Tel: 7676775624 | Mail: info@yellowandred.in

Language: EN KAN

    Follow us :


ಪಿತೃಪಕ್ಷ ಹಬ್ಬಕ್ಕೆ ಜನರ ತೀವ್ರಾಶಕ್ತಿ: ವ್ಯಾಪಾರ ವಹಿವಾಟು ನಿರಾಶಕ್ತಿ

Posted date: 17 Sep, 2020

Powered by:     Yellow and Red

ಪಿತೃಪಕ್ಷ ಹಬ್ಬಕ್ಕೆ ಜನರ ತೀವ್ರಾಶಕ್ತಿ: ವ್ಯಾಪಾರ ವಹಿವಾಟು ನಿರಾಶಕ್ತಿ

ಚನ್ನಪಟ್ಟಣ:ಸೆ/17/20/ಗುರುವಾರ. ರಾಜ್ಯದಲ್ಲಿ ಕೋವಿಡ್ ನಿಯಮ ಜಾರಿಯಲ್ಲಿ ಇದೆ. ಅದು ಮದುವೆ, ತಿಥಿಗಳು ಹಾಗೂ ಸಾರ್ವಜನಿಕ ಸಮಾರಂಭಗಳಿಗೆ ಸೀಮಿತವಾಗಿವೆ.

ಪಿತೃಪಕ್ಷ ಹಬ್ಬವೂ ಪ್ರತಿ ವರ್ಷವೂ ಸಹ ಬರುವಂತಹದ್ದು, ತಮ್ಮ ಅಗಲಿದ ಜನ್ಮದಾತರಿಗೆ ಎಡೆ ಹಾಕುವುದು ಸಾಂಪ್ರದಾಯಿಕವಾಗಿ ಬೆಳೆದು ಬಂದಿದೆ.


ಈ ಪಕ್ಷವು ಬಾದ್ರಪದ ಮಾಸದ ಪೌರ್ಣಮಿಯಿಂದ ಶುರುವಾಗಿ, ಮಹಾಲಯ ಅಮಾವಾಸ್ಯೆ ಯವರೆಗೆ ಮುಂದುವರೆಯುತ್ತದೆ. ಅದರಲ್ಲಿಯೂ ಕೆಲವರು ವಿಜಯ ದಶಮಿಯವರೆಗೂ ಮುಂದುವರಿಸುತ್ತಾರೆ.

ಕುಟುಂಬದಲ್ಲಿ ಯಾವುದೇ ವ್ಯಕ್ತಿ ಸತ್ತ ಒಂದು ವರ್ಷದವರೆಗೂ ಮನೆಯಲ್ಲಿ ಎಡೆ ಹಾಕುವ ಸಂಪ್ರದಾಯವಿಲ್ಲ. ಗಂಡು ಮಕ್ಕಳಿಗೆ ಮದುವೆ ಮಾಡುವುದಿಲ್ಲ. ಆದರೆ ಹೆಣ್ಣು ಮಕ್ಕಳಿಗೆ ಮದುವೆ ಮಾಡಬಹುದು. ಯಾಕೆಂದರೆ ಅದು ಕನ್ಯಾದಾನವಾಗುತ್ತದೆ.


ಹಿರಿಯರ ಸ್ಮರಣೆಯೇ

ಪಿತೃಪಕ್ಷ. ಅಂದರೆ ತಮ್ಮ ಕುಟುಂಬದಲ್ಲಿ ಆವರೆಗೆ ಯಾರ‍್ಯಾರು ಸತ್ತಿದ್ದಾರೋ ಅವರೆಲ್ಲರಿಗೂ ಸೇರಿ ಪಿಂಡಹಾಕುವುದು ಮೂಲ ಉದ್ದಿಶ್ಯ.

ಬೇರೆ ಬೇರೆ ಧರ್ಮದವರೂ ಸಹ ಬೇರೆ ಬೇರೆ ಸಂದರ್ಭದಲ್ಲಿ ತಮ್ಮ ಹಿರಿ ಯರನ್ನು ಸ್ಮರಿಸಿಕೊಳ್ಳುವ ಸಂದರ್ಭವನ್ನು ಸೃಷ್ಟಿಸಿಕೊಂಡಿದ್ದಾರೆ. ಜನ್ಮದಾತರನ್ನು ಸ್ಮರಿಸುವುದು ಉತ್ತಮ ಬೆಳವಣಿಗೆ. ಆದರೆ ಜೀವಂತವಿದ್ದಾಗ ಸರಿಯಾಗಿ ನೋಡಿ ಕೊಳ್ಳಬೇಕಾಗಿದೆ.


ಕಳೆದ ವರ್ಷ ಪಿತೃ ಪಕ್ಷದ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶ ಹಾಗೂ ಪಟ್ಟಣ ಪ್ರದೇಶ ದಲ್ಲಿ ವಿಶೇಷವಾದ ರೀತಿಯಲ್ಲಿ ಹಬ್ಬ ಆಚರಿಸಲಾಗುತ್ತಿತ್ತು.

ನಮ್ಮಲ್ಲಿ ಒಂದು ಗಾದೆ ಮಾತಿದೆ ‘ಮಗನನ್ನು ಮಾರಿಯಾದರೂ ಪಕ್ಷ ಆಚರಿಸು’ ಎಂಬುದು. ಅದನ್ನು ಆಧಾರವಾಗಿಟ್ಟು ಕೊಂಡು ಸಾಕಷ್ಟು ಜನರ ಮನೆಯಲ್ಲಿ ಎಂತಹದ್ದೇ ಸಮಸ್ಯೆ ಇದ್ದರೂ ಸಹ ಪಕ್ಷಾಚರಣೆಯನ್ನು ಮಾಡುವುದು ವಾಡಿಕೆಯಲ್ಲಿದೆ.


ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿಕೊಂಡರೆ ಈ ಸಾರಿ ಪಿತೃಪಕ್ಷದ ಭರಾಟೆಯು ಕಡಿಮೆ ಇದೆ ಎಂದು ಭಾವಿಸಲಾಗಿದೆ.

ಆದರೂ ಚನ್ನಪಟ್ಟಣ ಪೇಟೆಯಲ್ಲಿ ಕಳೆದ 8 ತಿಂಗಳ ಈಚೆಗೆ ಹೋಲಿಸಿಕೊಂಡರೆ, ಈ ಒಂದು ಸಂದರ್ಭಕ್ಕೆ ವ್ಯಾಪಾರ ವಹಿವಾಟು ವಾಸಿ ಎಂತಲೇ ಹೇಳುತ್ತಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑