ರೈತರ ಹೆಗಲಿನ ಮೇಲಿನ ಶಾಲು ರಾಜಕಾರಣಿಗಳಿಗೆ ನಾಗರಹಾವು. ಮುಳ್ಳಳ್ಳಿ ಮಂಜುನಾಥ
ಹಸಿರು ಶಾಲು ಎಂದರೆ ರಾಜಕಾರಣಿಗಳು ಬೆಚ್ಚಿ ಬೀಳುತ್ತಿದ್ದರು. ಇತ್ತೀಚೆಗೆ ರೈತರನ್ನು ಅಧಿಕಾರಿಗಳು ಮತ್ತು ರಾಜಕಾರಣಿಗಳು ರೈತರನ್ನು ಬೆಚ್ಚಿ ಬೀಳಿಸುತ್ತಿದ್ದಾರೆ. ಆದರೆ ಇನ್ನು ಮುಂದೆ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಇದೇ ಹಸಿರು ಶಾಲು ಬೆಚ್ಚಿ ಬೀಳಿಸುವ ಸಮಯ ದೂರವಿಲ್ಲಾ. ಯುವಕರು ಹೆಚ್ಚಿನ ಆಸಕ್ತಿ ತೋರಿ ರೈತಸಂಘಕ್ಕೆ ಬಂದರೆ ರೈತರ ಅಭ್ಯುದಯ ಆಗುತ್ತದೆ. ಆ ಸಮಯದಲ್ಲಿ ರಾಜಕಾರಣಿಗಳಿಗೆ ಶಾಲನ್ನು ನೋಡಿದಾಕ್ಷಣ ಅವರ ಹೆಗಲೇರಿದಂತೆ ಕಾಣುತ್ತದೆ ಎಂದರು.
ಅವರು ಇಂದು ತಾಲ್ಲೂಕಿನ ಬ್ರಹ್ಮಣಿಪುರ ಗ್ರಾಮದಲ್ಲಿ ಸಮಾನ ಮನಸ್ಕರ ಸಹಭಾಗಿತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕ್ಕೆ ರೈತರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರಿಗೆ ಸರ್ಕಾರದಿಂದ ಹಲವಾರು ಸವಲತ್ತುಗಳು ಇವೆ. ಆದರೆ ಅವುಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲಾ. ಅದಕ್ಕೆಂದೆ ದಲ್ಲಾಳಿಗಳು ಹುಟ್ಟಿಕೊಂಡಿದ್ದು, ಅವರಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಅಧಿಕಾರಿಗಳ ರಕ್ಷಣೆಗೆ ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ನಿಂತಿದ್ದು, ರೈತರ ವಿರುದ್ದ ಸೆಟೆದು ನಿಂತಿದ್ದಾರೆ. ಹಾಗಾಗಿ ರೈತರು ಒಗ್ಗೂಡಿ, ಹೋರಾಟ ಮಾಡಿದರೆ ಮಾತ್ರ ರೈತ ಕುಲ ಉದ್ದಾರವಾಗಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಮುಂದುವರೆಯೋಣಾ ಎಂದು ಕರೆ ನೀಡಿದರು.
ನೇತೃತ್ವ ವಹಿಸಿ ಮಾತನಾಡಿದ ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಮಾತನಾಡಿ, ರೈತಸಂಘ ಒಂದು ತೆರೆದ ಶಾಲೆಯಿದ್ದಂತೆ. ಆ ಶಾಲೆಗೆ ನೀವು ಇಂದು ಪ್ರವೇಶ ಪಡೆದಿದ್ದೀರಿ. ಹಂತಹಂತವಾಗಿ ಪದವಿ ಪಡೆಯಬೇಕು. ಆಗಲೆ ಸಂಘದ ಒಳಹೊರಹು ತಿಳಿಯಲು ಸಾಧ್ಯವಾಗುತ್ತದೆ. ನಿಮ್ಮ ಹಕ್ಕನ್ನು ಪಡೆದುಕೊಳ್ಳಲು, ಹೋರಾಟವೊಂದೇ ಬಹುದೊಡ್ಡ ಅಸ್ತ್ರ ಎಂದರು.
ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೇಶಕ್ಕೆ ಸಂವಿಧಾನ ಕೊಟ್ಟರೆ, ನಂಜುಂಡಸ್ವಾಮಿ ಯವರು 'ರೈತ ಸಂವಿಧಾನ' ಕೊಟ್ಟಿದ್ದಾರೆ. ಅದನ್ನು ನಾವು ಬಳಸಿಕೊಂಡು, ಬೆಳೆಯಬೇಕು ಮತ್ತು ಬೆಳೆಸಬೇಕು.
ಮುಂದಿನ ದಿನಗಳಲ್ಲಿ ವಿಚಾರ ಮತ್ತು ಅಧ್ಯಯನ ಶಿಬಿರಗಳನ್ನು ಹಮ್ಮಿಕೊಂಡು ರೈತರಿಗೆ ಕಾನೂನು ಹೇಗಿರಬೇಕೆಂದು ತಿಳಿಸಲು ಹಲವಾರು ಪರಿಣತರನ್ನು ಕರೆದು ಚರ್ಚಿಸೋಣ ಎಂದು ತಿಳಿಸಿದರು.
ಹಿರಿಯ ರೈತ ಮುಖಂಡ ಹೊಂಬಾಳೇಗೌಡರು ಮಾತನಾಡಿ, ಪ್ರೊ ನಂಜುಂಡಸ್ವಾಮಿ, ಸೋಮಲಿಂಗಣ್ಣ ಸೇರಿದಂತೆ ಹಲವರ ಒಡನಾಟದಿಂದ ರಾಜ್ಯದಾದ್ಯಂತ ಸಂಘಟನೆ ಮಾಡಿದ್ದೇವೆ. ಸಂಘಟನೆ ಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಅವರಿಗೆ ನಾವು ಅವರ ಹಕ್ಕನ್ನು ಗಳಿಸಿಕೊಳ್ಳಲು ಮುನ್ನುಡಿ ಬರೆಯಬೇಕು. ಅವರ ಹಕ್ಕನ್ನು ಯಾರೂ ಕಸಿದುಕೊಳ್ಳದಂತೆ ಇಂದಿನಿಂದಲೇ ತಡೆಯಬೇಕು. ಅದಕ್ಕೆ ಇಂದಿನ ಯುವಕರು ಮುಂದೆ ಬರಬೇಕು ಎಂದರು.
ರಾಮನಗರ ಜಿಲ್ಲಾದ್ಯಂತ ಆಗಮಿಸಿದ ಹಲವಾರು ರೈತಮುಖಂಡರು ಯುವ ರೈತರಿಗೆ ಅವರದೇ ಅನುಭವಗಳನ್ನು ತಮ್ಮ ಮಾತಿನ ಧಾಟಿಯಲ್ಲಿ ತಿಳಿಸಿದರು.
ಬ್ರಹ್ಮಣಿಪುರ ಗ್ರಾಮದ ಎಂಭತ್ತಕ್ಕೂ ಹೆಚ್ಚು ಮಂದಿ ಯುವಕರು ಹಸಿರು ಶಾಲು ಹಾಕಿಕೊಂಡು, ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನೇಗೌಡ, ತಮ್ಮಣ್ಣಗೌಡ, ಚಲುವೇಗೌಡ, ಸಿದ್ದಪ್ಪ, ನಂಜಪ್ಪ (ಕುಮಾರ್), ವೆಂಕಟೇಶ್, ಪ್ರಕಾಶ್, ಉಯ್ಯಂಬಳ್ಳಿ ಸತೀಶ್, ಆಲನತ್ತ ಲೋಕೇಶ್, ದಯಾನಂದಸಾಗರ್, ಎಲೆಕೇರಿ ಸಿದ್ದಪ್ಪ, ದೇವರಹೊಸಹಳ್ಳಿ ಶಿವಕುಮಾರ್, ಬ್ರಹ್ಮಣಿಪುರ ಗ್ರಾಮದ ಎಂಭತ್ತಕ್ಕೂ ಹೆಚ್ಚು ಯುವಕರು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು