ಯೋಗೇಶ್ವರ್ ಜನ್ಮದಿನದಂದು ಬೃಹತ್ ರಕ್ತದಾನ ಶಿಬಿರ. 200 ಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ
ಚನ್ನಪಟ್ಟಣ:ಆ/29/20/ಶನಿವಾರ. ಕೊರೊನಾ ನಡುವೆಯು ಅದ್ದೂರಿಯಾಗಿ ಹುಟ್ಟಿದ ಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವುದಕ್ಕೆ ನನಗೆ ವೈಯುಕ್ತಿಕವಾಗಿ ನೋವಾಗಿದೆ. ಆದರೆ ತಾಲ್ಲೂಕು ಮತ್ತು ಜಿಲ್ಲೆಯ ಅಭಿಮಾನಿಗಳ ಅಭಿಮಾನಕ್ಕೆ ನಾನು ತಲೆಬಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ತಿಳಿಸಿದರು.
ಸ್ವಾತಂತ್ರ್ಯ ದಿನಾಚರಣೆ, ಹುತಾತ್ಮರ ದಿನಾಚರಣೆಯೊಟ್ಟಿಗೆ ತಮ್ಮ57 ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರೋತ್ಥಾನ ಸಂಸ್ಥೆ, ತಾಲ್ಲೂಕಿನ ಬಿಜೆಪಿ ಮುಖಂಡರು ಹಾಗೂ ತಮ್ಮ ಅಭಿಮಾನಿ ಬಳಗದೊಂದಿಗೆ ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಮಾತನಾಡಿದರು.
ಕುಟುಂಬ ಹಾಗೂ ತಾಲ್ಲೂಕಿನ ಮುಖಂಡರೊಟ್ಟಿಗೆ, ಮಹದೇಶ್ವರ ಬೆಟ್ಟಕ್ಕೆ ತೆರಳಿ, ಪೂಜೆ ಸಲ್ಲಿಸಿ ಹಿಂತಿರುಗುವ ವೇಳೆ ಸಿ ಪಿ ಯೋಗೇಶ್ವರ್ ಅಭಿಮಾನಿಗಳು ಮತ್ತು ಪಕ್ಷದ ಮುಖಂಡರು, ಕೊಳ್ಳೆಗಾಲ, ಮಳವಳ್ಳಿ, ಭಾರತಿನಗರ (ಕೆ ಎಂ ದೊಡ್ಡಿ) ಮದ್ದೂರು ಬಿ ಎಂ ರಸ್ತೆಯ ಹಲವಾರು ಹೋಟೆಲ್ ಗಳು ಹಾಗೂ ಗ್ರಾಮಗಳಲ್ಲಿ ತಮ್ಮ ನಾಯಕನ ಹುಟ್ಟು ಹಬ್ಬವನ್ನು ಆಚರಿಸಿದರು. ನಗರದ ಐದನೇ ಕ್ರಾಸ್ ನ ತಮ್ಮ ಮನೆಯಲ್ಲಿ ತಂದೆ ತಾಯಿಗಳಿಗೆ ನಮಸ್ಕರಿಸಿದ ನಂತರ ಮಹದೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಿ, ರಕ್ತದಾನ ಶಿಬಿರದ ಸ್ಥಳಕ್ಕೆ ಆಗಮಿಸಿದ ಸಿಪಿವೈ ಅಭಿಮಾನಿಗಳು ತಂದಿದ್ದ ಬೃಹತ್ ಕೇಕನ್ನು ಕಟ್ ಮಾಡುವ ಮೂಲಕ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ನಂತರ ರಕ್ತದಾನಿಗಳಿಗೆ ಶುಭಕೋರಿ ಮಾತನಾಡಿದ ಅವರು ಇಂದು ನನ್ನ ಜನ್ಮ ದಿನಕ್ಕೆ ತಾಲ್ಲೂಕಿನ ಪಕ್ಷದ ಮುಖಂಡರು, ಹಾಗೂ ಅಭಿಮಾನಿಗಳು ಸೇರಿ ರಕ್ತದಾನ ಏರ್ಪಡಿಸಿರುವುದು ತುಂಬಾ ಖುಷಿ ತಂದಿದೆ. ನನ್ನ ಜನ್ಮ ದಿನದಂದು ಹಲವಾರು ರೋಗಿಗಳಿಗೆ ರಕ್ತ ನೀಡುವ ಮೂಲಕ ಆಚರಣೆಗೆ ಅನುವು ಮಾಡಿಕೊಟ್ಟಿರುವುದಕ್ಕೆ ಪಕ್ಷದ ಕಾರ್ಯಕರ್ತರಿಗೆ ಮತ್ತು ಅಭಿಮಾನಿಗಳಿಗೆ ಕೃತಘ್ನತೆ ಸಲ್ಲಿಸಿದರು.
ನಗರದ ಹೊರವಲಯದಲ್ಲಿರುವ ಎಲ್ ಎನ್ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಬೃಹತ್ ಸಂಖ್ಯೆಯಲ್ಲಿ ಅಭಿಮಾನಿಗಳು, ಸಂಘಪರಿವಾರ ಮತ್ತು ಬಿಜೆಪಿ ಪಕ್ಷದ ಯುವ ಮುಖಂಡರು ಪಾಲ್ಗೊಂಡು ಸರತಿ ಸಾಲಿನ ಮೂಲಕ ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದರು.
ಇದೇ ವೇಳೆ ಚನ್ನಪಟ್ಟಣ ಮತ್ತು ರಾಮನಗರ ತಾಲ್ಲೂಕಿನ ಅನೇಕ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು