Tel: 7676775624 | Mail: info@yellowandred.in

Language: EN KAN

    Follow us :


ಶ್ರೀ ಕೃಷ್ಣ ಜನ್ಮಾಷ್ಠಮಿ‌ ಪ್ರಯುಕ್ತ ಅಂಬೆಗಾಲು ಕೃಷ್ಣನಿಗೆ ಬೆಳ್ಳಿಯ ಅಲಂಕಾರ.

Posted date: 10 Sep, 2020

Powered by:     Yellow and Red

ಶ್ರೀ ಕೃಷ್ಣ ಜನ್ಮಾಷ್ಠಮಿ‌ ಪ್ರಯುಕ್ತ ಅಂಬೆಗಾಲು ಕೃಷ್ಣನಿಗೆ ಬೆಳ್ಳಿಯ ಅಲಂಕಾರ.

ಚನ್ನಪಟ್ಟಣ:ಸೆ/10/20/ಗುರುವಾರ. ಇಂದು ಶ್ರೀ ಕೃಷ್ಣ ಜನ್ಮಾಷ್ಠಮಿ. ನಗರದ ಏಕೈಕ ಕೃಷ್ಣನ ವಿಗ್ರಹವಿರುವ ದೇವಾಲಯ ಎಂದರೆ ದೊಡ್ಡಮಳೂರು ಗ್ರಾಮದ ಅಪ್ರಮೇಯ ಅಥವಾ ಶ್ರೀ ರಾಮ ಅಪ್ರಮೇಯ ದೇವಾಲಯದಲ್ಲಿ ಮಾತ್ರ.


ಕೋವಿಡ್ ಸಂಕಷ್ಟ ಇರುವುದರಿಂದ, ಹಲವಾರು ನಿಬಂಧನೆಗಳೊಂದಿಗೆ ಮುಜರಾಯಿ ಇಲಾಖೆಯ ಎ ದರ್ಜೆಯ ದೇವಾಲಯಗಳಲ್ಲಿ ಭಕ್ತರಿಗೆ ದೇವರ ದರ್ಶನ ಭಾಗ್ಯ ಮಾತ್ರ ಕಲ್ಪಿಸಲಾಗಿದೆ. ಅಪ್ರಮೇಯ ದೇವಾಲಯದಲ್ಲಿಯೂ ಸಹ ಬಿಗಿ ಭದ್ರತೆಗಳೊಂದಿಗೆ ಕೇವಲ ದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು.


ಶ್ರೀ ಕೃಷ್ಣ ಜನ್ಮಾಷ್ಠಮಿಯಾದ್ದರಿಂದ ಅಂಬೆಗಾಲು ಕೃಷ್ಣ ನ ಮೂರ್ತಿಗೆ ಸಾಧಾರಣ ಅಲಂಕಾರ ಮಾಡಿ, ಬೆಳ್ಳಿಯ ಪ್ರಭಾವಳಿ ಧರಿಸಿ ಪೂಜಿಸಲಾಯಿತು. ಈ ವೇಳೆ ಕಾರ್ಯ ನಿರ್ವಹಣಾಧಿಕಾರಿ ಹೆಚ್ ಎಸ್ ಮಹೇಶ್ ಮತ್ತು ಭಕ್ತರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑