Tel: 7676775624 | Mail: info@yellowandred.in

Language: EN KAN

    Follow us :


ಕನ್ನಡ ಮತ್ತು ಕನ್ನಡಿಗರನ್ನು ತುಚ್ಚವಾಗಿ ಕಾಣುವ ರಾಜಕಾರಣಿಗಳಿಗೆ ಬುದ್ದಿ ಕಲಿಸಬೇಕಾಗಿದೆ. ರಮೇಶ್ ಗೌಡ

Posted date: 06 Dec, 2020

Powered by:     Yellow and Red

ಕನ್ನಡ ಮತ್ತು ಕನ್ನಡಿಗರನ್ನು ತುಚ್ಚವಾಗಿ ಕಾಣುವ ರಾಜಕಾರಣಿಗಳಿಗೆ ಬುದ್ದಿ ಕಲಿಸಬೇಕಾಗಿದೆ. ರಮೇಶ್ ಗೌಡ

ಚನ್ನಪಟ್ಟಣ:ಡಿ/05/20/ಶನಿವಾರ.
ತನ್ನ ರಾಜಕೀಯ ಬೆಳೆ ಬೇಯಿಸಿಕೊಳ್ಳುವ ಸಲುವಾಗಿ, ಅಧಿಕಾರದ ಲಾಲಸೆಗಾಗಿ, ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ರಾಜ್ಯ ಮತ್ತು ರಾಷ್ಟ್ರಸ ಬಿಜೆಪಿ ನಾಯಕರುಗಳು ಮುಂದಿನ ದಿನದಲ್ಲಿ ತಕ್ಕ ಪಾಠ ಕಲಿಯಲಿದ್ದಾರೆ. ಕನ್ನಡಿಗರೇ ಕಲಿಸಲಿದ್ದಾರೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‍ಗೌಡ ಅಭಿಪ್ರಾಯಪಟ್ಟರು.

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ನಗರದ ಅಂಚೆ ಕಚೇರಿ ರಸ್ತೆಯ ಕಾವೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ತನ್ನ ರಾಜಕೀಯ ಲಾಭಕ್ಕಾಗಿ ಅನ್ಯಭಾಷಿಕರನ್ನು ಓಲೈಸುವ ರಾಜಕಾರಣಕ್ಕೆ ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರು ಮುಂದಾಗಿದ್ದಾರೆ. ತಮ್ಮ ಓಲೈಕೆ ರಾಜಕಾರಣದ ಮುಂದುವರೆದ ಭಾಗವಾಗಿ ಕನ್ನಡ ಚಳುವಳಿಗಾರರನ್ನೆ ಅವಮಾನಿಸುವ ಮಟ್ಟಕ್ಕೆ ಇಳಿದಿದ್ದಾರೆ. ಈ ಎಲ್ಲದಕ್ಕೂ ತಕ್ಕ ಪ್ರಾಯಶ್ಚಿತ ಅನುಭವಿಸಲಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

ನಾಲ್ಕು ದಶಕಗಳಿಂದ ಕನ್ನಡ ನಾಡು ನುಡಿಗಾಗಿ ವಾಟಾಳ್ ನಾಗರಾಜ್‍ರವರು ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಆದರೆ, ಮರಾಠ ಪ್ರಾಧಿಕಾರದ ವಿರುದ್ಧ ಧ್ವನಿ ಎತ್ತಿದರು ಎಂಬ ಕಾರಣಕ್ಕೆ ಅವರನ್ನು ವೈಯುಕ್ತಿಕವಗಿ ಟೀಕಿಸುವುದು ಬಿಜೆಪಿ ನಾಯಕರಿಗೆ ತರವಲ್ಲ. ಕನ್ನಡ ಚಳುವಳಿಗಾರರ ಬಗ್ಗೆ ಅವಹೇಳನದ ಮಾತನಾಡಿರುವ ಬಸವನಗೌಡ ಪಾಟೀಲ್ ಯತ್ನಾಳ್ ಕನ್ನಡಿಗರ ಕ್ಷಮೆಯಾಚಿಸಬೇಕು. ಹಲವು ಆಕ್ರಮಗಳ ಸರದಾರನಾಗಿರುವ ಕಾಳಿಮಠದ ಋಷಿಕುಮಾರನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ತಮಿಳು ಪ್ರಾಧಿಕಾರವನ್ನು ಮಾಡಿದರೆ ತಪ್ಪೇನು ಎಂದಿರುವ ಡಿಸಿಎಂ ಡಾ.ಅಶ್ವಥ್ ನಾರಾಯಣ್ ಹೇಳಿಕೆ ಆಶ್ಚರ್ಯ ಉಂಟುಮಾಡಿದೆ. ಬಿಜೆಪಿಗರ ಮನಃಸ್ಥಿತಿ ಹೀಗೆ ಮುಂದುವರೆದರೆ ರಾಜ್ಯವನ್ನು ಮೂರು ಭಾಗಗಳನ್ನಾಗಿ ಮಾಡುವುದರಲ್ಲಿ ಸಂದೇಹವಿಲ್ಲ. ಬಂದ್ ನಡೆಸಿದರೆ, ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂಬ ಉದ್ದೇಶದಿಂದ ಬಂದ್ ಕೈಬಿಟ್ಟು ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜು ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ  ಹಾಗೂ ಕನ್ನಡ ಚಳುವಳಿಗಾರರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿ ಮಾತನಾಡುವ ರಾಜಕಾರಣಗಳಿಗೆ ಜನತೆ ಸಾರ್ವಜನಿಕವಾಗಿ ಛೀಮಾರಿ ಹಾಕಬೇಕು. ಸರ್ಕಾರ ನಾಡವಿರೋಧಿ ಕಾರ್ಯಕ್ರಮಗಳಿಂದ ದೂರ ಸರಿಯಬೇಕು. ಅಲ್ಲಿಯವರೆವಿಗೂ ಕನ್ನಡಪರ ಚಳುವಳಿಗಾರರು ಹಿಂದೆ ಸರಿಯುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಯತ್ನಾಳ್, ಋಷಿಕುಮಾರ ಹಾಗೂ ಕೇಂದ್ರ ಕೃಷಿ ಸಚಿವರ ಪ್ರತಿಕೃತಿ ದಹಿಸಲಾಯಿತು. ವೇದಿಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‍ಗೌಡ, ಪದಾಧಿಕಾರಿಗಳಾದ ರಂಜಿತ್‍ಗೌಡ. ಬೆಂಕಿ ಶ್ರೀಧರ್, ಕನ್ನಡಪರ ಹೋರಾಟಗಾರರಾದ ಬಾಬ್‍ಜಾನ್, ವೆಂಕಟೇಶ್ (ಶೇಠು) ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ಕದಂಬ ಸೇನೆ ವತಿಯಿಂದಲೂ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಶಿವಕುಮಾರ್, ತಾಲೂಕು ಅಧ್ಯಕ್ಷ ರಾಂಪುರ ಉಮೇಶ್ ಉಪಸ್ಥಿತರಿದ್ದರು.

ಬಂದ್ ಸಂಪೂರ್ಣ ವಿಫಲ:.
ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶಕ್ಕೆ ಬೆದರಿದ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಲಿಲ್ಲ. ಬಂದ್ ಎಂಬ ಮಾತಂತು ದೂರವೇ ಉಳಿಯಿತು. ಪ್ರತಿಭಟನೆಗಳು ಸಹ ನಿಮಿಷಗಳ ಅವಧಿಗೆ ಸೀಮಿತವಾಗಿತ್ತು. ಸಂಚಾರ ಎಂದಿನಂತೆ ಸುಗಮಾಗಿ ಸಾಗಿದರೆ ವ್ಯಾಪಾರ ವಹಿವಾಟು ಸಹ ಭರ್ಜರಿಯಾಗಿ ನಡೆದವು. ಒಟ್ಟಾರೆ ಇಂದಿನ ಬಂದ್ ಸಂಪೂರ್ಣ ವಿಫಲವಾಯಿತು.
ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑