Tel: 7676775624 | Mail: info@yellowandred.in

Language: EN KAN

    Follow us :


ತಾಳೆಯೋಲೆ ೧೮೧: ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?

Posted date: 16 Mar, 2020

Powered by:     Yellow and Red

ತಾಳೆಯೋಲೆ ೧೮೧: ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ


ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ


ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?


ಹಸಿವಿನಿಂದ ಕಂಗಾಲಾಗಿರುವವನಿಗೆ ಅನ್ನ ನೀಡುವುದನ್ನು ಅನ್ನದಾನ ಎಂದು ಹೇಳುವರು. ಅತ್ಯುನ್ನತ ದಾನಗಳಲ್ಲಿ ಅನ್ನದಾನವೂ ಒಂದು ಎಂದು ಪುರಾಣಗಳು, ಇತಿಹಾಸಗಳು ಹೇಳಿರುವವು. ಭಕ್ತರಿಗೆ ಹಾಗೂ ಅತಿಥಿಗಳಿಗೆ ಭೋಜನ ನೀಡದೆ ಮಾಡುವ ಯಾವ ಯಜ್ಞವಾದರೂ ಅದು ಅಸಂಪೂರ್ಣವೆಂದು ಹೇಳುವರು. ದೇವಾಲಯಗಳಲ್ಲಿ ಹಾಗೂ ಆಶ್ರಮಗಳಲ್ಲಿ ಅನ್ನ ದಾನ ಮಾಡುವುದು ಅನಾದಿಯಿಂದ ಬರುತ್ತಿರುವ ಆಚಾರ. ಈ ರೀತಿಯಾದ ಅನ್ನ ದಾನ ಕಾರ್ಯಕ್ರಮಗಳ ಮುಖಾಂತರ ಭಗವಂತನು ಹೆಚ್ಚಾಗಿ ಪ್ರಸನ್ನ ವಾಗುವನೆಂದು ಹೇಳಲಾಗಿದೆ.


ಭಾರತೀಯರು *ಅನ್ನವನ್ನು ಪರಬ್ರಹ್ಮದೊಂದಿಗೆ ಹೋಲಿಸುತ್ತಾ ' ಅನ್ನಂ ' ಪರಬ್ರಹ್ಮ ಸ್ವರೂಪಂ ' ಎಂದು ಭಾವಿಸಿದ್ದರು.* ಅನ್ನದ ಕಾರಣದಿಂದಾಗಿಯೇ ನಮ್ಮ ಜೀವನ ನಾಟಕ ಭೂಮಿಯ ಮೇಲೆ ಸಾಗುತ್ತಿದೆ. *ಜೀವನದಲ್ಲಿ ಒಂದು ವ್ಯಕ್ತಿಗೆ ಏನಿಲ್ಲವೆಂದರೂ ಬದುಕುಬಲ್ಲ. ಆದರೆ ಅನ್ನ ವಿಲ್ಲದಿದ್ದರೆ ಬದುಕಲಾರ.* ಆದ್ದರಿಂದ ಅನ್ನದಾನ ಮಹೋನ್ನತವಾದುದು. ಅನ್ನ ಇಲ್ಲದವನಿಗೆ ನೀಡಿದ ಅನ್ನವೇ ಅನ್ನ ದಾನವಾಗುತ್ತದೆಂದು ನಾವು ಇಲ್ಲಿ ಅರ್ಥ ಮಾಡಿಕೊಳ್ಳಬೇಕು. *ಅನ್ನ ದಾನದಲ್ಲಿ ಪಾಲ್ಗೊಂಡರೆ ಪುಣ್ಯ ಬರುತ್ತದೆಂದು, ಇರುವವನು ಸಹ ಊಟ ಮಾಡುವುದಕ್ಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವರು. ಇದು ಸರಿಯಾದುದಲ್ಲ.* *ಅನ್ನ ದಾನದಲ್ಲಿ ಅನ್ನವನ್ನು ಸ್ವೀಕರಿಸಿದ ವರು ನೆಲದ ಮೇಲೆ ಎಂಜಲು ಅಗುಳುಗಳನ್ನು ಹಾಗೂ ಊಟ ಮಾಡಿದ ಎಲೆಯನ್ನು ಆತನೇ ತೆಗೆದು ಹಾಕಬೇಕು, ಆದರೆ ಅನ್ನ ನೀಡಿದವರ ಕೈಯಲ್ಲಿ ಆ ಕೆಲಸ ಮಾಡಿಸಬಾರದು.* ಹಾಗೆಯೇ ಅನ್ನ ನೀಡಿದವರು ಈ ಕೆಲಸವನ್ನು ಮಾಡಬಾರದು , ಹಾಗೆ ಮಾಡಿದರೆ ತಿಂದವನಿಗೆ ಹಾನಿಕರ ಎಂದು ಹೇಳಲಾಗಿದೆ.*


ಇದಕ್ಕೆ ವಿರುದ್ಧವಾಗಿ ಬಂಧು ಮಿತ್ರರಿಗೆ, ಸಾಧು ಸನ್ಯಾಸಿಗಳಿಗೆ ಹಾಗೂ ಮಹಾತ್ಮರಿಗೆ ಅನ್ನ ನೀಡಿದವನು ಅವರ ಅಗಳುಗಳನ್ನು ಪಾತ್ರೆಗಳನ್ನು ಎತ್ತಿ ಹಾಕುವುದು, ತಟ್ಟೆಗಳನ್ನು ತೊಳೆಯುವುದು, ಶುಚಿ ಮಾಡುವುದು ಸರಿಯಾದುದು, ಅತಿಥಿಗಳ ಕೈಯಲ್ಲಿ ಮಾಡಿಸಿದರೆ ಅತಿಥೇಯರಿಗೆ ಹಾನಿಕರ ಎಂದು ಹೇಳಲಾಗಿದೆ.


*'ಅನ್ನವೋ ರಾಮಚಂದ್ರ " ಎನ್ನುವವರೇ ನಮ್ಮ ದೇಶದಲ್ಲಿ ಹೆಚ್ಚಿನದಾಗಿ ಇರುವರು.* ಆದ್ದರಿಂದ ಅಂತಹವರಿಗೆ ಅನ್ನ ನೀಡಲು ಹಿಂದೆ ಹೋಗ -ಬಾರದು. *ಒಂದೇ ದಿನ ಗುಂಪುಗಳಾಗಿ ಜನರನ್ನು ಕರೆದು ರಾಶಿ ರಾಶಿಯಾಗಿ ಅನ್ನ ನೀಡುವುದೇ ಅನ್ನದಾನ ಎಂದು ಭಾವಿಸಬಾರದು.* ಮೊದಲು ಮನೆಯ ಮುಂದೆ ಬಂದ ಭಿಕ್ಷುಕನಿಗೆ ಒಬ್ಬ ವ್ಯಕ್ತಿ ತಿನ್ನುವಷ್ಟು ಅನ್ನವನ್ನು ದಾನ ಮಾಡಿರಿ. ಹಾಗೆ ಮನುಷ್ಯರಿಗೆ ಅಲ್ಲದೆ ನಾಯಿಗಳು, ಕಾಗೆಗಳು, ಮಕ್ಕಳು, ಇರುವೆಗಳು, ಪಕ್ಷಿಗಳು ಮುಂತಾದ ಅನೇಕವುಗಳಿಗೂ ಸಹ ಆಹಾರ ನೀಡುವುದು ಒಂದು ಯಜ್ಞವೇ ಆಗುತ್ತದೆ. ' ಸಾಧುಗಳಿಗೆ ಭಕ್ತರಿಗೆ ಹಾಗೂ ಸಾಧಕರಿಗೆ ಊಟ ನೀಡುವುದು ಬಹಳ ಫಲಯುಕ್ತವಾದ ಕೆಲಸ.



*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑