Tel: 7676775624 | Mail: info@yellowandred.in

Language: EN KAN

    Follow us :


ಪ್ರಜಾಪ್ರಭುತ್ವ ಉಳಿಯಲಿ ಧರ್ಮ ರಾಜಕಾರಣ ತೊಲಗಲಿ ದಸಂಸ ಸಂಚಾಲಕ ವೆಂಕಟೇಶ್

Posted date: 07 Dec, 2020

Powered by:     Yellow and Red

ಪ್ರಜಾಪ್ರಭುತ್ವ ಉಳಿಯಲಿ ಧರ್ಮ ರಾಜಕಾರಣ ತೊಲಗಲಿ ದಸಂಸ ಸಂಚಾಲಕ ವೆಂಕಟೇಶ್

ಚನ್ನಪಟ್ಟಣ:ಡಿ/06/20/ಭಾನುವಾರ. ರಾಷ್ಟ ಮತ್ತು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಒಡೆದು ಸಮಾಜದಲ್ಲಿ ಒಡಕು ಮೂಡಿಸಿ ಧರ್ಮ ರಾಜಕಾರಣ ಮಾಡುತ್ತಿದ್ದು, ಇದು ಅಂಬೇಡ್ಕರ್ ರವರ ಸಂವಿಧಾನದ ಆಶಯಕ್ಕ  ಕೊಡಲಿ ಪೆಟ್ಟು ನೀಡಿದೆ ಎಂದು ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ವೆಂಕಟೇಶ್ (ಶೇಟು) ಆಕ್ರೋಶ ವ್ಯಕ್ತಪಡಿಸಿದರು.

ಅವರು ಭಾನುವಾರ ಸಂಜೆ ನಗರದ ಹೃದಯ ಭಾಗದಲ್ಲಿರುವ ಕುವೆಂಪು ಅವರ ಪ್ರತಿಮೆಯಿಂದ ಡಾ ಅಂಬೇಡ್ಕರ್ ರವರ ಪುತ್ಥಳಿ ಯ ತನಕ ಕ್ಯಾಂಡಲ್ ಹೊತ್ತಿಸಿ ಮೌನ ಮೆರವಣಿಗೆ ನಡೆಸಿ ಮಾತನಾಡಿದರು.


ಸರ್ಕಾರಗಳು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ, ರಾಷ್ಟ್ರದ ಸಂಪತ್ತು ಲೂಟಿ ಸೇರಿದಂತೆ ಇನ್ನಿತರ ಸಂವಿಧಾನ ಬಾಹಿರ ಕೃತ್ಯಗಳನ್ನು ಮಾಡುತ್ತಿರುವುದರಿಂದ ರಾಷ್ಟ್ರದ ಅಭಿವೃದ್ಧಿಯು ಕುಂಠಿತಗೊಂಡಿದೆ. ಕರ್ನಾಟಕದಲ್ಲಿನ ರಾಜಕೀಯವಂತು ಮಠಾಧಿಪತಿಗಳ ನೇರ ಚಿತಾವಣೆಯಿಂದ ಬಳಲುತ್ತಿದ್ದು, ಈ ಸರ್ಕಾರವು ಒಂದು ವರ್ಗಕ್ಕೆ ಸೀಮಿತವಾಗಿದೆಯೇನೋ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ ಎಂದು ಅವರು ಅವರು ಆತಂಕ ವ್ಯಕ್ತಪಡಿಸಿದರು.


ಬಿಜೆಪಿ ಸರ್ಕಾರವು ಜನರಿಗೆ ತುಂಬಾ ನಿರೀಕ್ಷೆ ಮೂಡಿಸಿ ಬಂದ ಸರ್ಕಾರವಾಗಿತ್ತಾದರೂ, ಇಂದು ಅದೇ ಸಾರ್ವಜನಿಕರು ಎಂತಹ ಪಕ್ಷಕ್ಕೆ ಮತ ನೀಡಿದೆ ಎಂದು ಕರುಬುವಂತಾಗಿದೆ. ಸರ್ಕಾರವು ಸಂಪೂರ್ಣ ಹಗಲು ದರೋಡೆಗೆ ಇಳಿದಿದ್ದು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದ ರೈತ ಸಮುದಾಯ ಸೇರಿದಂತೆ ಎಲ್ಲಾ ವರ್ಗಗಳ ಜನರು ನರಳುವಂತಾಗಿದೆ ಎಂದರು.


ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಮಾಜಿ ಸದಸ್ಯ ಹನುಮಂತಯ್ಯ ಸೇರಿದಂತೆ ತಾಲ್ಲೂಕಿನ ದಲಿತ ಮುಖಂಡರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑