ಹೆಚ್ಚಿನ ಬೆಲೆಗೆ ದಿನಸಿ ಮಾರಾಟ, ಕೋಡಂಬಳ್ಳಿ ಗ್ರಾಮದ ಆರು ಅಂಗಡಿಗಳಿಗೆ ನೋಟೀಸ್ ಜಾರಿ ತಹಶಿಲ್ದಾರ್
ಚನ್ನಪಟ್ಟಣ:ಏ/೧೪/೨೦/ಮಂಗಳವಾರ. ಮಾರಾಟದ ಬೆಲೆಗಿಂತ ಹೆಚ್ಚು ಬೆಲೆಗೆ ದಿನಸಿ ಪದಾರ್ಥಗಳನ್ನು ಮಾರುತ್ತಿದ್ದ ಕೋಡಂಬಳ್ಳಿ ಗ್ರಾಮದ ಆರು ಅಂಗಡಿಗಳ ಮೇಲೆ ದಾಳಿ ನಡೆಸಿದ ತಹಶಿಲ್ದಾರ್ ಸುದರ್ಶನ್ ರವರು ಸ್ಥಳದಲ್ಲಿಯೇ ಎರಡು ಅಂಗಡಿಗಳನ್ನು ಮುಚ್ಚಿಸಿದ್ದು ಉಳಿದ ಅಂಗಡಿಗಳಿಗೆ ಇಂದು ನೋಟೀಸ್ ನೀಡುವುದಾಗಿ ತಿಳಿಸಿದ್ದಾರೆ.
ಅಂಗಡಿಗಳಿಗೆ ತಂದಿರುವ ಪದಾರ್ಥಗಳ ಚೀಟಿಯನ್ನು (Purchase Bill) ಯಾರೂ ಕೂಡ ಕೊಡಲು ಮುಂದಾಗದಿರಿವುದರಿಂದ, ಅವರು ಗ್ರಾಹಕರಿಗೆ ಸದ್ಯ ಮಾರುತ್ತಿದ್ದ ಚೀಟಿಗಳನ್ನು ಪಡೆದು ಪರೀಕ್ಷೀಸಿ ಎಂ ಅರ್ ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರುತ್ತಿರುವುದು ದೃಢಪಟ್ಟಿರುವುದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದರು.
ಮೂರು ಅಂಗಡಿಗಳಿಗೆ ಗ್ರಾಮ ಪಂಚಾಯತಿ ಯಿಂದಾಗಲಿ, ಎಪಿಎಂಸಿ ಇಲಾಖೆಯಿಂದಾಗಲಿ, ವ್ಯಾಪಾರಕ್ಕೆ ಅನುಮತಿ (Licence) ಪಡೆಯದೇ ಅಂಗಡಿ ನಡೆಸುತ್ತಿದ್ದು, ಆ ಅಂಗಡಿಗಳ ಮಾಲೀಕರ ಮೇಲೆ ಕ್ರಮ ಜರುಗಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು