Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನ ಗಣ್ಯರಿಂದ ಡಿ ಟಿ ರಾಮು‌ ರವರ ಸ್ಮರಣೋತ್ಸವ ಕಾರ್ಯಕ್ರಮ

Posted date: 06 Jan, 2021

Powered by:     Yellow and Red

ತಾಲ್ಲೂಕಿನ ಗಣ್ಯರಿಂದ ಡಿ ಟಿ ರಾಮು‌ ರವರ ಸ್ಮರಣೋತ್ಸವ ಕಾರ್ಯಕ್ರಮ

ಚನ್ನಪಟ್ಟಣ:ಜ/06/21/ಬುಧವಾರ. ಇಂದು ಇಲ್ಲಿನ ಮಾಜಿ ಶಾಸಕ ಡಿ.ಟಿ ರಾಮು ಅವರ 24 ನೇ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ರಾಮು ಅವರ ಅಭಿಮಾನಿ ವೃಂದ ಹಾಗು ಡಿ.ಟಿ ರಾಮು ಸ್ಮಾರಕ ಪ್ರತಿಷ್ಠಾನ ವತಿಯಿಂದ ಏರ್ಪಡಿಸಲಾಗಿತ್ತು.

ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಸಲ್ಲಿಸಿ, ಅವರು ಬದುಕಿದ್ದ ಕಾಲದ ನೆನಪು ಗಳನ್ನು ಅವರ ಸಮಕಾಲೀನರು ಹಾಗೂ ಅವರಿಂದ ಪ್ರಭಾವಿತರಾದ ಹಲವು ಗಣ್ಯರು ಸ್ಮರಿಸಿಕೊಂಡರು.


ಜಿಲ್ಲಾ ಕಸಾಪ ಅಧ್ಯಕ್ಷ ರಾದ ಸಿಂ.ಲಿಂ ನಾಗರಾಜು ಅವರು ಮಾತನಾಡಿ, ರಾಮು ಅವರು, ಶಿಕ್ಷಕರ ಕುಟುಂಬದಿಂದ ಬಂದವರಾಗಿದ್ದು, ಆದರ್ಶಣೀಯವಾಗಿ ಬದುಕು ಸಾಗಿಸಿದ್ದರು. ಅವರು ನಮ್ಮಂತಹ ಅನೇಕರಿಗೆ ಆದರ್ಶಣೀಯರಾಗಿದ್ದಲ್ಲದೆ, ಈ ತಾಲ್ಲೂಕು ಕಂಡ ಓರ್ವ ಜನಮುಖಿ ಶಾಸಕ ಎಂದು, ಅವರು ನನಗೂ ಸಹ ಹಲವು ಸಂದರ್ಭಗಳಲ್ಲಿ ಮಾರ್ಗದರ್ಶನ ನೀಡಿದ್ದರು ಎಂದರು.


ಕಾಂಗ್ರೆಸ್ ಪ್ರಮುಖ ಹಾಗೂ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎ.ಸಿ ವೀರೇಗೌಡ ಅವರು ಮಾತನಾಡಿ, ಅವರು ಶಾಸಕರಾಗಿದ್ದಾಗ ಅವರ ಬಗ್ಗೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿಯೂ ಚರ್ಚೆ ನಡೆಯುತ್ತಿದ್ದವು. ನಾವು ಆ ಕಾಲಕ್ಕೆ ಅನಿವಾಸಿ ಚನ್ನಪಟ್ಟಣ ವಿದ್ಯಾರ್ಥಿಗಳ ಸಂಘದ ಸಮಾರಂಭಕ್ಕೆ ಕರೆಸಿದ್ದೆವು. ಸರಳ ವ್ಯಕ್ತಿತ್ವದ ಅವರು, ಎಲ್ಲರನ್ನೂ ಪ್ರಭಾವಿಸುತ್ತಿದ್ದರು ಎಂದರು.


ಕವಿ ಹಾಗೂ ನಿವೃತ್ತ ಉಪನ್ಯಾಸಕ ಭೂಹಳ್ಳಿ ಪುಟ್ಟಸ್ವಾಮಿ ಮಾತನಾಡಿ, ರಾಮು ಅವರ ಪಾಠದ ಮನೆಯ ಮೂಲಕ ನಾವೆಲ್ಲಾ ಗಣಿತ ಹಾಗೂ ಇಂಗ್ಲಿಷ್ ಅನ್ನು ಕಲಿತಿದ್ದೇವೆ. ಅವರು ರಾಜಕೀಯಕ್ಕೆ ಪ್ರವೇಶಿಸಿದ ನಂತರವೂ ಸಹ ಹಲವು ಹತ್ತು ಮೌಲ್ಯಗಳನ್ನು ಇಟ್ಟು ಕೊಂಡಿದ್ದರು. ನನ್ನ ಮುಂದೆ ಓರ್ವ ವ್ಯಕ್ತಿ ಸಬ್ ಇನ್ಸೆಪೆಕ್ಟರ್ ಹುದ್ದೆಗಾಗಿ 25 ಸಾವಿರ ರೂ ಲಂಚ ಕೊಡಲು ಬಂದಾಗ, ಅವರಿಗೆ ಬೆವರಿಳಿಸಿ, ನನಗೆ ನೀನು 25 ಸಾವಿರ ಕೊಡುವುದಾದರೆ, ನೀನೆಷ್ಟು ಲೂಟಿ ಮಾಡಲು ನಿರ್ಧರಿಸಿದ್ದೀಯೆ ಎಂದು ಹೊರಗೆ ಕಳುಹಿಸಿದ್ದು, ಅವರ ಪ್ರಾಮಾಣಿಕತೆಗೆ ಸಾಕ್ಷಿ ಎಂದರು.


ಕಾಂಗ್ರೆಸ್ ಪ್ರಮುಖ ಶರತ್ ಚಂದ್ರ ರವರು ಮಾತನಾಡಿ, ಡಿ.ಟಿ ರಾಮು ನನಗೆ ನೇರ ಪರಿಚಯ ಇಲ್ಲದಿದ್ದರೂ ಅವರ ಬಗ್ಗೆ ಹಿರಿಯರನೇಕರು ಹೇಳುತ್ತಿದ್ದುದ್ದನ್ನು ಕೇಳಿ ಅವರ ಬಗ್ಗೆ ಹೆಮ್ಮೆ ಎನ್ನಿಸುತ್ತಿತ್ತು. ಆ ಕಾಲದಲ್ಲಿ ಅವರು ಬಸ್ಸಿನಲ್ಲಿಯೇ ಓಡಾಡುತ್ತಿದ್ದದ್ದು ನನಗೆ ಗೊತ್ತು ಎಂದರು.

ದಲಿತ ಪ್ರಮುಖ ಸಿದ್ದ ರಾಮಯ್ಯ ಮಾತನಾಡಿ, ಅವರು ಜಾತಿ ಮತ ಎಂದು ನೋಡುತ್ತಿರಲಿಲ್ಲ, ಎಲ್ಲರನ್ನೂ ಸಹಿತ ಸಮಾನಾಂತರವಾಗಿ ಕಂಡು ಅವರನ್ನು ಸಮಸ್ಯೆ ಮುಕ್ತ ರನ್ನಾಗಿ ಮಾಡುತ್ತಿದ್ದರು ಎಂದರು.

ನಿವೃತ್ತ ಉಪನ್ಯಾಸಕ ಚಾಮರಾಜು ಮಾತನಾಡಿ, ನಮಗೆಲ್ಲರಿಗೂ ಆದರ್ಶವನ್ನು ಕಟ್ಟಿಕೊಟ್ಟ ಗುರುಗಳು ಅವರು. ಅವರು ನಮ್ಮನ್ನು ತಿದ್ದಿ ಬುದ್ಧಿ ಕಲಿಸಿದ್ದರು ಎಂದರು.


ಅಧ್ಯಕ್ಷತೆ ವಹಿಸಿದ್ದ ಡಿ.ಟಿರಾಮು ಪ್ರತಿಷ್ಠಾನದ ಅಧ್ಯಕ್ಷರಾದ ಸು.ತ ರಾಮೇಗೌಡ ಮಾತನಾಡಿ, ಡಿ.ಟಿ ರಾಮು ಜಾತ್ಯತೀತ ವ್ಯಕ್ತಿ, ಬಡವರು ಹಾಗೂ ನಿರ್ಗತಿಕರನ್ನು ಕಂಡರೆ ಮಿಡಿಯುತ್ತಿದ್ದರು. ಸಾಕಷ್ಟು ಸಂಕಷ್ಟದಲ್ಲೂ ಬೇರೆಯವರ ನೋವುಗಳಿಗೆ ಧ್ವನಿಯಾದವರು, ಈ ಕಾರಣಕ್ಕಾಗಿಯೇ ಅವರ ಸ್ಮಾರಕ ಪ್ರತಿಷ್ಠಾನ ಮಾಡಲು ಯತ್ನಿಸಿದ್ದು. ಅದು ಬಹಳ ಜನರಿಗೆ ಇಷ್ಟವಿರಲಿಲ್ಲ. ಈ ವೃತ್ತ ಮಾಡಲು ಪ್ರೇರಣೆ ಹಾಗೂ ಅವರ ಪ್ರಾಮಾಣಿಕತೆಗೆ ಬೆಲೆ ಸಿಕ್ಕು ಈ ವೃತ್ತ ನಿರ್ಮಾಣವಾಗಿದೆ. ಪ್ರತಿಮೆ ಸ್ಥಾಪನೆಯ ಪ್ರಸ್ತಾಪ ಬಂದಿದೆ. ಅದರಿಂದ ಸಮಸ್ಯೆಗಳೇ ಜಾಸ್ತಿ ಎಂಬ ಹಿನ್ನೆಲೆಯಲ್ಲಿ ಅವರ ಪ್ರೀತಿಯ ಸಹೋದರ ಡಿ.ಟಿ ಜಯಕುಮಾರ್ ಅವರು ಬೇಡ ಎಂದಿದ್ದರು ಎಂದು, ಈಗ ಅವರ ಮಕ್ಕಳು ಅವರ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಮಾಡುತ್ತಿರುವುದು ಸಾರ್ಥಕವಾದದ್ದು ಎಂದರು.


ಸಂದರ್ಭದಲ್ಲಿ ಅವರ ಮಗ ಡಾ.ಭಗತ್ ರಾಮ್ ಮಾತನಾಡಿ, ತಮ್ಮ ತಂದೆಯ ಬಗ್ಗೆ ಕಂಡುಂಡ ಅನುಭವಗಳನ್ನು ಹಂಚಿಕೊಂಡರು. ನಮಗೆ ಆಸ್ತಿ ಮಾಡದಿದ್ದರೂ, ನಮ್ಮನ್ನೇ ಆಸ್ತಿ ಮಾಡಿ ಹೋಗಿದ್ದಾರೆ ಎಂದರು.

ಸಂದರ್ಭದಲ್ಲಿ ಅವರ ಹತ್ತಿರದವರಾದ ಶೆಟ್ಟಿಹಳ್ಳಿ ತಮ್ಮಯ್ಯ, ಬೊಮ್ಮಯ್ಯ, ಹೊಡಿಕೆಹೊಸಹಳ್ಳಿ ಚಂದ್ರು, ಅವರ ಸಹೋದರ ತಿಮ್ಮಯ್ಯ ಸೇರಿದಂತೆ ಅನೇಕರು ಪಾಲ್ಗೊಂಡು ರಾಮು ಅವರನ್ನು ಸ್ಮರಿಸಿ ಕೊಂಡರು.  ನಿರೂಪಣೆ ಯನ್ನು ನಿವೃತ್ತ ಶಿಕ್ಷಕ ರಾಮು ಮಾಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑