Tel: 7676775624 | Mail: info@yellowandred.in

Language: EN KAN

    Follow us :


ಗೌರಿ ಗಣೇಶನಿಗೆ ವಿಘ್ನವಾದ ಕೊರೊನಾ. ಸರಳಾಚರಣೆ

Posted date: 21 Aug, 2020

Powered by:     Yellow and Red

ಗೌರಿ ಗಣೇಶನಿಗೆ ವಿಘ್ನವಾದ ಕೊರೊನಾ. ಸರಳಾಚರಣೆ

ಚನ್ನಪಟ್ಟಣ:ಆ/21/20/ಶುಕ್ರವಾರ. ಅದ್ದೂರಿ ಆಚರಣೆಗೆ ಹೆಸರಾದ ಹಬ್ಬ ಗೌರಿ ಗಣೇಶನ ಹಬ್ಬ. ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಸೇರಿಸುವ ಸಲುವಾಗಿ  ಬಾಲಗಂಗಾಧರ ತಿಲಕರು ಹುಟ್ಟು ಹಾಕಿದ ಗೌರಿಗಣೇಶ ಹಬ್ಬವೂ ವರ್ಷ ವರ್ಷವೂ ಭಕ್ತಿಯ ಜೊತೆಗೆ ಆಡಂಬರವಾಗಿ, ಅದ್ದೂರಿಯಾಗಿ ಆಚರಣೆಯಾಗುತ್ತಾ ಬಂದಿದೆ. ಆದರೆ ಕೊರೊನಾ ಹಬ್ಬಿರುವುದರಿಂದ ಹಬ್ಬ ವು ಕಳೆ ಕಳೆದುಕೊಂಡಿದ್ದು ಭಕ್ತಾಧಿಗಳು,  ವ್ಯಾಪಾರಿಗಳು ನಿರಾಸೆಗೊಂಡಿದ್ದಾರೆ.


ಇಂದು ದೇಶದಾದ್ಯಂತ ಗೌರಿ ಗಣೇಶ ಹಬ್ಬ ಆಚರಣೆಯಾಗುತ್ತಿದೆ. ಇಂದು ಗೌರಿ ಹಾಗೂ ಗಣೇಶ ಇಬ್ಬರೂ ಕೈಲಾಸದಿಂದ ಭೂಮಿಗೆ ಬರುತ್ತಾರೆ, ಇಲ್ಲಿನ ಭಕ್ತರಿಂದ ಪೂಜೆಗೆ ಒಳಗಾಗಿ ನಾಳೆ ಹಿಂದಿರುಗುತ್ತಾರೆ ಎಂಬ ನಂಬಿಕೆ ಇದೆ.

ಗೌರಿ ಹಾಗೂ ಗಣೇಶನ ಹಬ್ಬ ಆಚರಣೆಗೆ ಈ ಸಾರಿ ಕೋವಿಡ್-೧೯ ಒಂದು ರೀತಿಯಲ್ಲಿ ಕಂಟಕವಾಗಿದೆ. ಅನೇಕ ಕಂಟಕ ನಿವಾರಕ ವಿಘ್ನೇಶ್ವರ ಎಂದು ಹೇಳುವ ಸಂದರ್ಭಲ್ಲಿ ಅವನ ಹಬ್ಬಕ್ಕೆ ಒಂದು ರೀತಿಯಲ್ಲಿ ಕಂಟಕ ಬಂದಿದೆ.


ರಾಷ್ಟ್ರ ಹಾಗು ರಾಜ್ಯದ ಆಡಳಿತ ಅವನು ಮುಕ್ತವಾಗಿ ಬಂದು ನಿರ್ಗಮಿಸುವುದಕ್ಕೆ ಕಟ್ಟುಪಾಡು ಹಾಕಿ ಕೂರಿಸಿದೆ. ವಿಘ್ನೇಶ್ವರನನ್ನು ಕೂರಿಸಿದರೆ ಮನೆಯಲ್ಲಿಯೇ ಕೂರಿಸಿ, ಮನೆಯಲ್ಲಿಯೇ ವಿಸರ್ಜಿಸಬೇಕು.

ಹೊರಗೆ ಗಣೇಶನನ್ನು ಕೂರಿಸಿದರೆ, ೪ ಅಡಿ  ಎತ್ತರದ ಗಣೇಶನನ್ನೇ ಕೂರಿಸಬೇಕು, ವಿಸರ್ಜನೆಯ ಹೊಣೆಯೂ ಸಹ ಕೂರಿಸಿದವರದೇ ಆಗಿದೆ. ಮಾಸ್ಕ್ ಕಟ್ಟಿಕೊಂಡು ಭಕ್ತರು ಗಣೇಶನನ್ನು ದರ್ಶಿಸಬೇಕು, ಸ್ಯಾನಿಟೈಸರ್ ಹಾಕಿಕೊಳ್ಳುವುದು ಕಡ್ಡಾಯ. ಸ್ಯಾನಿಟೈಸರ್ ಹಾಕಿಕೊಂಡ ಕೈಯಿಂದ ಪ್ರಸಾದ ಸೇವಿಸುವುದು, ತೀರ್ಥ ಸೇವಿಸುವುದು ಹೇಗೆ ಈ ರೀತಿಯ ಗೊಂದಲಗಳು.


ತರಕಾರಿ ಹಾಗೂ ಹಣ್ಣಿನ ಬೆಲೆ ಸ್ವಲ್ಪ ನಿಯಂತ್ರಣದಲ್ಲಿದೆ. ಆದರೆ ಹೂವಿನ ಬೆಲೆಯಂತೂ ಕೆ.ಜಿಗೆ ೩೫೦ ರಿಂದ ೬೦೦ ರೂ ವರೆಗೂ ಮಾರಾಟ ವಾಗುತ್ತಿದೆ.

ಇನ್ನು ದವಸ ದಾನ್ಯಗಳ ಬೆಲೆಯು ಮೊದಲಿನಿಂದಲೂ ಏರಿಕೆಯ ದರಲ್ಲಿಯೇ ಇರುವುದು ಗುಟ್ಟಿನ ವಿಷಯ ಏನೂ ಅಲ್ಲ. ಕೋವಿಡ್-೧೯ ರ ಭಯವಿದ್ದರೂ ಸಹ ಹಲವರು ಮಾಸ್ಕ್ ಹಾಕಿ ಕೊಂಡು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.

ಕೊರೊನಾ ಹೆಗಲು ಏರಿ, ಸರಿ ಸುಮಾರು ೫ ತಿಂಗಳು ಆಗುತ್ತಿವೆ. ಆದರೂ ಸಹ ಅದರ ಪ್ರವರ ನಿಂತಿಲ್ಲ. ಜನರು ಅದನ್ನು ಹೊಂದಿಕೊಂಡು ಹೋಗುವ ದಾರಿಯಲ್ಲಿ ಇರುವುದು ಕಂಡು ಬರುತ್ತಿದೆ.


ಹಬ್ಬದ ಭರಾಟೆಯಂತೂ ಯಥಾಸ್ಥಿತಿಯಲ್ಲಿ ನಡೆದುಕೊಂಡು ಹೋಗುತ್ತಿದೆ.

ನಮ್ಮ ಜನ ಯಾವುದಕ್ಕೆ ಕೊರತೆ ಉಂಟು ಮಾಡಿದರೂ ಸಹ ಹಬ್ಬ ಹರಿದಿನಗಳಿಗೆ ಹೇಗೋ ಹಣ ಒದಗಿಸಿಕೊಂಡು ಅವುಗಳನ್ನು ದಿವಿನಾಗಿಯೇ ಮಾಡುತ್ತಾರೆ. ಇದು ಅವರ ಭಾಗಕ್ಕೆ ಹೊಣೆಯಾಗಿ ಪರಿಣಮಿಸಿ ಈ ರೀತಿಯ ಅನುಕರಣೆ ನಡೆಯುತ್ತಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑