ಹೋಟೆಲ್ ಗ್ರಾಹಕರಿಗೆ ವಿಶೇಷ ರೀತಿಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಕೈಗೊಂಡ ಗೋಕುಲ ಹೋಟೆಲ್ ಮಾಲೀಕ
ಕಳೆದ ವರ್ಷದಿಂದ ದಿನೇದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚಿಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ ಶೂನ್ಯಕ್ಕೆ ಇಳಿದಿತ್ತು. ಈಗ ಮತ್ತೆ ಕೋವಿಡ್ ಎರಡನೆಯ ಅಲೆ ಶುರುವಾಗಿದ್ದು, ಕೇವಲ ಒಂದು ವಾರದಲ್ಲಿ 30 ಕ್ಕೂ ಹೆಚ್ಚು ಮಂದಿಗೆ ಸೋಂಕು ಹರಡಿದ್ದು, ಸದ್ಯ 28 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚನ್ನಪಟ್ಟಣ ನಗರದ ಎಂ.ಜಿ ರಸ್ತೆಯಲ್ಲಿರುವ ಶುಚಿ ಮತ್ತು ರುಚಿಗೆ ಹೆಸರುವಾಸಿವಾದ ಗೋಕುಲ್ ರೆಸ್ಟೋರೆಂಟ್ನಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಗ್ರಾಹಕರ ಅನುಕೂಲಕ್ಕೆ ನಾಲ್ಕು ಮಂದಿ ಕೂರುವ ಟೇಬಲ್ನಲ್ಲಿ ಪ್ರತ್ಯೇಕ ನಾಲ್ಕು ವಿಭಾಗಗಳನ್ನು ಮಾಡಿ ಒಬ್ಬರ ಮುಖ ಮತ್ತು ಉಸಿರು ಇನ್ನೊಬ್ಬರಿಗೆ ತಾಗದಂತೆ ವಿಶೇಷವಾಗಿ ಅಳವಡಿಸಿಕೊಂಡಿದ್ದಾರೆ.
ಅವರ ವ್ಯಾಪಾರ ನಡೆಯುವುದೇ ಗ್ರಾಹಕರಿಂದ, ಗ್ರಾಹಕರಿಗೆ ಕೋವಿಡ್ ಸಮಯದಲ್ಲಿ ಯಾವುದೇ ರೀತಿಯ ಸೋಂಕು ಹರಡದಂತೆ ತಡೆಗಟ್ಟುವುದುಕ್ಕೋಸ್ಕರ ಈ ನೂತನ ಆಲೋಚನೆಯನ್ನು ಮಾಲೀಕರಾದ ವಾಸು ದೇವ್ ಅವರು ಅಳವಡಿಸಿಕೊಂಡಿದ್ದಾರೆ.
ಇದರಿಂದ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದ್ದಾರೆ.
ಚನ್ನಪಟ್ಟಣದಾದ್ಯಂತ ವಿವಿಧ ಖಾದ್ಯಗಳ ಹಲವಾರು ಹೋಟೆಲ್ ಗಳಿದ್ದು, ಈ ರೀತಿಯ ಕ್ರಮಗಳನ್ನು ಅನುಸರಿಸಿದರೆ, ಒಂದು ಹಂತದ ಸೋಂಕನ್ನು ತಡೆಯಲು ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಈ ರೀತಿಯ ಅಥವಾ ಇನ್ನು ಹೆಚ್ಚಿನ ರೀತಿಯ
ಕ್ರಮಗಳನ್ನು ಕೈಗೊಂಡರೆ ತಾಲ್ಲೂಕಿನಲ್ಲಿ ಕೋವಿಡ್-19 ಅನ್ನು ತಡೆಗಟ್ಟಲು ಅನುಕೂಲಕರವಾಗುತ್ತದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು