Tel: 7676775624 | Mail: info@yellowandred.in

Language: EN KAN

    Follow us :


\'ಸಕಾಲ\' ದಲ್ಲಿ ದೊರೆಯುವ ಸೌಲಭ್ಯಗಳನ್ನು ರೈತರು ಮತ್ತು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ತಹಶಿಲ್ದಾರ್ ನಾಗೇಶ್

Posted date: 02 Dec, 2020

Powered by:     Yellow and Red

\'ಸಕಾಲ\' ದಲ್ಲಿ ದೊರೆಯುವ ಸೌಲಭ್ಯಗಳನ್ನು ರೈತರು ಮತ್ತು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಡಿ/02/20/ಬುಧವಾರ. ರಾಜ್ಯ ಸರ್ಕಾರದ ವತಿಯಿಂದ 'ಸಕಾಲ ಸಪ್ತಾಹ' ಸೇವೆಗಳು ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಸಾರಿಗೆ ಇಲಾಖೆ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳಲ್ಲಿ ತಲಾ 68, 79, 49 ಮತ್ತು 8 ಸೇವೆಗಳು ಸೇರಿದಂತೆ ಒಟ್ಟು 1025 ಸೇವೆಗಳು ಲಭ್ಯವಿದ್ದು, ರೈತರು ಮತ್ತು ಸಾರ್ವಜನಿಕರು ಸದುಪಪಡಿಸಿಕೊಳ್ಳಬೇಕೆಂದು ದಂಡಾಧಿಕಾರಿ ನಾಗೇಶ್ ಮಾಹಿತಿ ನೀಡಿದರು.
ಅವರು ಇಂದು ತಾಲೂಕು ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ನವೆಂಬರ್ 30 ನೇ ತಾರೀಖಿನಿಂದ ಇದೇ ತಿಂಗಳ 5 ನೇ ತಾರೀಖಿನ ತನಕ ಸಕಾಲ ಸಪ್ತಾಹ ಕಾರ್ಯಕ್ರಮ ನಡೆಯುತ್ತಿದ್ದು, 'ಸಕಾಲ' ದ ಪ್ರಯೋಜನಗಳನ್ನು ತಿಳಿಸಲಾಗುತ್ತದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಇಲಾಖೆಗಳು ಹಾಗೂ ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂಭಾಗದಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಸಕಾಲದಲ್ಲಿ ದೊರೆಯುವ ಪ್ರಯೋಜನಗಳನ್ನು ಅದರಲ್ಲಿ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

ಸರ್ಕಾರದಿಂದ 'ಸಕಾಲ' ದ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಂಡು ತಾವುಗಳು ಸಹ ಸಲಹೆಗಳನ್ನು ನೀಡಬಹುದು. ಸಲಹೆಗಳ ಜೊತೆಗೆ ಈಗಿರುವ 1025 ಸೌಲಭ್ಯಗಳ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು 5 ನೇ ತಾರೀಖಿನೊಳಗೆ ನೀಡಬಹುದಾಗಿದೆ ಎಂದರು.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑