ಕೋಳಿಫಾರಂ ಗೆ ಚಿರತೆ ದಾಳಿ ಲಕ್ಷಾಂತರ ರೂ ಲುಕ್ಸಾನು
ರಾಮನಗರ.ಅ.25/21: ರಾಮನಗರ ತಾಲೂಕಿನ ಬಿಡದಿ ಹೋಬಳಿ ಶೆಟ್ಟಿಗೌಡನದೊಡ್ಡಿ ಗ್ರಾಮದ ಬಳಿ ಇರುವ ಕೋಳಿ ಫಾರಂ ನಲ್ಲಿ ಚಿರತೆ ಏಕಾಏಕಿ ದಾಳಿ ನಡೆಸಿ ನೂರಾರು ಕೋಳಿಗಳ ಮಾರಣ ಹೋಮ ನಡೆಸಿದೆ.
ಶೆಟ್ಟಿಗೌಡನದೊಡ್ಡಿ ಬಳಿಯಿರುವ ನಾಟಿ ಕೋಳಿ ಫಾರಂ ನೊಳಗೆ ಕಳೆದ ರಾತ್ರಿ ನುಗ್ಗಿದ ಚಿರತೆ, ಗ್ರಾಮದ ರೈತ ಭಾಸ್ಕರ್ ಎಂಬುವರ ಮಾಲೀಕತ್ವದ ಕೋಳಿ ಫಾರಂ ನಲ್ಲಿನ ನೂರಾರು ಕೋಳಿಗಳ ಮೇಲೆ ದಾಳಿ ಮಾಡಿ, ಇಷ್ಟಾನುಸಾರ ಕೋಳಿಗಳನ್ನು ಬಲಿ ತೆಗೆದುಕೊಂಡಿದೆ.
ಚಿರತೆ ದಾಳಿಗೆ ನೂರಾರು ನಾಟಿ ಕೋಳಿಗಳು ಸಾವನ್ನಪ್ಪಿದ್ದು, ಇದರಿಂದ ಭಾರಿ ನಷ್ಟ ಅನುಭವಿಸಿರುವ ರೈತ ಕುಟುಂಬ ಕಂಗಾಲಾಗಿದೆ. ಇವರಿಗೆ ಸೂಕ್ತ ರೀತಿಯ ಪರಿಹಾರವನ್ನು ಒದಗಿಸಕೊಡಬೇಕಾಗಿದೆ ಎಂದು ಗ್ರಾಮದ ನಾಗರೀಕರು ಒತ್ತಾಯಿಸಿದ್ದಾರೆ.
ರೈತ ಆನೆ ದಾಳಿಯಿಂದ ಬೆಳೆ ಕಳೆದುಕೊಂಡಾಗ, ಅದೇ ರೀತಿಯಲ್ಲಿ ಬೇರೆ ಬೇರೆ ಪ್ರಾಣಿಗಳ ಉಪಟಳದಿಂದ ಪ್ರಾಣ ಕಳೆದುಕೊಂಡಾಗ ಅವರ ಕುಟುಂಬಕ್ಕೆ ತುಟಿಗೆ ತುಪ್ಪ ಸವರುವ ಕೆಲಸವನ್ನು ಮಾಡಲಾಗುತ್ತದೆಯೇ ಹೊರತಾಗಿ, ಅವರ ಕುಟುಂಬದ ಅಭಿವೃದ್ಧಿಗೆ ಪೂರಕವಾದ ಸಹಾಯ ಮಾಡುವುದಿಲ್ಲ.
ಇಂತಹ ದುಸ್ಥಿತಿಯಲ್ಲಿ ಸರ್ಕಾರ ವೈಜ್ಞಾನಿಕವಾದ ಪರಿಹಾರವನ್ನು ಒದಗಿಸಿಕೊಡಬೇಕು. ಇಲ್ಲದಿದ್ದರೆ ಆ ರೈತನ ಬದುಕು ಒಂದಲ್ಲ ಒಂದು ರೀತಿಯಲ್ಲಿ ಬರ್ಬಾದ್ ಆಗುತ್ತದೆ.
ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು, ಭೇಟಿ ಸಂದರ್ಭದಲ್ಲಿ ಎಲ್ಲಾ ರೀತಿಯ ಸಹಕಾರವನ್ನು ಸಹಾಯವನ್ನು ಒದಗಿಸಿಕೊಡುವುದಾಗಿ ಹೇಳಿ ಹೋಗುವರು, ಆದರೆ ಆ ವಿಷಯವನ್ನು ಹೋಗುತ್ತಿದ್ದಂತಯೇ ಮರೆಯುವುದು ಇಂದು ನಡೆಯುತ್ತಿರುವ ಸಾಧನೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ರೈತನಿಗೆ ಸಾಂತ್ವನ ಹೇಳಿ, ಪರಿಶೀಲನೆ ನಡೆಸಿ ಹೋಗಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು