ಕೊರೊನಾ: ಜಿಲ್ಲೆಯಲ್ಲಿ ಎರಡು ಸಾವು, ೨೭ ಗುಣಮುಖ. ೩೧೫ ಕ್ಕೆ ಏರಿಕೆಯಾದ ಸೋಂಕಿತರು
ರಾಮನಗರ:ಜು/೦೮/೨೦/ಬುಧವಾರ. ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಿನ್ನೆ ಇಬ್ಬರು ಮರಣ ಹೊಂದಿದ್ದು, ಸಾವಿನ ಸಂಖ್ಯೆ ೭ ಕ್ಕೆ ಏರಿಕೆಯಾದರೆ, ೨೭ ಮಂದಿ ಗುಣಮುಖರಾಗಿದ್ದು, ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೩೧೫ ಕ್ಕೆ ಏರಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.
೨೭ ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು,ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೪೫ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.
ನಿನ್ನೆ ಚಿಕಿತ್ಸೆಗೆ ಸ್ಪಂದಿಸದೆ ಮಾಗಡಿ ತಾಲ್ಲೂಕಿನ ೪೦ ವರ್ಷದ ಗಂಡಸು ಹಾಗೂ ೭೦ ವರ್ಷದ ಮಹಿಳೆ ಮೃತಪಟ್ಟಿದ್ದು, ಮೃತರ ಸಂಖ್ಯೆ ೭ ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು