ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ೨,೦೦೦ ರೂ.ಗಳ ಸಹಾಯಧನದ ನೆರವು
ರಾಮನಗರ:ಏ/೨೮/೨೦/ಮಂಗಳವಾರ. ಕೊರೊನಾ (ಕೋವಿಡ್-೧೯) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರವು ಲಾಕ್ಡೌನ್ ಘೋಷಿಸಿರುವುದರಿಂದ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳಾಗಿ ಈಗಾಗಲೇ ನೋಂದಾಯಿತರಾಗಿರುವ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಅವರ ಅವಶ್ಯಕ ಜೀವನ ನಿರ್ವಹಣೆಗಾಗಿ ರೂ.೨,೦೦೦/-ಗಳ ಸಹಾಯಧನವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ನೋಂದಾಯಿತರಾಗಿರುವ ಎಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ತಮ್ಮ ಖಾತೆಗಳಿಗೆ ರೂ.೨,೦೦೦/-ಜಮೆಯಾಗಿರುವ ಕುರಿತು ಪರಿಶೀಲಿಸಿಕೊಳ್ಳಬಹುದಾಗಿದೆ. ರೂ.೨,೦೦೦/- ಜಮೆಯಾಗದಿರುವ ನೋಂದಾಯಿತ ಕಟ್ಟಡ ಕಾರ್ಮಿಕರು ಮಾತ್ರ ತಮ್ಮ ಹೆಸರು, ಇಲಾಖೆಯಿಂದ ಪಡೆದಿರುವ ಗುರುತಿನ ಚೀಟಿಯ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ. ಶಾಖೆಯ ಹೆಸರು, ಐಎಫ್ಎಸ್ಸಿ ಕೋಡ್ ಮತ್ತು ಆಧಾರ್ ಸಂಖ್ಯೆಯನ್ನೊಳಗೊಂಡ ಪೂರ್ಣ ವಿವರಗಳನ್ನು ಕೂಡಲೇ ಆಯಾಯ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಮತ್ತು ಅವರ ಕಛೇರಿ ಸಿಬ್ಬಂದಿಗಳ ವಾಟ್ಸ್ಆಪ್ (Whಚಿಣsಚಿಠಿಠಿ) ನಂಬರ್ಗಳಿಗೆ ಕಳುಹಿಸಿಕೊಡಲು ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ರಾಮನಗರ ಜಿಲ್ಲೆ, ರಾಮನಗರ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗೆ ರಾಮನಗರ ತಾಲ್ಲೂಕಿಗೆ ಯು. ಯತೀಶ್ಕುಮಾರ್, ಕಾರ್ಮಿಕ ನಿರೀಕ್ಷಕರು ಮೊ.ನಂ. ೮೧೨೩೯೦೯೪೯೦ ಹಾಗೂ ಸಿ.ಪಿ. ಮೋಹನ್ ಕುಮಾರ್, ಕಛೇರಿ ಸಿಬ್ಬಂದಿ ಮೊ.ನಂ. ೯೬೬೩೭೦೩೫೭೭, ಚನ್ನಪಟ್ಟಣ ತಾಲ್ಲೂಕಿಗೆ ಮುನಿಲಿಂಗೇಗೌಡ ಬಿ. ಟಿ. ಕಾರ್ಮಿಕ ನಿರೀಕ್ಷಕರು ಮೊ.ನಂ. ೭೦೧೯೪೬೭೩೯೩ ಹಾಗೂ ಅನಂತಲಕ್ಷ್ಮಿ, ಡಿ.ಇ.ಒ, ಕಛೇರಿ ಸಿಬ್ಬಂದಿ ಮೊ.ನಂ. ೯೬೧೧೧೬೦೫೭೬. ಕನಕಪುರ ತಾಲ್ಲೂಕಿಗೆ ಮಂಜುನಾಥ್ .ಎ, ಕಾರ್ಮಿಕ ನಿರೀಕ್ಷಕರು ಮೊ.ನಂ. ೯೪೪೯೨೪೯೫೩೫, ಯು. ಯತೀಶ್ ಕುಮಾರ್, ಕಾರ್ಮಿಕ ನಿರೀಕ್ಷಕರು (ಪ್ರಭಾರ) ಮೊ.ನಂ. ೮೧೨೩೯೦೯೪೯೦ ಹಾಗೂ ಮುತ್ತುರಾಜ್ .ಹೆಚ್, ಕಛೇರಿ ಸಿಬ್ಬಂದಿ ಮೊ.ನಂ. ೯೯೮೦೪೦೮೫೪೩ ಹಾಗೂ ಮಾಗಡಿ ತಾಲ್ಲೂಕಿಗೆ ಮುನಿಲಿಂಗೇಗೌಡ ಬಿ. ಟಿ. ಕಾರ್ಮಿಕ ನಿರೀಕ್ಷಕರು, (ಪ್ರಭಾರ) ಮೊ.ನಂ. ೭೦೧೯೪೬೭೩೯೩ ಅಥವಾ ಶಶಿಕಾಂತ್, ಕಛೇರಿ ಸಿಬ್ಬಂದಿ ಮೊ.ನಂ. ೯೮೪೪೯೯೮೪೬೧ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು