ಸಾರ್ವಜನಿಕ ಆಸ್ಪತ್ರೆಯ ಹೊರಾಂಗಣ ಶುಚಿಗೊಳಿಸಿದ ಸಿಬ್ಬಂದಿಗಳು
ಚನ್ನಪಟ್ಟಣ:ಏ/೦೩/೨೦/ಶುಕ್ರವಾರ. ನಗರದ ಸಾರ್ವಜನಿಕ ಆಸ್ಪತ್ರೆಯ ಹೊರ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದು ಅಶುಚಿತ್ವ ಎದ್ದು ಕಾಣಿತ್ತಿತ್ತು.
ಆಸ್ಪತ್ರೆಯ ಒಳಾಂಗಣದಲ್ಲಿ ಇದ್ದ ಶುಚಿತ್ವ ಹೊರ ಆವರಣದಲ್ಲಿ ಇರಲಿಲ್ಲ.
ರಾಮನಗರ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿದ್ದ ಡಾ ವಿಜಯ ನರಸಿಂಹ ರವರು ಕಾರಣಾಂತರಗಳಿಂದ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕರಾಗಿ ಬಂದಿದ್ದು ಸದ್ಯ ಅವರೇ ನಿಂತು ಆಸ್ಪತ್ರೆಯ ಡಿ ಗ್ರೂಪ್ ನೌಕರರಿಂದ ಇಡೀ ಆಸ್ಪತ್ರೆಯ ಹೊರ ಆವರಣವನ್ನು ಶುಚಿಗೊಳಿಸಿಸಿದರು.
ಆಸ್ಪತ್ರೆಯ ಮುಂಭಾಗದಲ್ಲಿದ್ದ ದ್ವಿಚಕ್ರ ವಾಹನಗಳ ನಿಲ್ದಾಣವನ್ನು ತೆರವುಗೊಳಿಸಿ, ಹಿಂಬದಿಯಲ್ಲಿ ಅಂದರೆ ವಸತಿ ಗೃಹಗಳ ಹಿಂದೆ ತಾತ್ಕಾಲಿಕವಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಜ್ವರ ಬಂದ ರೋಗಿಗಳಿಗೆಂದೆ ವಿಶೇಷ ವಾಡ್೯ ಸಿದ್ದಪಡಿಸಿದ್ದು, ಯಾವುದೇ ರೋಗಿ ಜ್ವರ ಎಂದು ಬಂದರೆ ಇಲ್ಲಿ ತಪಾಸಣೆ ನಡೆಸಿಯೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು