ಟ್ಯಾಂಕರ್ ಉರುಳಿ ನೊರೆ ಹಾಲು ಧರೆಗೆ
ಮಾಗಡಿ:ಮೇ/೦೨/೨೦/ಶನಿವಾರ. ನೆನ್ನೆ ಮಧ್ಯಾಹ್ನ ೦೧ ಗಂಟೆ ಸಮಯದಲ್ಲಿ ೨೬ ಸಾವಿರ ಲೀಟರ್ ಹಾಲು ತುಂಬಿದ ಟ್ಯಾಂಕರ್ ರಾಮನಗರ ರಸ್ತೆಯ ಗೊಲ್ಲರದೊಡ್ಡಿಯ ಬಂಡೆಗುಡಿ ತಿರುವಿನಲ್ಲಿ ಚಲಿಸುವಾಗ ವಾಹನದ ಬ್ಲೇಡ್ ತುಂಡಾಗಿ ಉರುಳಿಬಿದ್ದಿದ್ದು ಸಂಪೂರ್ಣ ಹಾಲು ಧರೆಗೆ ಸೇರಿದೆ.
ಮಾಗಡಿ ತಾಲೂಕು ಸೋಲೂರು ಶೀಥಲ ಕೇಂದ್ರದಿಂದ ರಾಮನಗರಕ್ಕೆ ಸಾಗಿಸುತ್ತಿರುವಾಗ ಈ ಅಪಘಾತ ನಡೆದಿದೆ. ಇದರಿಂದ ಯಾವುದೇ ಪ್ರಾಣಾ ಪಾಯವಾಗಿಲ್ಲ. ಹಾಲು ಸಂರಕ್ಷಣೆ ಮಾಡಲು ಯಾರಿಗೂ ಸಾಧ್ಯವಾಗಲಿಲ್ಲ. ಪೂರ್ಣ ಹಾಲು ನೆಲಕ್ಕೆ ಹರಿದು ನಷ್ಟವಾಗಿದೆ.
ಡೈರಿಯಿಂದ ಹಾಲಿನ ಕ್ಯಾನುಗಳನ್ನು ಸಾಗಿಸುವ ಗುತ್ತಿಗೆವಾಹನಗಳು ಎಷ್ಟೆ ವೇಗವಾಗಿ ಸಂಚರಿಸಿದರು ಅಪಘಾತಗಳು ಕಡಿಮೆ ಸಕಾಲಕ್ಕೆ ಅವರುಗಳು ವಾಹನದ ಸರ್ವಿಸ್ ಮಾಡಿಸುತ್ತಾರೆ. ಅದೇ ಶೀಥಲ ಕೇಂದ್ರದ ವಾಹನಗಳನ್ನು ಸಕಾಲಕ್ಕೆ ಸೇವೆ ಮಾಡಿಸದೆ ನಿತ್ಯ ದುಡಿಸುತ್ತಾರೆ. ಚಾಲಕರು ಅದರ ಸಮಸ್ಯೆ ರಿಪೇರಿಗೆ ಮನವಿಮಾಡಿದರೂ ಗಮನಸಹರಿಸುವುದಿಲ್ಲ. ಅದರಿಂದ ಇಂತಹ ದುರ್ಘಟನೆಗಳು ಆಗಾಗ್ಗೆ ಘಟಿಸುತ್ತಿವೆ.ಇದರ ಬಗ್ಗೆ ಗಮನಹರಿಸಿದರೆ ಉತ್ತಮ ಎಂಬುದು ಇತರೆ ವಾಹನ ಚಾಲಕರ ಅನಿಸಿಕೆ.
ಹಾಲು ಸಾಗಾಣಿಕೆಯು ಗುತ್ತಿಗೆದಾರರ ಕೆಲಸ ಅವರು ಅದನ್ನು ಸರಿಪಡಿಸಿ ಕೊಂಡು ವಾಹನವನ್ನು ರಸ್ತೆಗೆ ಬಿಡಬೇಕು ಎಂಬುದು ಅಲ್ಲಿಯೇ ಇದ್ದ ಕೆಲವರ ಅನಿಸಿಕೆಯಾಗಿದೆ.
ಅಪಘಾತವಾದ ಘಟನೆಯ ಹಿನ್ನೆಲೆಯಲ್ಲಿ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು