Tel: 7676775624 | Mail: info@yellowandred.in

Language: EN KAN

    Follow us :


ಗಣೇಶ ವಿಸರ್ಜನೆ, ಈದ್-ಮಿಲಾದ್ ಹಿನ್ನೆಲೆ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಪೋಲಿಸ್ ಅನುಮತಿ ಇಲ್ಲ

Posted date: 28 Sep, 2023

Powered by:     Yellow and Red

ಗಣೇಶ ವಿಸರ್ಜನೆ, ಈದ್-ಮಿಲಾದ್ ಹಿನ್ನೆಲೆ ನಮೋ ಬ್ರಿಗೇಡ್ ಕಾರ್ಯಕ್ರಮಕ್ಕೆ ಪೋಲಿಸ್ ಅನುಮತಿ ಇಲ್ಲ

ಚನ್ನಪಟ್ಟಣ:ತಾಲ್ಲೂಕಿನ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ ದಿಂದ ಇಂದು ಸಂಜೆ ಐದು ಗಂಟೆಗೆ ಬೈಕ್ ರ್ಯಾಲಿ ಹೊರಟು ನಂತರ ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಸಮೃದ್ಧ-ಸದೃಢ ಭಾರತಕ್ಕಾಗಿ ನಮೋ ಬ್ರಿಗೇಡ್ ವತಿಯಿಂದ ಆಯೋಜಿಸಿದ ಕಾರ್ಯಕ್ರಮಕ್ಕೆ ಪುರ ಪೋಲಿಸರು ಅನುಮತಿ ನಿರಾಕರಣೆ ಮಾಡಿದ್ದಾರೆ.


ಇಂದು ನಗರದಲ್ಲಿ ಹದಿಮೂರು ಕಡೆ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ಹಾಗೂ ಇಂದು ಈದ್-ಮಿಲಾದ್ ಹಬ್ಬ ಹಾಗೂ ಮೂರು ಕಡೆ ಮೆರವಣಿಗೆ ಇರುವುದರಿಂದ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲು ಆಗುವುದಿಲ್ಲಾ ಹಾಗೂ ಚನ್ನಪಟ್ಟಣ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಎರಡೂ ಕಾರ್ಯಕ್ರಮವೂ ಒಟ್ಟಿಗೆ ನಡೆಯಲು ಸಾಧ್ಯವಾಗುವುದಿಲ್ಲ ಎಂಬುದು ಪೋಲಿಸರ ಅಭಿಪ್ರಾಯವಾಗಿದೆ. ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಒಟ್ಟಾರೆ ಬ್ರೇಕ್ ಬಿದ್ದಂತಾಗಿದೆ.


ಕಳೆದ ೨೩ನೇ ತಾರೀಖಿನಂದು ನಮಗೆ ಅನುಮತಿ ನೀಡಿದ್ದು ನಂತರ ಆಗಲ್ಲಾ ಎಂದು ನಿರಾಕರಿಸಿದ್ದಾರೆ, ಕಾನೂನು-ಸುವ್ಯವಸ್ಥೆ ಮುಂದಿಟ್ಟುಕೊಂಡು ನಿರಾಕರಿಸಿದ್ದಾರೆ, ಆದರೆ ವೇದಿಕೆ ಕಾರ್ಯಕ್ರಮಕ್ಕೂ ಸಹ ಅನುಮತಿ ನೀಡಿಲ್ಲದಿರುವುದಿಂದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದವರೂ ಸಹ ನಿರಾಕರಿಸುತ್ತಿದ್ದಾರೆ, ಆದರೆ ಚಕ್ರವರ್ತಿ ಸೂಲಿಬೆಲೆ ಯವರು ಮಾತ್ರ ಪೂರ್ವ ಯೋಜನೆಯಂತೆ ನಗರಕ್ಕೆ ಆಗಮಿಸುತ್ತಾರೆ, ಕಾರ್ಯಕ್ರಮ ಆಗುವುದಾ ಇಲ್ಲವಾ ಎಂಬುದು ಗೊತ್ತಿಲ್ಲಾ ಎಂದು ಹಿಂದು ಜಾಗರಣ ವೇದಿಕೆಯ ಧನಂಜಯ ಮಾಹಿತಿ ನೀಡಿದ್ದಾರೆ.


ಕಾನೂನು ಸುವ್ಯವಸ್ಥೆ ಕಾರಣದಿಂದ ಬೈಕ್ ರ್ಯಾಲಿ ನಿಷೇಧ ಮಾಡಲಿ ಆದರೆ ವೇದಿಕೆ ಕಾರ್ಯಕ್ರಮ ಕ್ಕೆ ಅನುಮತಿ ನೀಡಬೇಕಾಗಿತ್ತು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಹ ವೇದಿಕೆ ಕಾರ್ಯಕ್ರಮಕ್ಕೆ ಈಗಲೂ ಅನುಮತಿ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ವಕೀಲ ಸುರೇಶ್ ತಿಳಿಸಿದ್ದಾರೆ.


ಮತ್ತೊಂದು ದಿನ ಕಾರ್ಯಕ್ರಮ ಮಾಡಿಕೊಳ್ಳುವಂತೆ ನಮೋ ಬ್ರಿಗೇಡ್ ನವರಿಗೆ ತಿಳುವಳಿಕೆ ನೀಡಲಾಗಿದೆ, ಮೇಲಾಧಿಕಾರಿಗಳ ಗಮನ ಕ್ಕೂ ಈ ವಿಷಯ ತಿಳಿಸಿದ್ದು ಅವರೂ ಸಹ ಅನುಮತಿ ನಿರಾಕರಿಸಿದ್ದಾರೆ ಎಂದು ಡಿವೈಎಸ್ಪಿ ಓಂಪ್ರಕಾಶ್, ನಗರ ವೃತ್ತ ನಿರೀಕ್ಷಕಿ ಶೋಭಾ ವಿ ಮತ್ತು ಉಪ ನಿರೀಕ್ಷಕ ಹರೀಶ್ ರವರು ಮಾಹಿತಿ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑