Tel: 7676775624 | Mail: info@yellowandred.in

Language: EN KAN

    Follow us :


ಗಾಂದಿಭವನ ಮರುನಿರ್ಮಿಸಲು ಕರವೇ ಮನವಿ

Posted date: 30 Sep, 2020

Powered by:     Yellow and Red

ಗಾಂದಿಭವನ ಮರುನಿರ್ಮಿಸಲು ಕರವೇ ಮನವಿ

ಚನ್ನಪಟ್ಟಣ:ಸೆ/30/20/ಬುಧವಾರ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿಯವರು ಭೇಟಿ ನೀಡಿದ ನೆನಪಿಗಾಗಿ ನಿರ್ಮಿಸಲಾದ ಗಾಂಧಿಭವನವು ಇಂದು ಶಿಥಿಲಾವಸ್ತೆಗೊಂಡಿದ್ದು, ತಾಲ್ಲೂಕು ಮತ್ತು ಜಿಲ್ಲಾಡಳಿತವು ಶೀಘ್ರವಾಗಿ  ಪರಿಶೀಲಿಸಿ, ತಮ್ಮ ಸುಪರ್ದಿಗೆ ಪಡೆದು ಮರುನಿರ್ಮಿಸಿ ಗಾಂಧೀಜೀಯವರ ನೆನಪನ್ನು ಅಜರಾಮರವಾಗಿಸಬೇಕೆಂಬ ಬೇಡಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಪದಾಧಿಕಾರಿಗಳು ತಹಶಿಲ್ದಾರ್ ಸುದರ್ಶನ್ ರವರಿಗೆ ಮನವಿ ಸಲ್ಲಿಸಿದರು.


ನಗರದ ಹೃದಯ ಭಾಗವಾದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ಇರುವ ಗಾಂಧಿ ಭವನದಲ್ಲಿ ಈ ಹಿಂದೆ ವಾಚನಾಲಯ ಇದ್ದು, ಪ್ರತಿನಿತ್ಯವೂ ನೂರಾರು ಸಂಖ್ಯೆಯಲ್ಲಿ ಓದುಗರು ಬಂದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ನಿವೃತ್ತರಿಗೆ ಒಂದು ವೇದಿಕೆಯಾಗಿತ್ತು. ಇಂತಹ‌ ಗಾಂಧಿಭವನವು ಭೂತಬಂಗಲೆಯಾಗಿರುವುದು ಖೇದವೆನಿಸುತ್ತಿದೆ ಎಂದು ತಾಲ್ಲೂಕು ಕರವೇ ಅಧ್ಯಕ್ಷ ಕೋ ಪು ಸಾಗರ್ ತಿಳಿಸಿದರು.


ತಹಶಿಲ್ದಾರ್ ನಾಗೇಶ್ ರವರು ಮಾತನಾಡಿ ಇದರ ದಾಖಲೆಗಳನ್ನು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗುವುದು‌ ಎಂದು ಮನವಿದಾರರಿಗೆ ತಿಳಿಸಿದರು.

ಮನವಿ ಸಲ್ಲಿಸುವ ವೇಳೆ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑