ವಿದ್ಯಾರ್ಥಿನಿ ಕೈಯಲ್ಲಿ ಟೇಪ್ ಕತ್ತರಿಸಿಸುವ ಮೂಲಕ ಶಾಲಾ ಕಟ್ಟಡ ಉದ್ಘಾಟಿಸಿಸಿದ ಹೆಚ್ಡಿಕೆ
ಶತಮಾನೋತ್ಸವ ಆಚರಿಸಿಕೊಂಡಿದ್ದ ನಗರದ ಬಿ ಆರ್ ಸಿ ಮತ್ತು ಗುರುಭವನದ ಬಳಿ ಇರುವ, ಐದು ಕೊಠಡಿಗಳ ಕಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡವನ್ನು, ಅದೇ ಶಾಲೆಯ ವಿದ್ಯಾರ್ಥಿನಿಯ ಕೈಯಲ್ಲಿ ಟೇಪ್ ಕತ್ತರಿಸಿಸುವ ಮೂಲಕ ಕಟ್ಟಡವನ್ನು ಶಾಸಕ ಹೆಚ್ ಡಿ ಕುಮಾರಸ್ವಾಮಿ ಉದ್ಘಾಟಿಸಿಸಿದರು.
ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಲು ಬಂದಿದ್ದ ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಹಾಲಿ ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರು ಶಾಲಾ ಕಟ್ಟಡವನ್ನು ಉದ್ಘಾಟಿಸುವ ಕಾರ್ಯಕ್ರಮವು ಇತ್ತು. ಗುತ್ತಿಗೆದಾರ ಎಲೆಕೇರಿ ನಂದೀಶ್ ರವರು ಶುಭ ವಾದ್ಯಗೋಷ್ಠಿಗಳೊಂದಿಗೆ ಶಾಸಕರನ್ನು ಸ್ವಾಗತಿಸಿದರು. ಉದ್ಘಾಟನೆ ಮಾಡಲು ಹೋದ ಕುಮಾರಸ್ವಾಮಿ ಯವರು ವಿದ್ಯಾರ್ಥಿನಿಯನ್ನು ಕರೆದು ಆಕೆಯ ಕೈಯಲ್ಲೇ ಟೇಪ್ ಕತ್ತರಿಸುವ ಮೂಲಕ ಅಚ್ಚರಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಸಮಿತಿ ವತಿಯಿಂದ ಕುಮಾರಸ್ವಾಮಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಐದು ಕೊಠಡಿಗಳಿಗೂ ಸಹ ಜ್ಞಾನ ಪೀಠ ಪ್ರಶಸ್ತಿ ಪಡೆದ ಕವಿವರ್ಯರ ಹೆಸರನ್ನು ಬರೆಸಿರುವುದನ್ನು ಶಾಸಕರು ಶ್ಲಾಘಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ತಹಶಿಲ್ದಾರ್ ನಾಗೇಶ್, ಬಿಇಓ ನಾಗರಾಜು, ಅಕ್ಷರ ದಾಸೋಹ ಸಿದ್ದರಾಜು, ಕಸಾಪ ಜಿಲ್ಲಾಧ್ಯಕ್ಷ ಸಿಂಲಿಂ ನಾಗರಾಜು, ಬಿಆರ್ಸಿ ಕುಸುಮಲತಾ, ಇಸಿಓ ನಾಗಮಣಿ, ಶಿಕ್ಷಕ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಉದ್ಘಾಟನಾ ಬಳಿಕ ಮಂಡಿಪೇಟೆಯಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು