ಚನ್ನಪಟ್ಟಣ: ಇಂದು ಒಂದು ಸೋಂಕು ದೃಢ. ತಾಲ್ಲೂಕಿನಲ್ಲಿ ೭೬ ಕ್ಕೇರಿದ ಸೋಂಕಿತರ ಸಂಖ್ಯೆ
ಚನ್ನಪಟ್ಟಣ:ಜು/೧೪/೨೦/ಮಂಗಳವಾರ. ತಾಲ್ಲೂಕಿನ ಗಡಿ ಗ್ರಾಮವಾದ ಇಗ್ಗಲೂರು ಪಂಚಾಯತಿ ವ್ಯಾಪ್ತಿಯ ಸಾಮಂದಿಪುರದ ೨೫ ವರ್ಷದ ಯುವಕನಿಗೆ ಇಂದು ಸೋಂಕು ದೃಢಪಟ್ಟಿದ್ದು ಆತನನ್ನು ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತ ಬೆಂಗಳೂರಿನಲ್ಲಿ ವಾಸವಿದ್ದು, ತನ್ನ ಊರಿಗೆ ಮರಳಿದ ನಂತರ ಆತನಲ್ಲಿ ಜ್ವರ, ಕೆಮ್ಮು, ನೆಗಡಿ (ಐಎಲ್ಐ) ಕಾಣಿಸಿಕೊಂಡಿದ್ದರಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಆತನಿಗೆ ಇಂದು ಸೋಂಕು ದೃಡವಾಗಿದೆ.
ಚನ್ನಪಟ್ಟಣ ತಾಲ್ಲೂಕಿನಲ್ಲಿ ಇದುವರಗೂ ೭೬ ಮಂದಿಗೆ ಸೋಂಕು ದೃಢಪಟ್ಟಿವೆ. ಅವರಲ್ಲಿ ೩೯ ಮಂದಿ ಗುಣಮುಖರಾಗಿದ್ದು ಬಿಡುಗಡೆ ಹೊಂದಿದ್ದಾರೆ. ಓರ್ವ ವೃದ್ದೆ ಸಾವನ್ನಪ್ಪಿದ್ದು, ಆಕೆಯ ಸಾವಿನ ನಂತರ ಆಕೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಸದ್ಯ ಈಗ ೩೩ ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡಯುತ್ತಿದ್ದಾರೆ.
ಶತಕಕ್ಕೂ ಮೀರಿ ಹೊನ್ನನಾಯಕನಹಳ್ಳಿ ಮತ್ತು ಚಕ್ಕೆರೆ ಗ್ರಾಮದ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಆಗಿದ್ದು, ದ್ವಿತೀಯ ಸಂಪರ್ಕಿತರು ಮನೆಗಳಲ್ಲಿ ಹೋಂ ಕ್ವಾರಂಟೈನ್ ಆಗಿರುವುದಾಗಿ ಮೂಲಗಳು ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು