ಜಾನಪದ ಪರಿಷತ್ತು, ಚಂದ್ರು ಡಯಾಗ್ನೋಷ್ಟಿಕ್ ಮತ್ತು ಮಾತೃಭೂಮಿ ಫೌಂಡೇಶನ್ ವತಿಯಿಂದ ಆಯ್ದ ಕುಶಲಕರ್ಮಿಗಳಿಗೆ ಅಹಾರ ಕಿಟ್ ವಿರಣೆ
ಚನ್ನಪಟ್ಟಣ:ಮೇ/೦೧/೨೦/ಶುಕ್ರವಾರ. ರಾಮನಗರ ಜಿಲ್ಲಾ ಜಾನಪದ ಪರಿಷತ್ತು, ಚಂದ್ರು ಡಯಾಗ್ನೋಷ್ಟಿಕ್ ಹಾಗೂ ಮಾತೃಭೂಮಿ ಸೇವಾ ಫೌಂಡೇಷನ್ ಇವರುಗಳ ವತಿಯಿಂದ ತಾಲ್ಲೂಕಿನ ಕೂಡ್ಲೂರು, ಮಳೂರು ಪಟ್ಟಣ, ಸುಳ್ಳೇರಿ ಗ್ರಾಮಗಳ ಸವಿತಾ ಸಮಾಜದವರು, ಮಡಿವಾಳರು ಹಾಗೂ ಇತರೆ ಸಮುದಾಯದ ೨೦ ಕುಶಲಕರ್ಮಿಗಳ ಕುಟುಂಬಗಳಿಗೆ ಆಹಾರ ದಾನ್ಯದ ಕಿಟ್ಗಳನ್ನು ವಿತರಿಸಲಾಯಿತು.
ಈ ಕಿಟ್ನಲ್ಲಿ ೫ ಕೆ.ಜಿ ಅಕ್ಕಿ, ಅಡುಗೆಗೆ ಉಪಯುಕ್ತವಾದ ಅಡುಗೆ ಎಣ್ಣೆ, ಬೇಳೆ, ಸಾಬೂನು, ಈರುಳ್ಳಿ ಸೇರಿದಂತೆ ಹಲವು ವಸ್ತುಗಳ ಕಿಟ್ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರು ಡಯಾಗ್ನೋಸ್ಟಿಕ್ನ ವಿ.ಸಿ ಚಂದ್ರೇಗೌಡ, ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಸು.ತ. ರಾಮೇಗೌಡ, ಮಾತೃಭೂಮಿ ಸೇವಾ ಫೌಂಡೇಷನ್ನ ಮಹೇಶ್ ಗುರೂಜಿ ಹಾಗೂ ಚನ್ನಪಟ್ಟಣ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಗೊ.ರಾ ಶ್ರೀನಿವಾಸ್ ಅವರುಗಳು ಕುಶಲಕರ್ಮಿಗಳ ಮನೆ ಮನೆಗೆ ತೆರಳಿ ಆಹಾರ ಕಿಟ್ಗಳನ್ನು ವಿತರಿಸಿದರು.
ಸಂದರ್ಭದಲ್ಲಿ ಗ್ರಾಮಸ್ಥರು ಸಹಕರಿಸಿದರು. ಕೆಲವರು ಸಂತ್ರಸ್ತರಿಗೆ ಸಿದ್ದಪಡಿಸಿದ ಆಹಾರ ಕೊಟ್ಟರೆ, ಮತ್ತೆ ಕೆಲವರು ತರಕಾರಿಯನ್ನು ಸರಬರಾಜು ಮಾಡುತ್ತಿದ್ದಾರೆ, ಇಂತಹ ವಿತರಣೆಯ ಮಧ್ಯೆ ಕುಶಲಕರ್ಮಿಗಳಿಗೆ ಈ ರೀತಿಯ ಸಹಾಯ ಮಾಡುವ ಆಲೋಚನೆಯನ್ನು ಉಭಯತ್ರರರು ಮಾಡಿ ಈ ಒಂದು ಕೆಲಸವನ್ನು ಪೂರೈಸಿದ್ದಾರೆ. ಇದರಲ್ಲಿ ಮೊದಲೇ ಪಟ್ಟಿ ಸಿದ್ದಪಡಿಸಿಕೊಂಡು ಅರ್ಹರಿಗೆ ವಿತರಿಸಿದ್ದು ವಿಶೇಷವಾಗಿತ್ತು.
ಗೋ ರಾ ಶ್ರೀನಿವಾಸ...
ಮೊ:9845856139
ಪ್ರತಿಕ್ರಿಯೆಗಳು