Tel: 7676775624 | Mail: info@yellowandred.in

Language: EN KAN

    Follow us :


ಹಾಸ್ಟೆಲ್ ವಿದ್ಯಾರ್ಥಿ ಅಮಿತ್ ಕುಮಾರ್ ಗೆ ೫೭೪ ಅಂಕ. ರಾಜ್ಯದ ದ್ವಿತೀಯ ಟಾಪರ್ ಬೃಂದಾಗೆ ಅನೂಪ್ ಎ ಶೆಟ್ಟಿಯವರಿಂದ ಸನ್ಮಾನ

Posted date: 16 Jul, 2020

Powered by:     Yellow and Red

ಹಾಸ್ಟೆಲ್ ವಿದ್ಯಾರ್ಥಿ ಅಮಿತ್ ಕುಮಾರ್ ಗೆ ೫೭೪ ಅಂಕ. ರಾಜ್ಯದ ದ್ವಿತೀಯ ಟಾಪರ್ ಬೃಂದಾಗೆ ಅನೂಪ್ ಎ ಶೆಟ್ಟಿಯವರಿಂದ ಸನ್ಮಾನ

ಚನ್ನಪಟ್ಟಣ:ಜು/೧೬/೨೦/ಗುರುವಾರ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡಯುತ್ತಿರುವ ಚನ್ನಪಟ್ಟಣದ ಮಹದೇಶ್ವರ ನಗರ ದ ಮೆಟ್ರಿಕ್ ನಂತರದ ಪುರುಷರ ವಿದ್ಯಾರ್ಥಿ ನಿಲಯದ, ಅಮಿತ್ ಕುಮಾರ್  ವೈ ಪಿ, ಕೇಂಬ್ರಿಡ್ಜ್ ಪ ಪೂ ಕಾಲೇಜ್ ನ ವಿದ್ಯಾರ್ಥಿಯಾಗಿದ್ದು ದ್ವಿತೀಯ  ಪಿ ಯು ವಿಜ್ಞಾನ ವಿಭಾಗದಲ್ಲಿ ೫೭೪ ಅಂಕಗಳನ್ನು (೯೫.೬೬%)ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾನೆ.


ಈ ವಿದ್ಯಾರ್ಥಿಯು ಯತ್ತಂಬಾಡಿ ಗ್ರಾಮದ ಶ್ರೀ ಪುಟ್ಟರಾಮು ಹಾಗೂ ಶ್ರೀಮತಿ ಸವಿತಾ ದಂಪತಿಗಳ ಪುತ್ರ. ಸದರಿ ವಿದ್ಯಾರ್ಥಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶ್ರೀ ಬಸವರಾಜು, ತಾಲೂಕು ವಿಸ್ತರಾಣಾಧಿಕಾರಿ ಶ್ರೀ ಎಸ್ ಕುಮಾರ್ ಹಾಗೂ ನಿಲಯ ಪಾಲಕ ಎನ್ ಮೋಹನ್ ರವರು ಅಭಿನಂದಿಸಿದ್ದಾರೆ.

ದ್ವಿತೀಯ ಪಿ ಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ತಾಲ್ಲೂಕಿನ ಜಗದಾಪುರ ಗ್ರಾಮದ ಬೃಂದಾ ಎಂಬ ವಿದ್ಯಾರ್ಥಿನಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ ರವರು ಸನ್ಮಾನಿಸಿ ಹಾರೈಸಿದ್ದಾರೆ.


ತಾನು ಓದುತ್ತಿರುವ ಕಾಲೇಜಿಗೆ ಅಷ್ಟೇ ಅಲ್ಲದೇ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. ಈಕೆಗೆ ಉಜ್ವಲ ಭವಿಷ್ಯವಿದೆ. ಮುಂದಿನ ವ್ಯಾಸಂಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಹೆಸರು ಗಳಿಸಲಿ ಎಂದು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಕೋಡಂಬಳ್ಳಿ ನಾಗರಾಜು ಮತ್ತು ಪೋಷಕರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑