Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಾದ್ಯಂತ ಸರಳವಾಗಿ ಆಚರಣೆಗೊಂಡ ಅಂಬೇಡ್ಕರ್ ಜಯಂತಿ

Posted date: 14 Apr, 2020

Powered by:     Yellow and Red

ತಾಲ್ಲೂಕಿನಾದ್ಯಂತ ಸರಳವಾಗಿ ಆಚರಣೆಗೊಂಡ ಅಂಬೇಡ್ಕರ್ ಜಯಂತಿ

ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ೧೨೯ ನೇ ಜಯಂತಿಯನ್ನು ಕೊರೊನಾ ನಡುವೆಯೂ ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಸರಳವಾಗಿ ಆಚರಿಸಲಾಯಿತು.


ನಗರದ ಗಾಂಧಿ ಭವನದ ಬಳಿ ಇತ್ತೀಚೆಗೆ ನೂತನವಾಗಿ ನಿರ್ಮಿಸಿರುವ ಡಾ ಅಂಬೇಡ್ಕರ್ ರವರ ಪುತ್ಥಳಿ ಗೆ ತಾಲ್ಲೂಕಿನ ದಲಿತ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಅಭಿಮಾನಿಗಳು ಸುಮವನ್ನು ಸಮರ್ಪಿಸಿ ಜಯಂತಿಯನ್ನು ಆಚರಿಸಿದರು.


ವೀರೇಗೌಡನದೊಡ್ಡಿ (ಅಂಬೇಡ್ಕರ್ ನಗರ) ಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಶಾರದಾ ನಾಗೇಶ್ ರವರ ನೇತೃತ್ವದಲ್ಲಿ ಸಹೋದ್ಯೋಗಿಗಳು ಮತ್ತು ಶಾಲೆಯ ಮುಂಭಾಗವಿರುವ ಅಂಬೇಡ್ಕರ್ ಫಲಕವನ್ನು ಗ್ರಾಮದ ಯುವಕರು ಶೃಂಗರಿಸುವ ಮೂಲಕ ಜಯಂತಿಯನ್ನು ಆಚರಿಸಿದರು.


ನೀಲಕಂಠನಹಳ್ಳಿ, ಹರಿಸಂದ್ರ, ನೀಲಸಂದ್ರ, ಎಲೆಕೇರಿ ಗ್ರಾಮ  ಮತ್ತು ಕೂಡ್ಲೂರು ಗ್ರಾಮಗಳಲ್ಲಿ ದಲಿತ ಯುವಕರು ತಂತಮ್ಮ ಮನೆಯ ಮುಂದೆಯೇ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಿ ಅಭಿಮಾನ ಮೆರೆದರು.


ತಾಲ್ಲೂಕು ಕಛೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಸರಳ ಜಯಂತಿಯಲ್ಲಿ ತಹಶಿಲ್ದಾರ್ ಸುದರ್ಶನ್ ರವರು ಅಂಬೇಡ್ಕರ್ ತತ್ವಾದರ್ಶಗಳು ಮತ್ತು ಕೋವಿಡ್-೧೯ ಬಗ್ಗೆ ಹೇಗೆ ಸುರಕ್ಷಿತರಾಗಿರಬೇಕೆಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಹಾಜರಿದ್ದ ಅಧಿಕಾರಿಗಳು ಮತ್ತು ನೌಕರರು ಸರಳವಾಗಿ ಜಯಂತಿಯನ್ನು ಆಚರಿಸಿದ್ದಾಗಿ ತಿಳಿದು ಬಂದಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑