Tel: 7676775624 | Mail: info@yellowandred.in

Language: EN KAN

    Follow us :


ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ ದಂಪತಿಗಳನ್ನು ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು

Posted date: 03 Oct, 2021

Powered by:     Yellow and Red

ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕ ದಂಪತಿಗಳನ್ನು ಮೆರವಣಿಗೆ ಮಾಡಿದ ವಿದ್ಯಾರ್ಥಿಗಳು

ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಸುಸಂದರ್ಭದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ಕೃಷ್ಣಪ್ಪ ದಂಪತಿಗಳನ್ನು ಬಿಳಗುಂಬ ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಕರೆತಂದು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ವೃಂದ, ಹಾಗೂ ಬಿಳಗುಂಬ ಗ್ರಾಮಸ್ಥರಿಂದ ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.


ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಕೃಷ್ಣಪ್ಪನವರು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಸಂದರ್ಭದಲ್ಲಿ ನನ್ನನು ಗೌರವಿಸಿದ ನಿಮಗೆ ಚಿರ ಋಣಿಯಾಗಿದ್ದೇನೆ. ನಾನು ಬಿಳಗುಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1994 ರಲ್ಲಿ ಪ್ರಥಮವಾಗಿ ಸೇವೆ ಪ್ರಾರಂಭಿಸಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಮುಖಂಡರು, ಪೋಷಕರು ಹಾಗೂ ಪ್ರೀತಿಯ ವಿದ್ಯಾರ್ಥಿಗಳು ಸಹಕರಿಸಿ ನಾನು ಪ್ರಶಸ್ತಿ ಪಡೆಯಲು ರಮ್ಮ ಗ್ರಾಮವೇ ನನಗೆ ಬುನಾದಿಯಾಗಿ ಪ್ರಶಸ್ತಿ ದೊರೆಯಲು ಪ್ರೋತ್ಸಾಹಿಸಿದಂತಾಗಿದೆ. ಇದೇ ವೇಳೆ ಎಲ್ಲಾ ಅಧಿಕಾರಿಗಳು ಹಾಗೂ ಶಿಕ್ಷಕವೃಂದದವರನ್ನು ಸ್ಮರಣೆ ಮಾಡಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಂ.ಪಂ.ಮಾಜಿ ಸದಸ್ಯರಾದ ಬಿ.ವಿ.ರಾಂಜೇಂದ್ರ ಮಾತನಾಡಿ ಅವರಿಗೆ ಅಭಿನಂದನೆ ಸಲ್ಲಿಸುವ ಸಂದರ್ಭ ನಮಗೆ ತುಂಬಾ ಸಂತೋಷ ತಂದಿಕೊಟ್ಟಿದೆ. ನಮ್ಮ ಶಾಲೆಯ ಮಕ್ಕಳು ಅವರಂತೆ ಉನ್ನತ ಮಟ್ಟದ ವ್ಯಕ್ತಿಗಳಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ 2008 ರ ಹಿರಿಯ ವಿದ್ಯಾರ್ಥಿಗಳಿಂದ 8 ಮಂದಿ ಶಿಕ್ಷಕ ವೃಂದಕ್ಕೆ ಗುರುವಂದನೆ ಸಲ್ಲಿಸಿದರು, ವೇದಿಕೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀನಿವಾಸ್ ವಹಿಸಿದ್ದರು,  ಮುಖ್ಯ ಅತಿಥಿಗಳಾಗಿ ತಿಮ್ಮಪ್ಪ, ಗ್ರಾಮ.ಪಂ. ಉಪಾಧ್ಯಕ್ಷರಾದ ಚಂದ್ರಶೇಖರ್, ಪರಿಸರ ಪ್ರೇಮಿ  ಬಿ.ಟಿ.ರಾಜೇಂದ್ರು, ಮುಖ್ಯ ಉಪಾಧ್ಯಾಯರಾದ ನಾಗಭೈರೈಯ್ಯ ಇದ್ದರು.  ಎಲ್ಲರನ್ನೂ ಬಿ.ಟಿ.ದಿನೇಶ್ ಬಿಳಗುಂಬ ಸ್ವಾಗತಿಸಿದರು, ಕಿರಣ್ ಕುಮಾರ್.ಎನ್ ವಂದಿಸಿದರು, ಹಿರಿಯಶಿಕ್ಷಕ ಮಹಾದೇವಯ್ಯ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಹಿರಿಯ ವಿದ್ಯಾರ್ಥಿಗಳು, ಯುವ ಮಿತ್ರರು ಹಾಗೂ ಬಿಳಗುಂಬ ಗ್ರಾಮಸ್ಥರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑