Tel: 7676775624 | Mail: info@yellowandred.in

Language: EN KAN

    Follow us :


ಹಳ್ಳಿಗಾಡಿನ ರೈತ ಸಮುದಾಯಕ್ಕೆ ಕುವೆಂಪುರವರು ನೀಡಿದ ಕೊಡುಗೆಯೇ ಮಂತ್ರಮಾಂಗಲ್ಯ ಎಂ ರಾಮು

Posted date: 27 Apr, 2020

Powered by:     Yellow and Red

ಹಳ್ಳಿಗಾಡಿನ ರೈತ ಸಮುದಾಯಕ್ಕೆ ಕುವೆಂಪುರವರು ನೀಡಿದ ಕೊಡುಗೆಯೇ ಮಂತ್ರಮಾಂಗಲ್ಯ ಎಂ ರಾಮು

ಚನ್ನಪಟ್ಟಣ.ಏ.೨೭: ನೆನ್ನೆ ಇಲ್ಲಿನ ಗುಡ್ಡೆ ತಿಮ್ಮಸಂದ್ರದಲ್ಲಿ ಕುವೆಂಪುರವರ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಒಂದು ಸರಳ ಮದುವೆ ಜರುಗಿತು.

 ವರ, ಚನ್ನಪಟ್ಟಣ ತಾಲ್ಲೂಕಿನ ಗೌಡನಗೆರೆ ಗ್ರಾಮದ ಶ್ರೀಮತಿ ಗೌರಮ್ಮ, ತಿಮ್ಮೇಗೌಡರ ಮಗ ಸಿದ್ದರಾಮು.

ವಧು, ಇದೇ ತಾಲ್ಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದ, ಶ್ರೀಮತಿ ರಾಧಮ್ಮ ಲೇ|| ಪುಟ್ಟಸ್ವಾಮಿಗೌಡರ ಪುತ್ರಿ ರಕ್ಷಿತಾ.

ಇವರುಗಳ ಸರಳ ವಿವಾಹವನ್ನು ಕುರಿತು ಮಾತನಾಡಿದ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷರಾದ ಎಂ.ರಾಮು, ಹಳ್ಳಿಗಾಡಿನ ರೈತ ಸಮುದಾಯಕ್ಕೆ ಕುವೆಂಪುರವರು ನೀಡಿದ ಕೊಡುಗೆ ಇದಾಗಿದ್ದು, ಅವರ ಮಂತ್ರ ಮಾಂಗಲ್ಯದ ಮಾದರಿಯ ಮದುವೆ ಮಾಡಿಕೊಂಡು ಹಲವು ಜನ ಈಗ ಸುಖೀಜೀವನ ನಡೆಸುತ್ತಿದ್ದಾರೆ ಎಂದರು.


ರಾಮನಗರ ಜಿಲ್ಲಾ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷರಾದ ಕೆ.ಮಲ್ಲಯ್ಯ ಮಾತನಾಡಿ, ರೈತ ಸಂಘದ ಅಡಿಯಲ್ಲಿ ಇಂತಹ ಸಾವಿರಾರು ಮದುವೆಗಳು ನಡೆಯುತ್ತಿದ್ದು ಇವು ಎಲ್ಲಾ ರೀತಿಯಲ್ಲಿಯೂ ಉಪಯುಕ್ತವಾಗಿವೆ ಎಂದರು.

ವಿವಾಹ ಸಂಹಿತೆಯನ್ನು ಬೋಧನೆ ಮಾಡಿದ ಪತ್ರಕರ್ತ ಸು.ತ ರಾಮೇಗೌಡ, ಕುವೆಂಪುರವರೇ ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಯವರ ಅಂತರ್ ಜಾತಿ ಮದುವೆಯನ್ನು ಮಾಡಿದ್ದರು, ಅವರ ಬದುಕು ಹಾಲು ಜೇನಿನಂತೆ ಇತ್ತು ಎಂದು, ಗೊತ್ತಿಲ್ಲದ ಶಾಸ್ತ್ರ ಕಂದಚಾರಗಳನ್ನು ಹೊರತುಪಡಿಸಿ ತಮಗೆ ಅನ್ನಿಸಿದಂತೆ ಈ ರೀತಿಯ ಮದುವೆ ಮಾಡಿಕೊಂಡು ಹೊಂದಾಣಿಕೆಯ ಬದುಕು ನಡೆಸಿ, ಸಮಾಜಕ್ಕೆ ಈ ಜೋಡಿ ಮಾದರಿಯಾಗಿದೆ ಎಂದರು.


ಸಂದರ್ಭದಲ್ಲಿ ರೈತ ಸಂಘದ ಕೆಲವೇ ಕೆಲವರು ಭಾಗವಹಿಸಿದ್ದರು. ವಧೂ ವರರ ಕಡೆಯವರೂ ಸಹ ಸೀಮಿತ ಸಂಖ್ಯೆಯಲ್ಲಿದ್ದರು.

ಕೊರೊನಾ ಕಾಟ ಇದ್ದು ಆದಷ್ಟೂ ಅಂತರ ಕಾಯ್ದುಕೊಂಡಿದ್ದೂ ಸಹ ವಿಶೇಷವಾಗಿತ್ತು. ಬಂದಿದ್ದವರು ಒಬ್ಬೊಬ್ಬರಾಗಿಯೇ ಬಂದು ಆಶೀರ್ವದಿಸಿದರು.


*ಅಧಿಕಾರಿಗಳ ಸರಳ ವಿವಾಹ*


ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳಿಬ್ಬರು ಸರಳವಾಗಿ ಮದುವೆ ಮಾಡಿಕೊಂಡು ಉಳ್ಳವರಿಗೆ ಮಾದರಿಯಾದರು.


ನಗರದ ಮಂಗಳವಾರಪೇಟೆ ಯ ಕಂಬೇಗೌಡ ರ ಕುಟುಂಬದ ಪಶು ವೈದ್ಯೆ ಡಾ ಪಿ ರಕ್ಷಿತಾ ರವರು ದೊಡ್ಡರಸನಕೆರೆ ಗ್ರಾಮದಲ್ಲಿ ಸೇವೇ ಸಲ್ಲಿಸುತ್ತಿದ್ದು, ಮಂಡ್ಯ ಜಿಲ್ಲೆ/ತಾಲ್ಲೂಕಿನ ಜವನೇಗೌಡನದೊಡ್ಡಿಯ ಎಂಎಸ್ಸಿ, ಪಿಹೆಚ್‌ಡಿ ಪದವೀಧರ ಡಾ ಬೊಮ್ಮೇಶ್ ರವರು ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಸಹಾಯಕ ತೋಟಗಾರಿಕಾ ಇಲಾಖೆಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.


ಮಂಡ್ಯ ಜಿಲ್ಲೆಯ ಬಿ ಎರಹಳ್ಳಿ ಗ್ರಾಮದ ಶ್ರೀ ಬೊಮ್ಮಲಿಂಗೇಶ್ವರ ದೇವಾಲಯದಲ್ಲಿ‌ ಸರಳ ಮದುವೆಯಾಗುವುದರ ಮೂಲಕ ಅದ್ದೂರಿತನಕ್ಕೆ ಸೆಡ್ಡು ಹೊಡೆದು ಸರಳ ವಿವಾಹವಾಗಿದ್ದು ಇಂದಿನ ಅದ್ದೂರಿ ಮದುವೆಯಾಗುವ ಜೋಡಿಗಳಿಗೆ ಮಾದರಿಯಾದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑