Tel: 7676775624 | Mail: info@yellowandred.in

Language: EN KAN

    Follow us :


ಪಬ್ಲಿಕ್ ಟಿವಿ ರಾಮನಗರ ಜಿಲ್ಲಾ ಪ್ರತಿನಿಧಿ ಹನುಮಂತು ಅಪಘಾತದಿಂದ ನಿಧನ

Posted date: 21 Apr, 2020

Powered by:     Yellow and Red

ಪಬ್ಲಿಕ್ ಟಿವಿ ರಾಮನಗರ ಜಿಲ್ಲಾ ಪ್ರತಿನಿಧಿ ಹನುಮಂತು ಅಪಘಾತದಿಂದ ನಿಧನ

ರಾಮನಗರ:ಏ/೨೧/೨೦/ಮಂಗಳವಾರ. ಪಬ್ಲಿಕ್ ಟಿ ವಿ ಯ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿದ್ದ ಹನುಮಂತು ಜಿಲ್ಲಾ ಕಾರಾಗೃಹ ಬಳಿ ಇಂದು ವರದಿ ಮಾಡುತಿದ್ದ ವೇಳೆ ಅಪಘಾತ ಸಂಭವಿಸಿ ಮೃತ ಪಟ್ಟಿದ್ದಾರೆ.


ಜಿಲ್ಲಾ ಕಾರಾಗೃಹದಲ್ಲಿದ್ದ ೧೭೭ ಮಂದಿ ಖೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿ, ಬೆಂಗಳೂರಿನ ಪಾದರಾಯನಪುರ ದಲ್ಲಿ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಪೋಲೀಸರ ಮೇಲೆ ದಾಳಿ ಮಾಡಿದ್ದ ೫೪ ದುಷ್ಕರ್ಮಿಗಳನ್ನು ಜೈಲಿನಲ್ಲಿಯೇ ಕ್ವಾರಂಟೈನ್ ಮಾಡುವ ಸರ್ಕಾರದ ಉದ್ದೇಶಿತ ಸುದ್ದಿಯನ್ನು ಮಾಡುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.


ಕಾರಾಗೃಹದಿಂದ ರಸ್ತೆಗೆ ಬರುವ ವೇಳೆ ಹಿಂದಿನಿಂದ ಬಂದ ಎಟಿಎಂ (ಬ್ಯಾಂಕ್ ಎಟಿಎಂ ಗಳಿಗೆ ಹಣ ತುಂಬಿಸುವ) ವಾಹನವು ಢಿಕ್ಕಿ ಹೊಡೆದ ರಭಸಕ್ಕೆ ಹನುಮಂತು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತರು ಕನಕಪುರ ಮೂಲದವರಾಗಿದ್ದು, ಪತ್ನಿ ಮತ್ತು ಚಿಕ್ಕ ಮಗು, ತಂದೆ ತಾಯಿ ಮತ್ತು ಬಂಧುಗಳನ್ನು ಅಗಲಿದ್ದಾರೆ.


ರಾಮನಗರ ಜಿಲ್ಲೆಯ ಎಲ್ಲಾ ಪತ್ರಕರ್ತರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑