Tel: 7676775624 | Mail: info@yellowandred.in

Language: EN KAN

    Follow us :


ಅಪರಾಧ ಮುಕ್ತ ಮತ್ತು ಸ್ವಚ್ಛ ತಾಲ್ಲೂಕು ಮಾಡಲು ಪತ್ರಕರ್ತರ ಜೊತೆ ಸಮಾಲೋಚಿಸಿದ ಡಿವೈಎಸ್ಪಿ ರಮೇಶ್

Posted date: 01 Mar, 2021

Powered by:     Yellow and Red

ಅಪರಾಧ ಮುಕ್ತ ಮತ್ತು ಸ್ವಚ್ಛ ತಾಲ್ಲೂಕು ಮಾಡಲು ಪತ್ರಕರ್ತರ ಜೊತೆ ಸಮಾಲೋಚಿಸಿದ ಡಿವೈಎಸ್ಪಿ ರಮೇಶ್

ಇಡೀ ಚನ್ನಪಟ್ಟಣ ತಾಲ್ಲೂಕನ್ನು ಅಪರಾಧ ಮುಕ್ತ, ಹಾಗೂ ನಗರ ಸೇರಿದಂತೆ ತಾಲ್ಲೂಕನ್ನು ಸ್ವಚ್ಛ ಮಾಡಲು ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣಾ, ಸಾರ್ವಜನಿಕರ ಸಹಾಯದ ಜೊತೆಗೆ ಪತ್ರಕರ್ತರ ಸಹಾಯ, ಸಲಹೆ ಮತ್ತು ಸೂಚನೆ ನಮ್ಮ ಇಲಾಖೆಗೆ ಅತ್ಯಗತ್ಯ ಎಂದು ಚನ್ನಪಟ್ಟಣ-ಕನಕಪುರ ಪೋಲೀಸ್ ಉಪ ಅಧೀಕ್ಷಕ ಕೆ ಎನ್ ರಮೇಶ್ ತಿಳಿಸಿದರು.

ಅವರು ಇಂದು ಅವರ ಕಛೇರಿಯಲ್ಲಿ ತಾಲ್ಲೂಕು ಪತ್ರಕರ್ತರ ಜೊತೆ ಸಮಾಲೋಚಿಸಿ ಮಾತನಾಡಿದರು.


ಚನ್ನಪಟ್ಟಣವನ್ನು ಚಂದದ ಪಟ್ಟಣವನ್ನಾಗಿ ಮಾಡಲು ನಾವೆಲ್ಲರೂ ಶ್ರಮವಹಿಸಿ ದುಡಿಯಬೇಕಾಗಿದೆ. ಚನ್ನಪಟ್ಟಣ ಕೇವಲ ತಾಲ್ಲೂಕು ಆಗಿ ಉಳಿದಿಲ್ಲ. ಇದು ಒಂದು ಐತಿಹಾಸಿಕ, ಪುರಾಣದ ಜೊತೆಗೆ ಸಾಂಪ್ರದಾಯಿಕ ಗೊಂಬೆಗಳ ತಯಾರಿಕೆಯಲ್ಲಿ ವಿಶ್ವಪ್ರಸಿದ್ದಿಯಾಗಿದೆ. ನಾವೆಲ್ಲರೂ ಒಗ್ಗೂಡಿ ಕೆಲಸ ನಿರ್ವಹಿಸಿದರೆ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಪತ್ರಕರ್ತರು ನಗರ ಮತ್ತು ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಟ್ರಾಫಿಕ್ ಸಮಸ್ಯೆ, ಸಿಸಿ ಟಿವಿ ಅಳವಡಿಸುವಿಕೆ, ನಗರದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ, ಕೋಳಿತ್ಯಾಜ್ಯ ಸಂಗ್ರಹ, ಬೀದಿಬದಿ ವ್ಯಾಪಾರ ತಡೆಗಟ್ಟಿ ನಗರಸಭೆಯಿಂದ ನಿರ್ಮಿಸಿರುವ ಮಳಿಗೆಗಳಿಗೆ ಸ್ಥಳಾಂತರ, ನಿರ್ದಿಷ್ಟ ಆಟೋ‌ ನಿಲ್ದಾಣ ಮತ್ತು ಶಿಸ್ತು ಕ್ರಮ, ಕಸ ವಿಂಗಡಣೆ, ವಾಹನಗಳನ್ನು ಕೊಳ್ಳಲು ಖಾಸಗಿ ಕಂಪನಿಯವರು ಸಾಲ ನೀಡಿದ್ದು, ಅವರ ಏಜೆಂಟ್ ಗಳು ರೌಡಿಗಳಂತೆ ವರ್ತಿಸುವುದು, ಕೆಲ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅಶಿಸ್ತು ಸೇರಿದಂತೆ ಹಲವು ಸಮಸ್ಯೆಗಳನ್ನು ಬಿಡಿಸಿಟ್ಟರು.


ಎಲ್ಲವನ್ನೂ ಆಲಿಸಿದ ರಮೇಶ್ ರವರು ಸಂಬಂಧಿಸಿದ ಇಲಾಖೆಯ ಮುಖ್ಯ ಅಧಿಕಾರಿಗಳನ್ನು ಕರೆಸಿ, ಇಂತಹ ಸಮಸ್ಯೆಗಳನ್ನು ಶೀಘ್ರವಾಗಿ ಹಾಗೂ ನ್ಯಾಯಯುತವಾಗಿ ಬಗೆ ಹರಿಸಲು ಸೂಚಿಸಲಾಗುವುದು. ಅಧಿಕಾರಿಗಳ ಸಭೆ ಕರೆದಾಗ ಪತ್ರಕರ್ತರ ಸಲಹೆ ಸೂಚನೆಗಳು ಸಹ ಅಷ್ಟೇ ಮುಖ್ಯವಾಗಿರುವುದರಿಂದ ತಾವೂಗಳು ಸಹ ಭಾಗವಹಿಸಿ ಚರ್ಚೆ ಮಾಡಿ ತಾಲ್ಲೂಕನ್ನು ಅಪರಾಧ ಮುಕ್ತ ಮತ್ತು ಸ್ವಚ್ಛ ಚನ್ನಪಟ್ಟಣ ವನ್ನಾಗಿ ಮಾಡೋಣಾ ಎಂದರು.


ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕರಾದ ಶಿವಕುಮಾರ್, ದಿವಾಕರ್, ಉಪ ನಿರೀಕ್ಷಕರಾದ ಶಿವಕುಮಾರ್, ರವೀಂದ್ರ, ಸದಾನಂದ, ಮಮತಾ ಮತ್ತು ತಾಲ್ಲೂಕಿನ ಪತ್ರಕರ್ತರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑