ಅಗ್ನಿಶಾಮಕ ದಳದ ಜೊತೆಗೂಡಿ ಔಷಧ ಸಿಂಪಡಿಸುತ್ತಿರುವ ನಗರಸಭೆ
ಚನ್ನಪಟ್ಟಣ:ಮಾ/೩೦/೨೦/ಸೋಮವಾರ. ಕರೋನಾ (ಕೋವಿಡ್-೧೯) ವೈರಸ್ ನಿಂದ ಮುಂದಾಗುವ ತೊಂದರೆಯನ್ನು ತಪ್ಪಿಸಿಕೊಳ್ಳಲು ನಗರಸಭೆಯು ಔಷಧ ಸಿಂಪಡಣೆ ಮಾಡಲು ತಾಲ್ಲೂಕು ಅಗ್ನಿಶಾಮಕ ದಳದ ಮೊರೆ ಹೋಗಿದ್ದು ಇಂದು ನಗರದ ಜನ ವಸತಿ ಪ್ರದೇಶಗಳಲ್ಲಿ ಔಷಧವನ್ನು ಸಿಂಪಡಿಸಲಾಯಿತು.
ನಗರಸಭೆಯ ಪೌರಾಯುಕ್ತ ಶಿವನಂಕಾರಿಗೌಡ ರ ಮನವಿಗೆ ಸ್ಪಂದಿಸಿದ ಅಗ್ನಿಶಾಮಕ ಠಾಣೆಯ ಅಧಕಾರಿ ವಿಷಕಂಠಯ್ಯನವರು ನಗರಸಭೆಗೆ ವಾಹನ ಮತ್ತು ಸಿಬ್ಬಂದಿಗಳನ್ನು ಕಳುಹಿಸಿದ್ದು ನಗರದಲ್ಲಿ ಸಂಚರಿಸಿ ಸಾತನೂರು ರಸ್ತೆ ಸೇರಿದಂತೆ ಅನೇಕ ಕಡೆ ಇಕ್ಕೆಲಗಳಲ್ಲೂ ಔಷಧ ಸಿಂಪಡಿಸಿದರು.
ನಾವು ನಮ್ಮ ನಗರಸಭೆ ವತಿಯಿಂದ ದಿನನಿತ್ಯವೂ ಔಷಧ ಸಿಂಪಡಿಸುತ್ತಿದ್ದೇವೆ. ಫೈರ್ ಆಂಬುಲೆನ್ಸ್ ನಲ್ಲಿ ಸಿಂಪಡಿಸಿದರೆ ವೇಗವಾಗಿ ಹಾಗೂ ಹೆಚ್ಚಿನ ಬೀದಿಗಳಲ್ಲಿ ಸಿಂಪಡಿಸಬಹುದೆಂದು ಅಧಿಕಾರಿಗಳಿಗೆ ಮನವಿ ಮಾಡಿದ್ದು ಅವರು ಸ್ಪಂದಿಸಿ ನಮ್ಮ ಜೊತೆ ಕೈಜೋಡಿಸಿದ್ದಾರೆ.
*ಶಿವನಂಕಾರಿಗೌಡ ನಗರಸಭೆ ಪೌರಾಯುಕ್ತರು.*
ನಮ್ಮ ಅಗ್ನಿಶಾಮಕ ದಳದ ಐಜಿ ಯವರ ಆದೇಶ ಹಾಗೂ ನಗರಸಭೆಯರ ಮನವಿ ಮೇರೆಗೆ ನಾವು ವಾಹನ ಮತ್ತು ಸಿಬ್ಬಂದಿಗಳನ್ನು ನಗರದಲ್ಲಿ ಔಷಧ ಸಿಂಪಡಿಸಲು ನಿಯೋಜಿಸಿದ್ದೇವೆ. ಒಟ್ಟಾರೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕೆಲಸದಲ್ಲಿ ನಾವು ಸದಾ ಮಗ್ನರಾಗಿರುತ್ತೇವೆ.
*ಎಲ್ ವಿಷಕಂಠಯ್ಯ. ಅಗ್ನಿಶಾಮಕ ಠಾಣೆಯ ಅಧಿಕಾರಿ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು