Tel: 7676775624 | Mail: info@yellowandred.in

Language: EN KAN

    Follow us :


ಗಾಂಧಿಗೆ 151 ಆದರೂ, ಶಿಥಿಲಾವಸ್ಥೆಯಲ್ಲೇ ಮುಂದುವರೆದ ಗಾಂಧಿಭವನ

Posted date: 01 Oct, 2020

Powered by:     Yellow and Red

ಗಾಂಧಿಗೆ 151 ಆದರೂ,  ಶಿಥಿಲಾವಸ್ಥೆಯಲ್ಲೇ ಮುಂದುವರೆದ ಗಾಂಧಿಭವನ

ಚನ್ನಪಟ್ಟಣ:ಅ/01/20/ಗುರುವಾರ. ನಗರದ ಹೃದಯ ಭಾಗದಲ್ಲಿರುವ ಗಾಂಧಿಭವನವನ್ನು ಸ್ವಾತಂತ್ರ್ಯ ಪೂರ್ವದಲ್ಲಿ, ಗಾಂಧೀಜಿಯವರ ಭೇಟಿಯ ನೆನಪಿಗಾಗಿ ನಿರ್ಮಿಸಿ, ಇಂದು ಶಿಥಿಲಾವಸ್ಥೆ ತಲುಪಿರುವ ಗಾಂಧಿಭವನಕ್ಕೆ ಕಾಯಕಲ್ಪ ನೀಡದಿರುವುದರಿಂದ ಭೂತ ಬಂಗಲೆಯಾಗಿ ಪರಿವರ್ತಿತಗೊಂಡಿದೆ.


ಕಳೆದ ವರ್ಷ ಅಂದರೆ 150 ನೇ ಗಾಂಧಿ ಜಯಂತಿಯಂದು ಹಿರಿಯ ಪತ್ರಕರ್ತ ಸು ತ ರಾಮೇಗೌಡ ಮತ್ತು ಗೋ ರಾ ಶ್ರೀನಿವಾಸ ಹಾಗೂ ಕೆಲ ಸಮಾನ ಮನಸ್ಕರು ಒಗ್ಗೂಡಿ ಗಾಂಧಿ ಭವನದ ಮುಂದೆ ಸತ್ಯಾಗ್ರಹ ನಡೆಸಿದ್ದರು.

ಇದು ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಅಂದಿನ ವಾರ್ತಾಧಿಕಾರಿ ಶಂಕರಪ್ಪ ನವರು ಪತ್ರಕರ್ತ ಗೋ ರಾ ಶ್ರೀನಿವಾಸ ರವರಿಗೆ ಕರೆ ಮಾಡಿ ನಮ್ಮ ಇಲಾಖೆಯ ವತಿಯಿಂದ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಗಾಂಧಿಭವನವನ್ನು ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದ್ದರು.


ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉಪಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್ ನಾರಾಯಣ ರವರು ಸಹ ಇದಕ್ಕೆ ಹಸಿರು ನಿಶಾನೆ ನೀಡಿದ್ದಾರೆ ಎಂದು ಹೇಳಿದ್ದರು. ಅವರು ವರ್ಗವಾಗಿ ಹೋದ ನಂತರ ಬಂದ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡದಿರುವುದು ಸಹ ಗಾಂಧಿಜೀಗೆ ಮಾಡಿದ ಅಪಮಾನವಾಗಿದೆ.


ಗಾಂಧೀಜಿಯವರು ಭೇಟಿ ನೀಡಿದ ನೆನಪಿಗಾಗಿ ಈ ಜಾಗವನ್ನು ಆರ್ಯಮೂರ್ತಿ ಎಂಬುವವರು ಗಾಂಧಿ ಭವನವನ್ನು ನಿರ್ಮಿಸಲು ಉದಾರವಾಗಿ ನೀಡಿದ್ದರು. ಆರ್ಯಮೂರ್ತಿಯವರ ಮಗು ಸಹ ಜೊತೆಯಲ್ಲೇ ಇದ್ದುದರಿಂದ ಆ ಮಗುವಿಗೆ ಸ್ವತಃ ಗಾಂಧೀಜಿಯವರೇ ಅಭಯ ಮೂರ್ತಿ ಎಂದು ಹೆಸರನ್ನಿಟ್ಟರು. ತದ ನಂತರ ಈ ಭೂಮಿಯು ಅನಧಿಕೃತವಾಗಿ ಉಳ್ಳವರ ಪಾಲಾಗಿ, ಆ ಜಾಗದಲ್ಲಿರುವ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಪಡೆದುಕೊಳ್ಳುತ್ತಿದ್ದರೂ ಸಹ ಗಾಂಧಿಭವನಕ್ಕೆ ಕಾಯಕಲ್ಪ ನೀಡದಿರುವುದು ಚನ್ನಪಟ್ಟಣ ತಾಲ್ಲೂಕಿಗೆ ಮಾಡಿದ ಅಪಮಾನ ಎನ್ನುತ್ತಾರೆ ಹಿರಿಯ ಪತ್ರಕರ್ತ ಸು ತ ರಾಮೇಗೌಡರು.


ಸೆಪ್ಟೆಂಬರ್ 23 ನೇ ತಾರೀಖಿನಲ್ಲಿ ಗಾಂಧಿ ಭವನದ ಎಲ್ಲಾ ಪ್ರಕ್ರಿಯೆ ಮುಗಿದಿದೆ. ಜಿಲ್ಲಾಧಿಕಾರಿಗಳ ಬಳಿ ‌ಸಭೆ ನಡೆಸಲು ಸಮಯ ಕೇಳಲಾಗಿದೆ. ನಮ್ಮಲ್ಲಿ ಹಣ ಇದ್ದು ನವೆಂಬರ್ ತಿಂಗಳ ಮೂರನೇ ವಾರದ ವೇಳೆಗೆ ಹಳೆಯ ಕಟ್ಟಡವನ್ನು ಉರುಳಿಸಿ ಹೊಸ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ನವೀನ್ ಕುಮಾರ್ ರವರು ತಿಳಿಸಿದರು.


ಗಾಂಧೀಜಿಯವರ ನೆನಪು ಶಾಶ್ವತವಾಗಿ ಉಳಿಯಬೇಕಾದರೆ ಮೂಲ ದಾಖಲಾತಿಗಳನ್ನು ಕ್ರೋಢೀಕರಿಸಿ, ಬಲಾಢ್ಯರ ಕಪಿ ಮುಷ್ಠಿಯಿಂದ ಬಿಡಿಸಿ, ಸರ್ಕಾರವೇ ಮುಂದೆ ನಿಂತು ಗಾಂಧಿಭವನವನ್ನು ಮರುನಿರ್ಮಿಸಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑