣ್ಣ, ಮತ್ತೀಕೆರೆ ಹನುಮಂತಯ್ಯ, ಮಂಗಳವಾರಪೇಟೆ
ನಾಗೇಂದ್ರ, ಪ್ರಮೋದ್, ನಗರಸಭೆ ಮಾಜಿ ಸದಸ್ಯ ಜಕಿ ಅಹಮ್ಮದ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಕ್ಕೂರು ಪುಟ್ಟರಾಜು, ಫಯಾಜ್, ಬಿಳಿಯಪ್ಪ
ಸೇರಿದಂತೆ ಹಲವರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು