ಸರಗೂರು ನೇರಳೂರು ಗ್ರಾಮದ ನಡುವಿನ ಹಳ್ಳ ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್
ಚನ್ನಪಟ್ಟಣ:ಸೆ/09/20/ಬುಧವಾರ. ತಾಲ್ಲೂಕಿನ ಗಡಿ ಗ್ರಾಮಗಳಾದ ಸರಗೂರು ಮತ್ತು ನೇರಳೂರು ಗ್ರಾಮಗಳ ನಡುವಿನ ಹಳ್ಳವೊಂದು ಒತ್ತುವರಿಯಾಗಿದ್ದು, ಇಂದು ಖುದ್ದು ನಿಂತು ಮಾರ್ಗದರ್ಶನ ಮಾಡುವುದರೊಂದಿಗೆ ತಹಶಿಲ್ದಾರ್ ನಾಗೇಶ್ ರವರು ಒತ್ತುವರಿಯನ್ನು ತೆರವುಗೊಳಿಸಿದರು.
ಸರಗೂರು ಗ್ರಾಮದ ಸರ್ವೇ ನಂಬರ್ 08 ಮತ್ತು ನೇರಳೂರು ಗ್ರಾಮದ ಸರ್ವೇ ನಂಬರ್ 89 ರಲ್ಲಿ ಹಾದು ಹೋಗುವ ಸರ್ಕಾರಿ ಹಳ್ಳವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು.
ಇದಕ್ಕೂ ಮೊದಲು ಅಧಿಕಾರದಲ್ಲಿದ್ದ ಅಂದಿನ ತಹಶಿಲ್ದಾರ್ ಸುದರ್ಶನ್ ರವರು ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರು.
ನೂತನ ತಹಶಿಲ್ದಾರ್ ನಾಗೇಶ್ ರವರು ಸರ್ವೇ ಮಾಡಿಸಿ, ಒತ್ತುವರಿ ಮಾಡಿಕೊಂಡಿದ್ದವರಿಗೆ ಎಚ್ಚರಿಕೆ ನೀಡಿ ಜೆಸಿಬಿ ಯಂತ್ರದ ಮೂಲಕ ಖುದ್ದು ಮಾರ್ಗದರ್ಶನ ನೀಡುವುದರೊಂದಿಗೆ ತೆರವುಗೊಳಿಸಿದರು.
ಇದಕ್ಕೂ ಮೊದಲು ಸರಗೂರು ಗ್ರಾಮದ ನಾಗರಾಜು ಎಂಬುವವರು ಒತ್ತುವರಿ ಮಾಡಿಕೊಂಡಿದ್ದೂ ಅಲ್ಲದೆ ಪೋಲೀಸ್ ಠಾಣೆ ಮೆಟ್ಟಿಲೇರಿದ್ದರು.
ಒತ್ತುವರಿ ತೆರವುಗೊಳಿಸುವ ಸಮಯದಲ್ಲಿ ಅಕ್ಕೂರು ಪೋಲೀಸ್ ಠಾಣೆಯ ಸಿಬ್ಬಂದಿಗಳು, ಕಂದಾಯ ನಿರೀಕ್ಷಕ ರಜತ್, ಗ್ರಾಮ ಲೆಕ್ಕಾಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು