ಕೊರೊನಾದಲ್ಲಿ ಶತಕ ಮೀರಿಸಿದ ಚನ್ನಪಟ್ಟಣ. ತಾಲೂಕಿನಲ್ಲಿ ಇಂದು 28 ಮಂದಿ ಸೋಂಕಿತರು
ಚನ್ನಪಟ್ಟಣ:ಜು/19/20/ಭಾನುವಾರ. ತಾಲ್ಲೂಕಿನಾದ್ಯಂತ ಇಂದು ಒಂದೇ ದಿನ 28 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ತನಕ 85 ಮಂದಿ ಸೋಂಕಿತರಿದ್ದರು. ಇಂದಿನ 28 ಮಂದಿಗೆ ಸೋಂಕು ಹರಡಿರುವುದರಿಂದ ಶತಕದಾಟಿ 113 ಕ್ಕೆ ಏರಿಕೆಯಾಗಿದೆ. ಬಹುತೇಕ ಇದು ಸಮುದಾಯಕ್ಕೆ ಹರಡಿದ್ದು, ತಾಲ್ಲೂಕಿನ ಜನತೆ ಭಯಭೀತರಾಗಿದ್ದಾರೆ.
ಕೊರೊನಾ ಸೋಂಕಿತರ ಪ್ರಥಮ ಸಂಪರ್ಕಕ್ಕೆ ಬಂದವರಲ್ಲಿ 3 ಮಂದಿಗೆ ಮಾತ್ರ ಸೋಂಕು ಹರಡಿದ್ದು, ಉಳಿದ 25 ಮಂದಿ ಜ್ವರ, ತಲೆನೋವು, ನೆಗಡಿ ಬಂದಿದ್ದರಿಂದ (ಐಎಲ್ಐ) ಪರೀಕ್ಷೆಗೆ ಮಾಡಿಸಿಕೊಂಡಿರವರಿಗೆ ಸೋಂಕು ದೃಢವಾಗಿದೆ.
ಜನರು ಅತಿಯಾದ ಕೊರೊನಾ ರೋಗಕ್ಕೆ ಸಂಬಂಧಿಸಿದ ಸಿಮ್ಟಮ್ಸ್ ಇದ್ದರೆ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕೆ ವಿನಹ ಭಯದಿಂದ ಪರೀಕ್ಷೆಗೆ ಒಳಪಡಬಾರದು. ಕೊರೊನಾ ರೋಗವು ಆರೋಗ್ಯವಂತರಿಗೆ ಬಂದರೆ 14 ರಿಂದ 28 ದಿನದೊಳಗೆ ಸೋಂಕು ಬಹುತೇಕ ಕಡಿಮೆಯಾಗುತ್ತದೆ ಎಂದು ವೈದ್ಯಕೀಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ತಾಲ್ಲೂಕಿನ ರಾಂಪುರ ಗ್ರಾಮದ 65 ವರ್ಷದ ವೃದ್ದೆ, ಕೂಡ್ಲೂರು ಗ್ರಾಮದ 37 ವರ್ಷದ ಪುರುಷನಿಗೆ ಹಾಗೂ ಸಂಕಲಗೆರೆ ಗ್ರಾಮದ 13 ವರ್ಷದ ಬಾಲಕನಿಗೆ, ನಗರದ ಮಂಗಳವಾರಪೇಟೆ ಯ 44 ಮಹಿಳೆಗೆ ಸೋಂಕು ದೃಢಪಟ್ಟಿದೆ.
ಉಳಿದ 24 ಮಂದಿ ಸೋಂಕಿತರಲ್ಲಿ 22, 21, 31, 22, 19, 65, 19, 32, 70, 20 ವರ್ಷದ ಮಹಿಳೆಯರಿಗೆ ಮತ್ತು 71, 39, 12, 33, 21, 56, 21, 46, 46, 39, 29, 40, 40, 35 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.
ಇವರೆಲ್ಲರೂ ನಗರ ನಿವಾಸಿಗಳಾಗಿದ್ದು, ಸಮುದಾಯಕ್ಕೆ ಸೋಂಕು ಹರಡಿರುವ ಸಾಧ್ಯತೆ ದಟ್ಟವಾಗಿದೆ.
ಇಂದು ಮತ್ತು ನಾಳೆ ಇವರಲ್ಲಿ ಈಗಾಗಲೇ ಖಾಯಿಲೆಯುಳ್ಳವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ ಉಳಿದವರನ್ನು ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಬಲ್ಲ ಮೂಲಗಳು ದೃಢೀಕರಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು