Tel: 7676775624 | Mail: info@yellowandred.in

Language: EN KAN

    Follow us :


ಮಣಪ್ಪುರಂ ಗೋಲ್ಡ್ ಕಂಪನಿಯಿಂದ ವಂಚನೆ ಆರೋಪ ಖಂಡಿಸಿ ಪ್ರತಿಭಟನೆ

Posted date: 18 Sep, 2020

Powered by:     Yellow and Red

ಮಣಪ್ಪುರಂ ಗೋಲ್ಡ್ ಕಂಪನಿಯಿಂದ ವಂಚನೆ ಆರೋಪ ಖಂಡಿಸಿ ಪ್ರತಿಭಟನೆ

ಚನ್ನಪಟ್ಟಣ:ಸೆ/18/20/ಶುಕ್ರವಾರ. ನಗರದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಮಣಪ್ಪುರಂ ಗೋಲ್ಡ್ ಕಂಪನಿಯಲ್ಲಿ ಒಡವೆಗಳನ್ನು ಅಡವಿಟ್ಟು ಸಾಲ ಪಡೆದಿದ್ದು, ಹಣ ಕಟ್ಟಿಸಿಕೊಂಡ ನಂತರವೂ ಒಡವೆಗಳನ್ನು ಹಿಂದಿರುಗಿಸದೇ ಹರಾಜು ಆಗಿವೆ ಎಂದು ವಂಚಿಸಿರುವುದನ್ನು ವಿರೋಧಿಸಿ ನಾಗವಾರ ಗ್ರಾಮ ಯುವ ರೈತ ಚೇತನ್ ಹಾಗೂ ಸಂಬಂಧಿಗಳು ಕಂಪನಿಯ ಮುಂದೆ ಪ್ರತಿಭಟನೆ ನಡೆಸಿದರು.


ಚೇತನ್ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸಂಸ್ಥೆಯ ಶಾಖೆಯಲ್ಲಿ 2017 ರಲ್ಲಿ ಒಟ್ಟು ಏಳು ಬಾರಿ 400 ಗ್ರಾಂ ಚಿನ್ನವನ್ನು ಅಡವಿಟ್ಟಿದ್ದು, ಅದಕ್ಕೆ ಬಡ್ಡಿ ಕಟ್ಟಿದ್ದೇನೆ. ೨೦೧೮ ರಲ್ಲಿ ನನ್ನ ಮನೆಗೆ ಆಗಮಿಸಿದ ಶಾಖೆಯ ಸಿಬ್ಬಂದಿಗಳಾದ ಜಗದೀಶ್, ಮಹೇಶ್, ಜಯಸ್, ಧನಂಜಯ, ಮಾನಸ ಎಂಬುವರು ಆಭರಣಗಳ ರಿನಿವಲ್ ಗಾಗಿ 4.5 ಲಕ್ಷ ಹಣವನ್ನು ಕಟ್ಟಿಸಿಕೊಂಡು ಹೋಗಿದ್ದಾರೆ ಎಂದು ಅವರು ದೂರಿದರು.


ಇದನ್ನು ಅಲ್ಲಗಳೆದ ಸಿಬ್ಬಂದಿಗಳು ಕಳೆದ ನಾಲ್ಕು ತಿಂಗಳ ಹಿಂದೆ ಒಡವೆ ಬಿಡಿಸಿಕೊಳ್ಳಲು ಕಚೇರಿಗೆ ಬಂದಾಗ, ನಿಮ್ಮ ಒಡವೆಗಳು ಹರಾಜಾಗಿವೆ. ನೀವೆ ಬಿಡಿಸಿಕೊಂಡಿದ್ದೀರಿ ಎಂದು ಧಮಕಿ ಹಾಕಿದ್ದಾರೆ.

ಈ ಬಗ್ಗೆ ಹತ್ತಾರು ಸಲ, ಸಂಸ್ಥೆಗೆ ಬಂದರು ಒಡವೆ ಹಿಂದಿರುಗಿಸದೇ, ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿರುವ ಚೇತನ್ ಹಾಗೂ ಆತನ ತಾಯಿ ವಸಂತಮ್ಮ ತಮ್ಮ ಸಂಬಂಧಿಕರ ಜೊತೆಗೂಡಿ, ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ ನಗರದ ಪೂರ್ವ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.


ಮಣಪ್ಪುರಂ ಸಂಸ್ಥೆಯಿಂದ ನಮಗೆ ಅನ್ಯಾಯವಾಗಿದೆ. ಸಾಲಸೋಲ ಮಾಡಿ ಹಣ ಕಟ್ಟಿಸಿಕೊಂಡು ನಮ್ಮ ಒಡವೆ ಮಾರಿಕೊಂಡಿದ್ದಾರೆ. ಇದೀಗ ಮಧ್ಯಸ್ಥಿಕೆ ವಹಿಸಿದ್ದ ಅಧಿಕಾರಿಗಳು ಕೂಡ ಸ್ಪಂದಿಸುತ್ತಿಲ್ಲ. ನ್ಯಾಯ ಕೇಳಲು ಬಂದ ನಮಗೆ ಪೊಲೀಸರ ಮೂಲಕ  ಎದುರಿಸುತ್ತಿದ್ದಾರೆ ಎಂದು ಪತ್ರಿಕೆಗೆ ಅಳಲು ತೋಡಿಕೊಂಡಿದ್ದಾರೆ.


ಪ್ರಕರಣವು ಪೋಲೀಸ್ ಮೆಟ್ಟಿಲೇರಿದ ನಂತರ ಎರಡೂ ಕಡೆಯವರು ಕುಳಿತು ಬಗೆಹರಿಸಿಕೊಳ್ಳುವುದಾಗಿ ಹಿಂದಿರುಗಿದರು ಎಂದು ತಿಳಿದು ಬಂದಿದೆ. ಇದೇ ವೇಳೆ ಕಂಪನಿಯ ಅಧಿಕಾರಿಗಳು ಮನೆಗೆ ತೆರಳಿ ಹಣ ಪಡೆದಿದ್ದಾರೆ ಎನ್ನಲಾದ ಐದು ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑