Tel: 7676775624 | Mail: info@yellowandred.in

Language: EN KAN

    Follow us :


ಅಬಿದಾಬಾನು ಸದಸ್ಯತ್ವವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸುತ್ತೇನೆ, ವಾಸೀಲ್ ಅಲಿಖಾನ್

Posted date: 03 Dec, 2023

Powered by:     Yellow and Red

ಅಬಿದಾಬಾನು ಸದಸ್ಯತ್ವವನ್ನು ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸುತ್ತೇನೆ, ವಾಸೀಲ್ ಅಲಿಖಾನ್

ಚನ್ನಪಟ್ಟಣ: ಸಭೆ ಮುಗಿಸಿ ಹೊರಬಂದಾಗ ನನ್ನ ಮೇಲೆ ನಗರಸಭೆ ಆವರಣದಲ್ಲೇ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 28ನೇ ವಾರ್ಡ್ ನಗರಸಭೆ ಸದಸ್ಯೆ ಅಬಿದಾ ಬಾನು ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿಗಳು ರದ್ದುಪಡಿಸಬೇಕು ಎಂದು ನಗರಸಭೆ ಕಾಂಗ್ರೆಸ್ ಸದಸ್ಯ ವಾಸೀಲ್ ಅಲಿಖಾನ್ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಪ್ರಸ್ತಾಪವಾದ ವಿಚಾರಕ್ಕೆ ಸಂಬಂಧಿಸಿದಂತೆ 28ನೇ ವಾರ್ಡ್ ಸದಸ್ಯೆ ಅಬಿದಾ ಬಾನು ಮಗ ಸುಹೇಲ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಪ್ರಕರಣದ ವಿಡಿಯೋ ಸೇರಿದಂತೆ ಎಲ್ಲ ದಾಖಲೆಗಳನ್ನು  ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದ್ದು, ಜನಪ್ರತಿನಿಧಿಗೆ ಅಪಮಾನ ಮಾಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.


ರಾಜೀನಾಮೆಗೆ ನಿರ್ಧರಿಸಿದ್ದೆ: ಮೊನ್ನೆ ನಗರಸಭೆ ಆವರಣದಲ್ಲಿ ನಡೆದ ಘಟನೆ ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದ್ದು, ಇದರಿಂದ ಮನನೊಂದ ನನ್ನ ನಗರಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ, ಇತರೆ ನಗರಸಭೆ ಸದಸ್ಯರು, ಹಿತೈಷಿಗಳ ಒತ್ತಾಯದ ಮೇರೆಗೆ ನನ್ನ ನಿರ್ಧಾರವನ್ನು ಹಿಂಪಡೆದೆ ಎಂದು ತಿಳಿಸಿದರು.


ನಗರಸಭೆಗೆ ಆಯ್ಕೆಯಾದ ಮಹಿಳಾ ಸದಸ್ಯರ ಕುಟಂಬದವರು ಹಸ್ತಕ್ಷೇಪ ನಡೆಸುತ್ತಾ, ಅಧಿಕಾರ ನಡೆಸುತ್ತಿರುವ ವಿಚಾರವನ್ನು ನಾನು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದೆ. ಆಗ ಮಹಿಳಾ ಸದಸ್ಯರು ನಮ್ಮ ಅಧಿಕಾರ ನಾವು ಚಲಾಯಿಸುತ್ತಿದ್ದೇವೆ. ಯಾರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿ ಎಂದು ಒತ್ತಾಯಿಸಿದರು. ಆಗ ನಾನು ಅನಿವಾರ್ಯವಾಗಿ 28ನೇ ವಾರ್ಡ್ ಸದಸ್ಯೆ ಅಬಿದಾ ಬಾನು ಹೆಸರು ಹೇಳಬೇಕಾಯಿತು. ಇದನ್ನು ಅವರು ವಿರೋಧಿಸಿ ಅಲ್ಲೇ ಮಾತಿನ ಚಕಮುಕಿ ನಡೆಯಿತು.


ಆದರೆ ಸಭೆ ಮುಗಿಸಿ ಹೊರಬಂದ ಮೇಲೆ ಅವರ ಮಗ ಸುಹೇಲ್ ಕೆಲವು ರೌಡಿಗಳನ್ನು ಜತೆಗೆ ಕರೆದುಕೊಂಡು ಬಂದ ನಗರಸಭೆ ಆವರಣದಲ್ಲೇ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಅವರ ತಾಯಿ ಸಹ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ವಿವರಿಸಿದರು.  


ಸುಹೇಲ್ ಬೆಳಗ್ಗೆಯಿಂದ ಸಂಜೆಯವರೆಗೆ  ನಗರಸಭೆಯಲ್ಲೇ ಆವರಣದಲ್ಲೇ ಇದ್ದು, ಎಲ್ಲ ನಿಯಂತ್ರಣ ಮಾಡಲು ನೋಡುತ್ತಾನೆ. ಅಧಿಕಾರಿಗಳನ್ನು  ಬ್ಲಾಕ್ ಮೇಲೆ ಮಾಡುತ್ತಾನೆ. ಅಧಿಕಾರಿಗಳ ಯಾವ ವೀಕ್‍ನೆಸ್ ಅವನ ಬಳಿ ಇದೆಯೋ ಗೊತ್ತಿಲ್ಲ ಅಧಿಕಾರಿಗಳು ಸಹ ಅವನಿಗೆ ಹೆದರುತ್ತಾರೆ ಎಂದರು.


ಕಳೆದ ಎರಡು ದಶಕಗಳಿಂದ ನಗರಸಭೆಗೆ ಮೂರು ಬಾರಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದೇನೆ. ಎಂದೂ ಈ ರೀತಿಯ ಕಹಿ ಅನುಭವವಾಗಿರಲಿಲ್ಲ. ಮೊನ್ನೆ ನಡೆದ ಘಟನೆ ಸಾಕಷ್ಟು ಬೇಸರ ಮೂಡಿಸಿದ್ದು, ಇಂಥವರ ಜತೆ ರಾಜಕೀಯ ಮಾಡಬೇಕೆ ಎಂಬ ಜಿಜ್ಞಾಸೆ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಪಕ್ಷಕ್ಕಾಗಿ ಅಷ್ಟು ಸೇವೆ ಸಲ್ಲಿಸಿದರು ಪಕ್ಷ ಈ ವಿಚಾರದಲ್ಲಿ ಸರಿಯಾಗಿ ಸ್ಪಂದಿಸಲಿಲ್ಲ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಸಹ ನನಗೆ ಸರಿಯಾದ ಸಹಕಾರ ಸಿಗಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಲ್ಲಸಲ್ಲದ ಪ್ರಕರಣ ದಾಖಲಿಸುವ ಕೆಲಸ ಮಾಡಿದರು. ಆದರೆ,  ನಡೆದಿರುವ ಪ್ರಕರಣಕ್ಕೆ ನನ್ನ ಪರ ನನಗೆ ಬೆಂಬಲ ಸಿಗಲಿಲ್ಲ. ಮಹಿಳಾ ಸದಸ್ಯರ ಹಕ್ಕುಗಳನ್ನು ಪ್ರತಿಪಾದಿಸಿದ್ದೇ ತಪ್ಪಾಯಿತೆ ಎಂದು ಪ್ರಶ್ನಿಸಿದರು.


ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ  ಮಥೀನ್, ಲಿಯಾಖತ್,  ಮುಖಂಡರಾದ ಶಾಬಿರ್, ತೌಸಿಫ್, ಲೋಕೇಶ್ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑