ರಾಮನಗರ ಜಿಲ್ಲಾ ಬಿಜೆಪಿ ಗೆ ನೂತನ ಸಾರಥಿಯಾದ ಆನಂದಸ್ವಾಮಿ
ರಾಮನಗರ/ಚನ್ನಪಟ್ಟಣ: ಬೆಂಗಳೂರು ಗ್ರಾಮಾಂತರ ವಿಭಜಿತ ರಾಮನಗರ ಜಿಲ್ಲಾ ಬಿಜೆಪಿ ಪಕ್ಷಕ್ಕೆ ಚನ್ನಪಟ್ಟಣ ತಾಲ್ಲೂಕಿನ ಎಂ ಎನ್ ಆನಂದಸ್ವಾಮಿ ಯವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಮೊದಲಿಗೆ ಕನಕಪುರ ತಾಲ್ಲೂಕಿನ ನಾಗರಾಜು, ಚನ್ನಪಟ್ಟಣ ದ ಸಿ ಪಿ ಯೋಗೇಶ್ವರ್, ರಾಮನಗರ ದ ರುದ್ರೇಶ್, ಹುಲುವಾಡಿ ದೇವರಾಜು, ರಾಮನಗರ ದ ಶಿವಮಾದು, ಮತ್ತೊಮ್ಮೆ ಹುಲುವಾಡಿ ದೇವರಾಜು ಜಿಲ್ಲಾಧ್ಯಕ್ಷರಾಗಿದ್ದು ಈಗ ಇದೇ ತಾಲ್ಲೂಕಿನ ಎಂ ಎನ್ ಆನಂದಸ್ವಾಮಿ ಜಿಲ್ಲಾಧ್ಯಕ್ಷರಾಗುವ ಮೂಲಕ ಚನ್ನಪಟ್ಟಣ ಹ್ಯಾಟ್ರಿಕ್ ಬಾರಿಸಿದ್ದು ಒಟ್ಟು ೨೦೦೭ ರಿಂದೀಚೆಗೆ ನಾಲ್ಕು ಬಾರಿ ಅಧ್ಯಕ್ಷ ಗಿರಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಟ್ಟಾ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ತಾಲ್ಲೂಕಿನ ಸಂತೆ ಮೊಗಳ್ಳಿ ಗ್ರಾಮದ ಎಂ ಎನ್ ಆನಂದಸ್ವಾಮಿ ಯವರು ಸಿ ಪಿ ಯೋಗೇಶ್ವರ್ ರವರು ಬಿಜೆಪಿ ಪಕ್ಷ ಅಪ್ಪಿಕೊಂಡಾಗ ಅವರ ಜೊತೆಯಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಅಲ್ಲಿಯೂ ಒಮ್ಮೆ ಮುನಿಸಿಕೊಂಡಿದ್ದ ಅವರು ಅನಿತಾ ಕುಮಾರಸ್ವಾಮಿ ಯವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಬೆಂಬಲ ಘೋಷಿಸಿದ ಅವರು ತದನಂತರ ಬಿಜೆಪಿ ಪಕ್ಷವನ್ನು ಹಿಂದುತ್ವದ ನೆಲೆಗಟ್ಟಿನಲ್ಲಿ ಅಪ್ಪಿಕೊಂಡರು. ಒಮ್ಮೆ ಚನ್ನಪಟ್ಟಣ ತಾಲ್ಲೂಕಿನ ಗ್ರಾಮಾಂತರ ಅಧ್ಯಕ್ಷರಾಗಿ ಪಕ್ಷವನ್ನು ಬಲವಾಗಿ ಸಂಘಟಿಸಿದ್ದರು.
ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಂ ಎನ್ ಆನಂದಸ್ವಾಮಿ ಯವರನ್ನು ರಾಜ್ಯ ಮಟ್ಟದ ಬಿಜೆಪಿ ವರಿಷ್ಠರು ಹಾಗೂ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ರಾಮನಗರ ಜಿಲ್ಲಾದ್ಯಂತ ಅಧ್ಯಕ್ಷ ಸ್ಥಾನಕ್ಕೆ ಹಲವಾರು ಮಂದಿ ಆಕಾಂಕ್ಷಿಗಳಾಗಿದ್ದರು.
ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿರುವ ನನಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದ ಬಿಜೆಪಿ ಪಕ್ಷದ ಎಲ್ಲಾ ವರಿಷ್ಠರಿಗೂ ನಾನು ಅಭಿನಂದಿಸುತ್ತೇನೆ. ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಪಕ್ಷಕ್ಕೆ ಬಲ ತುಂಬುತ್ತೇನೆ ಎಂದು ನೂತನ ಜಿಲ್ಲಾಧ್ಯಕ್ಷ ಎಂ ಎನ್ ಆನಂದಸ್ವಾಮಿ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು