ಪ್ರಾಥಮಿಕ ಕೇಂದ್ರಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದ ಪಶು ಇಲಾಖೆ
ಚನ್ನಪಟ್ಟಣ:ಜೂ/೦೫/೨೦/ಶುಕ್ರವಾರ. ತಾಲ್ಲೂಕಿನ ಪಶು ಇಲಾಖೆ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ತಾಲ್ಲೂಕಿನಾದ್ಯಂತ ಇರುವ ಪ್ರಾಥಮಿಕ ಪಶು ಆರೋಗ್ಯ ಕೇಂದ್ರಗಳು ಹಾಗೂ ನಗರದ ಸಹಾಯಕ ನಿರ್ದೇಶಕರ ಕಛೇರಿಯ ಆವರಣದಲ್ಲಿ ಸಹಾಯಕ ನಿರ್ದೇಶಕ ಡಾ.ಜಯರಾಮ್ ನೇತೃತ್ವದಲ್ಲಿ ಇಂದು ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ತಾಲ್ಲೂಕಿನಾದ್ಯಂತ ಇರುವ ಇಗ್ಗಲೂರು, ಸೋಗಾಲ, ಅಕ್ಕೂರು, ಕೋಡಂಬಳ್ಳಿ, ವೈಟಿ ಹಳ್ಳಿ, ಬಿವಿ ಹಳ್ಳಿ, ಅರಳಾಳಸಂದ್ರ, ಬೇವೂರು, ಹೆಚ್.ಬ್ಯಾಡರ ಹಳ್ಳಿ ಹಾಗೂ ನಾಗವಾರ ಪ್ರಾಥಮಿಕ ಪಶು ಕೇಂದ್ರಗಳ ಆವರಣದಲ್ಲಿ ಗಿಡಗಳನ್ನು ಆಸ್ಪತ್ರೆಯ ಸಿಬ್ಬಂದಿಗಳ ಮೂಲಕ ಗಿಡ ನೆಡಿಸಲಾಗಿದೆ ಎಂದು ಸಹಾಯಕ ನಿರ್ದೇಶಕ ಡಾ ಜಯರಾಮು ತಿಳಿಸಿದರು.
ಸಂದರ್ಭದಲ್ಲಿ ಮಾತನಾಡಿದ ಪರಿಸರ ತಜ್ಞ, ಮಾತೃಶ್ರೀ ಆರ್ಥೊಫೆಡಿಕ್ ನ ಮುಖ್ಯಸ್ಥ ಡಾ.ಮಲವೇಗೌಡರು, ಪರಿಸರ ಉಳಿದರೆ ಮಾತ್ರ ಮನುಜರು ಉಸಿರಾಡಲು ಸಾಧ್ಯ. ನಾವು ಪ್ರತಿನಿತ್ಯವು ನಮ್ಮ ದೇಹಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಪ್ರಕೃತಿಗೆ ನೀಡಿದರೆ ನಮ್ಮ ಆಯಸ್ಸು ಮತ್ತು ಆರೋಗ್ಯ ವೃದ್ಧಿಸುವುದರಲ್ಲಿ ಅನುಮಾನವಿಲ್ಲ. ಆ ಕಾರಣ ಪರಿಸರ ದಿನಾಚರಣೆಗೆ ಸೀಮಿತವಾಗದೆ ನಾವು ಪ್ರತಿನಿತ್ಯವು ಪರಿಸರದ ಬಗ್ಗೆ ಕಾಳಜಿ ವಹಿಸಿ ಅದರ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಗಿಡ ನೆಡುವ ಕಾರ್ಯಕ್ರಮದಲ್ಲಿ ಪಶುವೈದ್ಯಾಧಿಕಾರಿ ಡಾ.ಪುಟ್ಟಸ್ವಾಮಿ, ಡಾ.ಅಂಕೇಗೌಡ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು