ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಒನ್ ಭೂಮಿ ಫೌಂಡೇಶನ್ ವತಿಯಿಂದ ಗಿಡಗಳನ್ನು ನೆಡಲಾಯಿತು
ಚನ್ನಪಟ್ಟಣ:ಆ/15/20/ಶನಿವಾರ. ನಗರದ ಒನ್ ಭೂಮಿ ಫೌಂಡೇಶನ್ ವತಿಯಿಂದ ಇಂದು ಹೆದ್ದಾರಿ ಹಾಗೂ ಶೆಟ್ಟಿಹಳ್ಳಿ ಕೆರೆಯ ನಡುವಣ ಕೆಪಿಟಿಸಿಎಲ್ ನ ರಕ್ಷಣಾ ಗೋಡೆಯ ಬಳಿ ಗಿಡಗಳನ್ನು ನೆಡುವ ಮೂಲಕ 74 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.
ಈ ವೇಳೆ ಮಾತನಾಡಿದ ಒನ್ ಭೂಮಿ ಫೌಂಡೇಶನ್ ನ ಯುವ ಉತ್ಸಾಹಿಗಳು ನಾವು ಪೋಟೋ ಮತ್ತು ಪ್ರಚಾರಕ್ಕಾಗಿ ಗಿಡಗಳನ್ನು ನೆಡುವುದಿಲ್ಲ. ಈ ಗಿಡಗಳನ್ನು ಮರಗಳನ್ನಾಗಿ ಬೆಳೆಸಿ, ಅನೇಕ ಪಕ್ಷಿಗಳಿಗೆ, ಹಾಗೂ ವಾತಾವರಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಕ್ಷಿಸುತ್ತೇವೆ ಎಂದು ತಿಳಿಸಿದರು.
ಯುವಕರ ಉತ್ಸಾಹಕ್ಕೆ ಪ್ರೋತ್ಸಾಹ ನೀಡಿದ ಬಯಲುಸೀಮೆ ಪತ್ರಿಕೆಯ ಸು ತ ರಾಮೇಗೌಡ ರು ಯುವಕರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದರು. ಮತ್ತೋರ್ವ ಕಾಂಗ್ರೆಸ್ ಮುಖಂಡ ಪಿ ಡಿ ರಾಜು ರವರು ಸಹ ಯುವಕರೊಂದಿಗೆ ಗಿಡಗಳನ್ನು ನೆಡುವ ಮೂಲಕ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಒನ್ ಭೂಮಿ ಫೌಂಡೇಶನ್ ನ ನವನೀತ್, ವೆಂಕಟೇಶ, ಯತೀಶ್, ಧನುಷ್, ಯಜ್ವೀರ್, ಅಖಿಲ್, ಶ್ರೀಧರ್, ಕುಶಾಲ್, ಹರ್ಷ ಹಾಗೂ ಲೋಹಿತ್ ಶ್ರಮದಾನದಲ್ಲಿ ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು