ಮಾಲೀಕನಿಂದಲೇ ೧೧೬೭ ಲೀಟರ್ ಮದ್ಯ ಕಳವು, ರವಿಚಂದ್ರ ವೈನ್ ಸ್ಟೋರ್ ಮೇಲೆ ದಾಳಿ ಮಾಡಿದ ತಹಶಿಲ್ದಾರ್ ಮತ್ತು ತಂಡ
ಚನ್ನಪಟ್ಟಣ:ಏ/೧೫/೨೦/ಬುಧವಾರ. ನಗರದ ಹೆದ್ದಾರಿಯ ಕುಡಿನೀರು ಕಟ್ಟೆಯ ಬಳಿ ಇರುವ ಆಶ್ರಯ ಹೋಟೆಲ್ ಹಾಗೂ ರವಿಚಂದ್ರ ವೈನ್ ಸ್ಟೋರ್ ನಲ್ಲಿ ಲಾಕ್ ಡೌನ್ ಆದ ನಂತರ ಇದ್ದ ದಾಸ್ತಾನನ್ನು ಮಾಲೀಕರೇ ಕದ್ದು ಮಾರಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ತಾಲ್ಲೂಕು ದಂಡಾಧಿಕಾರಿ ಸುದರ್ಶನ್ ರವರ ನೇತೃತ್ವದಲ್ಲಿ ದಾಳಿ ನಡೆಸಿದರು.
*ಮದ್ಯ ೪೮೭ (೪೮೭÷೬೫೦ಮಿಲಿ=೬೫೦ ಬಾಟಲ್) ಬಿಯರ್ ೬೮೦ ಲೀಟರ್ (೬೮೦÷೨೦೪೭ ಬಾಟಲ್) ಮದ್ಯದಲ್ಲಿ ವಿಸ್ಕಿ ೪೬೦ ಲೀಟರ್, ಬ್ರಾಂದಿ ೨೦ ಲೀಟರ್, ರಮ್ ೦೫ ಲೀಟರ್ ವೊಡ್ಕಾ ೦೨ ಲೀಟರ್ ಸೇರಿ ೪೮೭ ಲೀಟರ್ ಆಗಿದ್ದು, ಬಿಯರ್ ನಲ್ಲಿ ಕಿಂಗ್ ಫಿಶರ್, ಯುಬಿ, ಟ್ಯುಬಗ್೯ ಸೇರಿದಂತೆ ಅನೇಕ ರೀತಿಯ ೬೮೦ ಲೀಟರ್ ಬಿಯರನ್ನು ವಶಪಡಿಸಿಕೊಳ್ಳಲಾಗಿದೆ.*
ಲಾಕ್ ಡೌನ್ ಮಾಡಿದಾಗ ಅಬಕಾರಿ ಇಲಾಖೆಯ ಅಧಿಕಾರಿಗಳು ಅಂಗಡಿಯಲ್ಲಿ ಉಳಿದಿದ್ದ ಸ್ಟಾಕ್ ನ ಮಾಹಿತಿ ಪಡೆದು, ಸೀಲು ಮಾಡಿದ್ದು, ನಂತರ ಹಿಂದಿನ ಗೋಡೆ ಕೊರೆದು ಬಹುತೇಕ ಪೂರ್ಣ ಬಾಟಲ್ ಗಳನ್ನು ಕದ್ದು ಮಾರಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇಲಾಖೆಯ ಸಹಯೋಗದೊಂದಿಗೆ ಬಾಗಿಲು ತೆಗೆಸಿ ಮಹಜರು ಮಾಡಿಸಿದ್ದರು.
ರವಿಚಂದ್ರ ವೈನ್ ಸ್ಟೋರ್ ಗೆ ಹೊಂದಿಕೊಂಡಂತೆ ಅವರದೇ ಮಾಲೀಕತ್ವದ ಆಶ್ರಯ ಹೋಟೆಲ್ ಇದ್ದು, ಇವೆರಡರ ನಡುವೆ ಸುರಂಗ ಮಾರ್ಗದಂತಹ ಮೆಟ್ಟಿಲುಗಳ ಮೂಲಕ ನುಗ್ಗಿ ಹಿಂಬದಿಯ ಗೋಡೆಯನ್ನು ಕೊರೆದು ಮಾಲುಗಳನ್ನು ಕದ್ದೊಯ್ದಿರುವುದು ಸ್ಪಷ್ಟವಾಗಿದ್ದು, ಸಂಪೂರ್ಣವಾಗಿ ಎಲ್ಲವನ್ನೂ ವೀಕ್ಷಿಸಿದ ನಂತರವೇ ಉಳಿಕೆ ಮಾಲುಗಳ ಲೆಕ್ಕ ತೆಗೆದುಕೊಳ್ಳಲು ಮುಂದಾದರು.
ಅಂಗಡಿಗೆ ಸಿ ಸಿ ಟಿವಿ ಅಳವಡಿಸಿದ್ದು, ಅದನ್ನು ಪರೀಕ್ಷಿಸಿಸಲು ಮುಂದಾದಾಗ, ಡಿವಿಆರ್ ನ ಕೀ ನಮ್ಮ ಬಳಿ ಇಲ್ಲಾ ಎಂದು ಒಮ್ಮೆ, ಆ ಕೀಯನ್ನು ಕ್ಯಾಷಿಯರ್ ಒಬ್ಬ ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದಾನೆ ಎಂದು ಮತ್ತೊಮ್ಮೆ, ಅದು ಲಾಕ್ ಡೌನ್ ಮುಂಚೆಯೇ ಕೆಟ್ಟು ಹೋಗಿದೆಯೆಂದು ಇನ್ನೊಮ್ಮೆ ಸಬೂಬು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಬೀಗವನ್ನು ಒಡೆದು ಡಿವಿಆರ್ ವಶಪಡಿಸಿಕೊಳ್ಳಲು ಮುಂದಾದಾಗ ಡಿವಿಆರ್ ಇಲ್ಲದ್ದನ್ನು ಗಮನಿಸಿ ಕೇಳಿದಾಗ ರಿಪೇರಿಗೆ ಕೊಟ್ಟಿರುವುದಾಗಿ ಸಬೂಬು ಹೇಳಿ ನುಣುಚಿಕೊಂಡರು.
*ತಹಶಿಲ್ದಾರ್ ಸುದರ್ಶನ್ ರವರು ಮಾತನಾಡಿ ಅಬಕಾರಿ ಇಲಾಖೆ ಮತ್ತು ಪೋಲೀಸ್ ಇಲಾಖೆ ಎರಡರಲ್ಲೂ ೧೮೮ ಮತ್ತು ೨೭೦ ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲು ಸೂಚಿಸಿದ್ದು, ಲೈಸೆನ್ಸ್ ರದ್ದುಗೊಳಿಸುವಂತೆ ಮೇಲಿನ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.*
*ಯಾವುದೇ ಅನುಮಾನ ಬಂದರು ದಯದಾಕ್ಷಿಣ್ಯ ಇಲ್ಲದೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಇಂದಿನ ವೈನ್ ಸ್ಟೋರ್ ದಾಳಿ ಎಲ್ಲಾ ಅಕ್ರಮ ಮಾರಾಟಗಾರರಿಗೂ ಎಚ್ಚರಿಕೆ ಯ ಗಂಟೆಯಾಗಿದೆ ಎಂದು ಪೋಲೀಸ್ ಉಪ ಅಧೀಕ್ಷಕ ಓಂಪ್ರಕಾಶ್ ತಿಳಿಸಿದರು.*
*ಅಬಕಾರಿ ಜಿಲ್ಲಾ ಉಪ ಅಧೀಕ್ಷಕ ಹಿರೇಮಠ ಮಾತನಾಡಿ ರವಿಚಂದ್ರ ವೈನ್ ನ ಮಾಲೀಕರು ಸೇರಿದಂತೆ ನಾಲ್ಕು ಸಿಬ್ಬಂದಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಸನ್ನದುದಾರರ ಲೈಸೆನ್ಸ್ ನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.*
ದಾಳಿಯ ಸಮಯದಲ್ಲಿ ಪೋಲೀಸ್ ಉಪ ಅಧೀಕ್ಷಕ ಓಂಪ್ರಕಾಶ್, ವೃತ್ತ ನಿರೀಕ್ಷಕ ಗೋವಿಂದರಾಜು, ನಿರೀಕ್ಷಕ ಪ್ರಕಾಶ್, ಅಬಕಾರಿ ವೃತ್ತ ನಿರೀಕ್ಷಕರಾದ ಸುನೀಲ್, ರಾಮನಗರ ವೃತ್ತ ನಿರೀಕ್ಷಕರಾದ ಚಂದ್ರಶೇಖರ್, ಕಂದಾಯ ನಿರೀಕ್ಷಕ ಕಾಂತರಾಜು, ಗ್ರಾಮ ಲೆಕ್ಕಾಧಿಕಾರಿ ಮಂಜು ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು