Tel: 7676775624 | Mail: info@yellowandred.in

Language: EN KAN

    Follow us :


ಶುಕ್ರವಾರ ಮತ್ತು ಭಾನುವಾರ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 44 ಜಾನುವಾರುಗಳನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ ಹಿಂಜಾವೇ

Posted date: 05 Oct, 2020

Powered by:     Yellow and Red

ಶುಕ್ರವಾರ ಮತ್ತು ಭಾನುವಾರ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 44 ಜಾನುವಾರುಗಳನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ ಹಿಂಜಾವೇ

ಚನ್ನಪಟ್ಟಣ:ಅ/04/20/ಭಾನುವಾರ. ಶನಿವಾರ ರಾತ್ರಿ ಹಾಗೂ ಇಂದು‌ ಭಾನುವಾರ ಮಧ್ಯಾಹ್ನ ಬೇರೆ ಬೇರೆ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ, ಕ್ರಮವಾಗಿ 24 ಮತ್ತು 20 ಜಾನುವಾರುಗಳನ್ನು ಜಿಲ್ಲಾ ಹಿಂದೂ ಜಾಗರಣಾ ವೇದಿಕೆಯ ಸದಸ್ಯರು ಹಿಡಿದು ಪೋಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.


ಕಸಾಯಿಖಾನೆಗೆ ಸಾಗಿಸುತ್ತಿದ್ದ 24 ಎಮ್ಮೆಗಳನ್ನು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ರಕ್ಷಿಸಿರುವ ಘಟನೆ ನಗರದ ಮಂಗಳವಾರಪೇಟೆ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಕೆಎ 51 ಎ 9705 ನೋಂದಣಿಯ ಐಶರ್

ಕಂಟೈನರ್ ನಲ್ಲಿ 23 ಎಮ್ಮೆಗಳು ಮತ್ತು ಒಂದು ಕೋಣವನ್ನು ಅತಿ ಅಮಾನುಷವಾಗಿ ಸಾಗಾಟ ಮಾಡುತ್ತಿರುವುದನ್ನು ಗಮನಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಕಂಟೈನರ್ ಅಡ್ಡಗಟ್ಟಿ ನಗರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.


ಸಾಗಾಟ ಮಾಡುತ್ತಿದ್ದ ಅಬ್ದುಲ್ ವಾಹೀದ್, ರಿಯಾಜ್ ಅಹಮದ್, ಸಲ್ಮಾನ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಕ್ಷಿಸಿದ ಎಮ್ಮೆಗಳನ್ನು ಮೈಸೂರಿನ ಪಿಂಜಾರಪೋಲಿಯಲ್ಲಿನ ಗೋಶಾಲೆಗೆ ಕಳುಹಿಸಕೊಡಲಾಗಿದೆ ಎಂದು ತಿಳಿದು ಬಂದಿದೆ.


ಇಂದು ಸಹ ಅಂದರೆ ಭಾನುವಾರ ಮಧ್ಯಾಹ್ನ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಯಲಚೀಪಾಳ್ಯದ ಯುವಕರು ಮಿಂಚಿನ ಕಾರ್ಯಾಚರಣೆ ನಡೆದಿ 19 ಸೀಮೆ ಹಸುವಿನ ಕರುಗಳು ಹಾಗೂ 1 ಎಮ್ಮೆ ಕರುವಿನ ರಕ್ಷಣೆ ಮಾಡಿದ್ದಾರೆ.


ಇಂದು ಮಧ್ಯಾಹ್ನ ಕೆಎ42‌ ಬಿ 0772 ಟಾಟಾ ಏಸ್ ವಾಹನದಲ್ಲಿ  ಅಕ್ರಮವಾಗಿ ಹಾಗೂ ಅಮಾನವೀಯವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 19 ಸೀಮೆ ಕರು ಹಾಗೂ 1 ಎಮ್ಮೆ ಕರುವನ್ನು ರಕ್ಷಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.


ಇಂದು ಮಧ್ಯಾಹ್ನ 2.30 ರ ಸುಮಾರಿಗೆ ಪೊಲೀಸ್ ತರಬೇತಿ ಶಾಲೆಯಿಂದ ಯಲಚೀ ಪಾಳ್ಯಕ್ಕೆ ಹೋಗುವ ರಸ್ತೆಯಲ್ಲಿರುವ ಚೌಕಿ ಮಠದ ಬಳಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ವಾಹನವನ್ನು ತಡೆದು ಪರಿಶೀಲಿಸಲಾಗಿ ಅಕ್ರಮವಾಗಿ ಕಸಾಯಿಖಾನೆಗೆ ಕರುಗಳನ್ನು ಸಾಗಿಸುತ್ತಿರುವುದು ಗಮನಕ್ಕೆ ಬಂದ ತಕ್ಷಣ ಹಿಂಜಾವೇ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ನೀಡಿ ಒಂದು ಗಂಟೆಯಾದರೂ ಸ್ಥಳಕ್ಕೆ ಪೊಲೀಸರು ಆಗಮಿಸಿದ ಕಾರಣ ಕಾರ್ಯಕರ್ತರೇ ವಾಹನವನ್ನು ಪೊಲೀಸ್ ಠಾಣೆಗೆ  ತೆಗೆದುಕೊಂಡು ಹೋಗಿ ಪೊಲೀಸರ ವಶಕ್ಕೆ ನೀಡುತ್ತಾರೆ.


ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ.


ಮನವಿ: ರಾತ್ರಿವೇಳೆಯಲ್ಲಿ ಅಕ್ರಮವಾಗಿ ಹತ್ತಾರು ವಾಹನಗಳಲ್ಲಿ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ. ಹೆದ್ದಾರಿಯಲ್ಲಿ ಬೃಹತ್ ವಾಹನಗಳನ್ನು ತಪಾಸಣೆ ನಡೆಸಿದರೆ, ಸಾಕಷ್ಟು ಇಂತಹಾ ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಬಹುದು ಎಂದು ಹಿಂಜಾವೇಯ ಸದಸ್ಯರು ಹೇಳುತ್ತಾರೆ.


ನಮ್ಮ ವೇದಿಕೆಯೂ ಕೂಡ ಈ ಕಾರ್ಯದಲ್ಲಿ ಸದಾ ತೊಡಗಿಸಿಕೊಳ್ಳಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಗಂಜೇಂದ್ರಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑