ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಂದು ಐದು ಮಂದಿಗೆ ಸೋಂಕು ದೃಢ. ೪೮ ಕ್ಕೆ ಏರಿಕೆಯಾದ ಒಟ್ಟು ಪ್ರಕರಣಗಳು
ಚನ್ನಪಟ್ಟಣ:ಜು/೦೭/೨೦/ಮಂಗಳವಾರ.ನಗರವೂ ಸೇರಿದಂತೆ ತಾಲ್ಲೂಕಿನಲ್ಲಿ ಇಂದು ಐದು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ರವರು ತಿಳಿಸಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳು ಸೇರಿದಂತೆ ಒಟ್ಟು ಸೋಂಕಿತರ ಸಂಖ್ಯೆ ೪೮ ಕ್ಕೆ ಏರಿಕೆ ಕಂಡಿದೆ.
ನಗರದ ಕೋಟೆ ಪ್ರದೇಶದ ಸಾಯಿಬಾಬಾ ದೇವಾಲಯದ ಹಿಂಭಾಗದ ರಸ್ತೆಯ ಪ್ರಥಮ ಸಂಪರ್ಕಿತೆ ೧೦ ವರ್ಷದ ಬಾಲೆ ಯೋರ್ವರಿಗೆ ಹಾಗೂ ರಾಂಪುರ ಗ್ರಾಮದ ಪ್ರಥಮ ಸಂಪರ್ಕಿತ ೪೮ ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಕೋಟೆ ಪ್ರದೇಶದ ಲಾಯದ ಬೀದಿಯ ೩೮ ವರ್ಷದ ವ್ಯಕ್ತಿ, ಕಸಬಾ ಹೋಬಳಿ ಯ ಸಂತೆಮೊಗಳ್ಳಿದೊಡ್ಡಿ ಯ ೩೮ ವರ್ಷದ ಮಹಿಳೆ (ಹೊಂಗನೂರು ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆ) ಮತ್ತು ಕನಕನಗರ ದ ೩೪ ವರ್ಷದ ವ್ಯಕ್ತಿಯೊಬ್ಬರಿಗೆ (ಟೊಯೋಟಾ ಕಂಪನಿಯ ಉದ್ಯೋಗಿ) ಪ್ರಥಮ ಬಾರಿಗೆ ಸೋಂಕು ಹರಡಿದ್ದು ಇವರಿಗೆ ಜ್ವರ ಮತ್ತು ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡಿದ್ದರು.
ಈ ಮೇಲಿನ ಎಲ್ಲರ ವಿಚಾರಣೆ ನಡೆಯುತ್ತಿದ್ದು ಅವರ ಮಾಹಿತಿ ಮೇರೆಗೆ ನಾಳೆ ಕನಿಷ್ಠ ೪೦ ಕ್ಕೂ ಹೆಚ್ಚು ಮಂದಿ ಪ್ರಥಮ ಸಂಪರ್ಕಿತರು ಸಿಗಲಿದ್ದು, ಎಳೆಯ ಮಕ್ಕಳು ಹಾಗೂ ೬೦ ವರ್ಷ ದಾಟಿದ ವಯೋವೃದ್ದರನ್ನು ಎಲ್ಲಾ ವ್ಯವಸ್ಥೆ ಇದ್ದರೆ ಅವರ ಮನೆಯಲ್ಲೇ ಹೋಂ ಕ್ವಾರಂಟೈನ್ ಮಾಡಲಾಗುವುದು. ಉಳಿದ ಮಂದಿಯನ್ನು ಹಾಸ್ಟೆಲ್ ಕ್ವಾರಂಟೈನ್ ಮಾಡಲಾಗುವುದು ಎಂದು ಡಾ ರಾಜು ರವರು ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು