ನಡಿಗೆಯ ಮೂಲಕ ಬಳ್ಳಾರಿ ತಲುಪುತ್ತಿರುವ ವಲಸಿಗರು. ಊಟ ವಸತಿ ಕಲ್ಪಿಸುತ್ತೇವೆ ಇರಿ ಎಂದ ಅಧಿಕಾರಿಗಳು
ಚನ್ನಪಟ್ಟಣ: ರಾಮನಗರ ಜಿಲ್ಲೆಯಲ್ಲಿ ೪ ಸಾವಿರ ಮಂದಿ ವಲಸೆ ಬಂದ ಕೂಲಿ ಕಾರ್ಮಿಕರು ನೆಲೆಸಿದ್ದು ಚನ್ನಪಟ್ಟಣ ದಲ್ಲಿ ಒಂದು ಸಾವಿರದ ಇನ್ನೂರು ಮಂದಿ ನಗರದ ಸಾತನೂರು ರಸ್ತೆಯ ಆಜೂಬಾಜಿನಲ್ಲಿ ಟೆಂಟ್ ನಿರ್ಮಿಸಿಕೊಂಡು ವಾಸವಿದ್ದರು.
ಕರೋನಾ ವೈರಸ್ ನಿಂದ ಕರ್ನಾಟಕ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ, ಇತ್ತ ಊಟಕ್ಕೂ ಪರದಾಡುವಂತಾಗಿದ್ದು ತಮ್ಮ ಊರಿಗೆ ಹಿಂದಿರುಗಲು ಹವಣಿಸುತ್ತಿದ್ದು, ಊರಿಗೆ ಕಳುಹಿಸಲು ಸಂಬಂಧಿಸಿದ ಇಲಾಖೆಗಳು ಆಸಕ್ತಿ ತೋರದ ಕಾರಣ ಈಗಾಗಲೇ ಹಲವಾರು ಮಂದಿ ಗಂಟುಮೂಟೆ ಕಟ್ಟಿಕೊಂಡು ಕಾಲ್ನಡಿಗೆಯಲ್ಲೇ ಹೊರಟಿರುವುದು ಜಿಲ್ಲಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.
೧,೨೦೦ ಮಂದಿ ಇದ್ದವರು ಕರೋನಾ ವೈರಸ್ ವಿರುದ್ಧ ಸರ್ಕಾರ ಸಮರ ಸಾರಿದ ದಿನದಂದೇ ಸ್ವಲ್ಪ ಸ್ವಲ್ಪವೇ ಮಂದಿ ಬಸ್ ಮತ್ತು ರೈಲುಗಳ ಮೂಲಕ ಹೋಗಿದ್ದು ೩೦೦ ಕ್ಕೂ ಹೆಚ್ಚು ಮಂದಿ ಮಾತ್ರ ಉಳಿದುಕೊಂಡಿದ್ದರು. ಇಂದು ಕಾರ್ಮಿಕ ಇಲಾಖೆಯ ಅಧಿಕಾರಿ ಮತ್ತು ನೀಲಸಂದ್ರ ಗ್ರಾಮ ಪಂಚಾಯತಿ ಪಿಡಿಓ ಮಾದೇಗೌಡರು ಬಂದು ಊಟದ ವ್ಯವಸ್ಥೆ ಮತ್ತು ಕಲ್ಯಾಣ ಮಂಟಪದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿ ಲೆಕ್ಕ ಹಾಕಿದಾಗ ಎಣಿಕೆಗೆ ಸಿಕ್ಕಿದ್ದು ಮಾತ್ರ ೧೫೦ ಮಂದಿ. ನಿನ್ನೆಯಿಂದೀಚೆಗೆ ೧೫೦ ಕ್ಕೂ ಹೆಚ್ಚು ಮಂದಿ ಕಾಲ್ನಡಿಗೆಯಲ್ಲೇ ಹೋದರು ಎಂಬ ಮಾಹಿತಿಯನ್ನು ಉಳಿದ ವಲಸಿಗರು ತಿಳಿಸಿದರು.
ಉಳಿದ ವಲಸಿಗರು ಇಲ್ಲಿ ಕೆಲಸವೇ ಇಲ್ಲಾ ಎಂದ ಮೇಲೆ ನಾವು ಇಲ್ಲಿ ಇರುವುದಿಲ್ಲ, ನಮಗೆ ಊಟ ವಸತಿ ಏನೂ ಬೇಡ. ನಮ್ಮ ಊರಿಗೆ ಹೋಗಲು ವಾಹನಗಳ ವ್ಯವಸ್ಥೆ ಮಾಡಿ, ಇಲ್ಲ ನಾವೇ ವಾಹನಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗುತ್ತೇವೆ. ಅನುಮತಿ ನೀಡಿ ಎಂದು ಅಧಿಕಾರಿಗಳ ಬಳಿ ಗೋಳು ತೋಡಿಕೊಂಡರು.
ನಾವು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಲಸೆ ಬಂದಿರುವ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಊಟ ಮತ್ತು ವಸತಿಯನ್ನು ಒದಗಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ.
ಈಗಾಗಲೇ ಶಿವಳ್ಳಿ ರೆಸ್ಟೋರೆಂಟ್ ನಿಂದ ಸಂಜೆಯ ಊಟಕ್ಕೆ ವ್ಯವಸ್ಥೆ ಮಾಡಿದ್ದು ಕಲ್ಯಾಣ ಮಂಟಪಕ್ಕೆ ವಾಸ್ತವ್ಯ ಬದಲಿಸುವಂತೆ ಸೂಚಿಸಲಾಗಿದೆ.
*ಮುನಿಲಿಂಗೇಗೌಡ ಲೇಬರ್ ಇನ್ಸ್ಪೆಕ್ಟರ್*
ಇಂದು ಮುಖ್ಯಮಂತ್ರಿ ಗಳು ವಲಸೆ ಬಂದಿರುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು ನಾವು ಕ್ರಮ ಕೈಗೊಳ್ಳುತ್ತಿದ್ದೆವೆ. ಕರೋನಾ ವೈರಸ್ ಇರುವುದರಿಂದ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಲು ಅನುಮತಿ ಇಲ್ಲ. ಜಿಲ್ಲಾ ಪಂಚಾಯತಿ ಸಿಇಓ ರವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುತ್ತೇನೆ.
*ಶೇಖರಪ್ಪ ಗಡದ್. ಕಟ್ಟಡ ಕಾರ್ಮಿಕ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು