ಕುದಿಯುವ ಸಾಂಬಾರ್ ಮೈಮೇಲೆ ಬಿದ್ದು, ಸಾವನ್ನಪ್ಪಿದ ಹಸುಗೂಸು ಧನ್ವಿಕ್
ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದ ಚೌಡಯ್ಯನವರ ಮೊಮ್ಮಗ, ಚೌಡೇಶ್ ಮತ್ತು ರಾಧಾ ಎಂಬುವವರ ಒಂದೂವರೆ ವರ್ಷದ ಧನ್ವಿಕ್ ಎಂಬ ಗಂಡು ಪಾಪುವಿನ ಮೇಲೆ ಕುದಿಯುವ ಸಾಂಬಾರು ಮೈಮೇಲೆ ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜರುಗಿದೆ.
ಸೋಮವಾರ ರಾತ್ರಿ ಅಡುಗೆ ಮಾಡುವ ಸಂದರ್ಭದಲ್ಲಿ ಆಟವಾಡುತ್ತಿದ್ದ ಮಗು ಗ್ಯಾಸ್ ಸರಬರಾಜಾಗುವ ಪೈಪನ್ನು ಆಕಸ್ಮಿಕವಾಗಿ ಎಳೆದ ಸಂದರ್ಭದಲ್ಲಿ ಪಾತ್ರೆಯಲ್ಲಿ ಕುದಿಯುತ್ತಿದ್ದ ಸಾಂಬಾರು ಮಗುವಿನ ಮೈಮೇಲೆ ಚಲ್ಲಿದೆ. ಇದರಿಂದ ಆಘಾತಗೊಂಡ ಮಗು ಪ್ರಜ್ಞೆ ತಪ್ಪಿ ಬಿದ್ದಿದೆ.
ಮೊದಲಿಗೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಮಂಡ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಗು ಮಂಗಳವಾರ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರು ಶವವನ್ನು ಪಡೆದು ದೇವರಹೊಸಹಳ್ಳಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಅಂತ್ಯ ಸಂಸ್ಕಾರದ ವೇಳೆ ಕುಟುಂಬದವರ ರೋದನ ನೆರೆದವರ ಕರುಳು ಕತ್ತರಿಸುವಂತಿತ್ತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು