Tel: 7676775624 | Mail: info@yellowandred.in

Language: EN KAN

    Follow us :


ನಮಗೆ ವಿರೋಧ ಪಕ್ಷಗಳೇ ಇಲ್ಲ. ಅವರೇ ನಮ್ಮ ಜೊತೆಯಲ್ಲಿದ್ದಾರೆ. ಹಾಗಾಗಿ ನಾವೇ ವಿರೋಧಿಗಳಾಗಬೇಕಾಗಿ ಬಂತು. ಸಿ ಪಿ ಯೋಗೇಶ್ವರ್

Posted date: 07 Jun, 2021

Powered by:     Yellow and Red

ನಮಗೆ ವಿರೋಧ ಪಕ್ಷಗಳೇ ಇಲ್ಲ. ಅವರೇ ನಮ್ಮ ಜೊತೆಯಲ್ಲಿದ್ದಾರೆ. ಹಾಗಾಗಿ ನಾವೇ ವಿರೋಧಿಗಳಾಗಬೇಕಾಗಿ ಬಂತು. ಸಿ ಪಿ ಯೋಗೇಶ್ವರ್

ಆಳುವ ಸರ್ಕಾರದ ವಿರುದ್ಧ ತಪ್ಪು ಕಂಡುಹಿಡಿದು, ಕಾಲೆಳೆಯಬೇಕಾದ ವಿರೋಧ ಪಕ್ಷಗಳು ನಮ್ಮ ಪಕ್ಷದವರ ಜೊತೆಯಲ್ಲಿ ಚೆನ್ನಾಗಿ ಇದ್ದಾರೆ. ಹಾಗಾಗಿ ನಮ್ಮ ಆಡಳಿತ ಪಕ್ಷದ ವಿರುದ್ಧ ನಾವೇ ವಿರೋಧ ಪಕ್ಷವಾಗಿ ಕೆಲಸ ಮಾಡುವ ಸಂದರ್ಭ ಬಂತು ಎಂದು ಪ್ರವಾಸೋದ್ಯಮ ಮತ್ತು ಜೀವಿಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲೂಕಿನ ಸುಣ್ಣಘಟ್ಟ ಸಮೀಪದಲ್ಲಿನ ಕರಣ್‍ಗೌಡ ಫಾರಂ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಸೂಚಿಸಿದರೆ ಯಾವುದೇ ಸಮಯದಲ್ಲೂ ರಾಜೀನಾಮೆಗೆ ಸಿದ್ಧ ಎಂಬ ಸಿಎಂ ಯಡ್ಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಈ ವಿಚಾರವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ. ಈಗಾಗಲೇ ನನ್ನ ಹೇಳಿಕೆಗಳು ಸಾಕಷ್ಟು ಸುದ್ದಿಯಾಗಿವೆ. ನಾನು ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವುದಿಲ್ಲ. ಸಿಎಂ ಬಗ್ಗೆ ಮಾತನಾಡಿದರೆ ಸುಖಾಸುಮ್ಮನೆ ವಿವಾದವಾಗುತ್ತಿದೆ. ವಿರೋಧ ಪಕ್ಷಗಳು ನಮ್ಮ ಪಕ್ಷದ ಜೊತೆ ಚೆನ್ನಾಗಿ ಇರುವ ಕಾರಣದಿಂದ ನಾವೇ ವಿರೋಧಪಕ್ಷವಾಗಬೇಕಾಯಿತು ಎಂದರು.


ವಿರೋಧಪಕ್ಷಗಳು ನಮ್ಮ ಪಕ್ಷದ ಜೊತೆ ಚೆನ್ನಾಗಿರುವ ಕಾರಣ, ಇದು ಮೂರು ಪಕ್ಷಗಳ ಸರ್ಕಾರ ಎಂದು ಜನ ತಿಳಿದುಕೊಂಡಿದ್ದಾರೆನ್ನುವ ಹೇಳಿಕೆ ನೀಡಿದ್ದೆ, ಆದರೆ ಅದನ್ನು ತಿರುಚಲಾಯಿತು. ನಾಯಕತ್ವ ಬದಲಾವಣೆ ಮಾಡುವಷ್ಟು ದೊಡ್ಡವನು ನಾನಲ್ಲ, ನಮ್ಮದು ರಾಷ್ಟ್ರೀಯ ಪಕ್ಷ. ಕಾಂಗ್ರೆಸ್ ಪಕ್ಷದ ತರಹ ಹೈಕಮಾಂಡ್ ಸಂಸ್ಕ್ರತಿಯಲ್ಲಾ, ನಮ್ಮದು ಪಾರ್ಲಿಮೆಂಟರಿ. ನಮ್ಮ ಪಕ್ಷದಲ್ಲಿ ಉನ್ನತ ನಾಯಕರು ಇದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ನಾನು ಅಷ್ಟೇ ಪಕ್ಷ ರಾಜೀನಾಮೆ ಕೇಳಿದರೆ ಕೊಡಬೇಕು ಎಂದು ತಿಳಿಸಿದರು.


ಯಡಿಯೂರಪ್ಪನವರ ಬಗ್ಗೆ ನಾನು ಎಂದಿಗೂ ಕಠೋರವಾಗಿ ಮಾತನಾಡಿಲ್ಲ. ನಾನು ಅವರ ಬಗ್ಗೆ ಯಾವತ್ತಿಗೂ ಸಾಫ್ಟ್ ಆಗಿದ್ದೇನೆ. ಅವರು ನಮ್ಮ ನಾಯಕರು. ಕಳೆದ ನಾಲ್ಕು ದಶಕಗಳಿಂದ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರ ವಿರುದ್ದ ಹಿಂದೆಯೂ ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ. ಕರೊನಾ ಸಂಕಷ್ಟದ ಸಮಯದಲ್ಲಿ ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ, ಸೋಂಕು ನಿಯಂತ್ರಣಕ್ಕೆ ಅವಶ್ಯಕವಿರುವ ಎಲ್ಲ ಕ್ರಮ ಕೈಗೊಂಡಿದ್ದಾರೆ, ಎಲ್ಲರೂ ಅವರಿಗೆ ಸಹಕಾರ ನೀಡುತ್ತಿದ್ದೇವೆ. ರಾಜಕೀಯದ ಬಗ್ಗೆ ಮಾತನಾಡುವ ಸಮಯ ಇದಲ್ಲ ಎಂದರು.


*ನಮ್ಮ ಪಕ್ಷ ಸ್ಪಂದಿಸುತ್ತಿದೆ:*

ಕರೊನಾ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪಕ್ಷದ ವತಿಯಿಂದ ನಿರಂತರವಾಗಿ ಸ್ಪಂದನೆ ನೀಡಲಾಗುತ್ತಿದೆ. ಬಡವರು, ನಿರ್ಗತಿಕರಿಗೆ ಪ್ರತಿದಿನ  ಪಕ್ಷದ ಕಾರ್ಯಕರ್ತರು ಎರಡು ಹೊತ್ತು ಊಟ ನೀಡುವ ಕೆಲಸ ಮಾಡುತ್ತಿದ್ದಾರೆ, ಇಂದು 1 ಲಕ್ಷ ಮಾಸ್ಕ್ ಗಳನ್ನು ವಿತರಿಸಿದ್ದೇವೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ಜವಾಬ್ದಾರಿಯನ್ನು ಮೆರೆಯುತ್ತಿದ್ದಾರೆ. ಪಕ್ಷದ ಮುಖಂಡರಾದ ಗೋವಿಂದರಾಜು 500 ಕ್ಕೂ ಹೆಚ್ಚು ದಿನಸಿಕಿಟ್‍ಗಳನ್ನು ವಿತರಿಸುತ್ತಿದ್ದಾರೆ. ಇದಕ್ಕೆ ಚಾಲನೆ ನೀಡಲು ಬಂದಿದ್ದೇನೆ, ರಾಜಕೀಯ ಹೆಚ್ಚು ಮಾತನಾಡಲ್ಲ, ನೀವೂ ಅದರ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ಮನವಿ ಮಾಡಿದರು.


*ದಿನಸಿಕಿಟ್ ಮತ್ತು ಮಾಸ್ಕ್ ವಿತರಣೆ:*

ಸುಣ್ಣಘಟ್ಟ ಸಮೀಪದಲ್ಲಿರುವ ಕರಣ್‍ಗೌಡ ಫಾರಂನಲ್ಲಿ ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡ ಗೋವಿಂದರಾಜು 500 ಕ್ಕೂ ಹೆಚ್ಚಿನ ದಿನಸಿಕಿಟ್‍ಗಳನ್ನು ವಿತರಿಸಿದರು. ಈ ಕಾರ್ಯಕ್ರಮಕ್ಕೆ ಸಚಿವ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು. ಕಲಾವಿದರು ಸೇರಿದಂತೆ ವಿವಿಧ ವರ್ಗಕ್ಕೆ ಗುಣಮಟ್ಟದ ದಿನಸಿಕಿಟ್‍ಗಳನ್ನು ಸಮಾಜ ಸೇವಕ ಗೋವಿಂದರಾಜು ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ತಾಲೂಕಿಗೆ ನನ್ನ ಕೈಲಾದ ಸೇವೆ ಮಾಡಲು ಇದು ಉತ್ತಮ ಸಮಯ ಎಂಬ ಕಾರಣದಿಂದ ಇಂದು ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಹಂತಗಂತವಾಗಿ ವಿಸ್ತರಿಸಲಾಗುವುದು ಎಂದು ತಿಳಿಸಿದರು. ಚನ್ನಪಟ್ಟಣ ನಗರದ 5 ನೇ ಅಡ್ಡರಸ್ತೆಯ ತಮ್ಮ ನಿವಾಸದಲ್ಲಿ ತಾಲೂಕಿನ ಜನತೆಗೆ ಒಂದುಲಕ್ಷ ಮಾಸ್ಕ್ ವಿತರಿಸುವ ಕಾರ್ಯಕ್ರಮಕ್ಕೆ ಸಚಿವ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು. ಈ ವೇಳೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ, ಪಕ್ಷದ ನಗರ ಬಿಜೆಪಿ ಅಧ್ಯಕ್ಷ ಆರ್. ಶಿವಕುಮಾರ್, ಪಕ್ಷದ ವಕ್ತಾರ ಗೋಪಿಕೃಷ್ಣ, ಪಕ್ಷದ ಮುಖಂಡರಾದ ಬ್ರಹ್ಮಣೀಪುರ ಪ್ರಸನ್ನ, ತಗಚಗೆರೆ ಕುಳ್ಳಪ್ಪ, ಬಸವರಾಜು, ಚಕ್ಕಲೂರು ಚೌಡಯ್ಯ, ಶರತ್, ಕೋಟೆಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑