ನಿವೃತ್ತ ಶಿಕ್ಷಕ ವಿ ಭುಜಗಯ್ಯ ನಿಧನ
ಚನ್ನಪಟ್ಟಣ:ಮೇ/೦೯/೨೦/ಶನಿವಾರ. ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ನಿವೃತ್ತ ಶಿಕ್ಷಕ ವಿ ಭುಜಗಯ್ಯ (೯೧) ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇಂದು ನಿಧನರಾದರು.
ಮೃತರು ತಾಲ್ಲೂಕಿನಾದ್ಯಂತ ಹಲವಾರು ಗ್ರಾಮಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಇಂದಿಗೂ ಸಹ ಅವರ ಶಿಷ್ಯಂದಿರು ಹಲ ವಿದೇಶಗಳಲ್ಲಿ ನೆಲೆಸಿದ್ದು, ಹಲವಾರು ಮಂದಿ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತಿಚೆಗೆ ಹೊಂಗನೂರು ಗ್ರಾಮದ ಶಾಲೆಯಲ್ಲಿ ಡಾ ವೆಂಕಟಪ್ಪ ನವರು ಭುಜಗಯ್ಯ ನವರನ್ನು ಕರೆದು ಸನ್ಮಾನಿಸಿದ್ದನ್ನು ಸ್ಮರಿಸಬಹುದು.
ಮೃತರು ಪತ್ನಿ ದೇವಮ್ನ, ಪುತ್ರ ಕಾಂಗ್ರೆಸ್ ನ ಯುವ ಮುಖಂಡ ರಾಮಸ್ವಾಮಿ, ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.
ಮಾಜಿ ಶಾಸಕ ಸಿ ಪಿ ಯೋಗೇಶ್ವರ್, ಹಿರಿಯ ಪತ್ರಕರ್ತ ಸು ತ ರಾಮೇಗೌಡ ಸೇರಿದಂತೆ ತಾಲ್ಲೂಕಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಗೋವಿಂದೇಗೌಡನದೊಡ್ಡಿ ಯಲ್ಲಿ ನಾಳೆ (ಭಾನುವಾರ) ಬೆಳಗ್ಗೆ ಹತ್ತು ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು