ಕಳ್ಳನನ್ನು ಬಂಧಿಸಿ ಜೈಲಿಗಟ್ಟಿದ ತಾವರೆಕೆರೆ ಪೋಲೀಸರು
ಮಾಗಡಿ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಗಿಲನ್ನು ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ. ಮಾಗಡಿ ತಾಲೂಕಿನ ಹೊನ್ನಗನಹಟ್ಟಿ ಗ್ರಾಮದ ವಾಸಿಯಾದ ಕೆಂಪೇಗೌಡ ಎಂಬುವವರು ಯಾರೋ ವ್ಯಕ್ತಿ ಯಾವುದೋ ಆಯುಧದಿಂದ ಬಾಗಿಲನ್ನು ಮೀಟಿ ಮನೆಯ ಒಳಗೆ ಹೋಗಿ ಮನೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳು, ನಗದು ಹಣ ಹಾಗೂ ದಾಖಲಾತಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ತಾವರೆಕೆರೆ ಪೋಲೀಸರಿಗೆ
ನೀಡಿದ ದೂರಿನ ಮೇರೆಗೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಠಾಣಾ ಮೊ.ಸಂ. 374/2023 ಕಲಂ 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದರು.
ಮನೆಯಲ್ಲಿ ಕಳವು ಮಾಡಿದ್ದ ಆರೋಪಿತರು ಹಾಗೂ ಮಾಲು ಪತ್ತೆಗಾಗಿ ಕಾರ್ತಿಕ್ ರೆಡ್ಡಿ, ಪೊಲೀಸ್ ಅಧೀಕ್ಷಕರು, ಸುರೇಶ್ ಟಿ ವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಎ ವಿ ಲಕ್ಷ್ಮೀನಾರಾಯಣ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ರಾಮನಗರ ಜಿಲ್ಲೆ ರವರು ಪ್ರವೀಣ್ ಎಂ. ಪೊಲೀಸ್ ಉಪಾಧೀಕ್ಷಕರು, ಮಾಗಡಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ರಾಮಪ್ಪ ಬಿ ಗುತ್ತೇರ್ ಪಿಐ, ತಾವರೆಕೆರೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಭಾಸ್ಕರ್ ಎಂ, ಪಿಎಸ್ಐ ಹಾಗೂ ಸಿಬ್ಬಂದಿಗಳ ತಂಡ ಆರೋಪಿಯಾದ ಶಿವರಾಜು @ ಕಪ್ಪೆ ಶಿವ ಬಿನ್ ಗೂಳಯ್ಯ, 32 ವರ್ಷ ಇವರನ್ನು ಬಂಧಿಸಲಾಗಿದೆ.
ಆರೋಪಿಯಿಂದ ಸುಮಾರು 45 ಲಕ್ಷ ಬೆಲೆ ಬಾಳುವ ಸುಮಾರು 800 ಗ್ರಾಂ ಚಿನ್ನಾಭರಣ, 07 ಲಕ್ಷ ರೂ ನಗದು ಹಣ, ಸುಮಾರು 350 ಗ್ರಾಂ ನಕಲಿ ಚಿನ್ನಾಭರಣ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿ ಮತ್ತು ಮಾಲು ಪತ್ತೆಯಲ್ಲಿ ಭಾಗಿಯಾಗಿದ್ದ ರಾಮಪ್ಪ ಬಿ ಗುತ್ತೇರ್ ಪಿಐ, ತಾವರೆಕೆರೆ ಪೊಲೀಸ್ ರಾಣೆ, ಪಿಎಸ್ಐ ರವರಾದ ಭಾಸ್ಕರ್ ಎಂ, ಶ್ರೀ ಸಿಂಗೇಗೌಡ ಹಾಗೂ ಸಿಬ್ಬಂದಿಗಳಾದ ಮಂಜುನಾಥ, ಹೇಮಂತ್ಕುಮಾರ್, ಲಕ್ಷ್ಮಿಕಾಂತ, ಗೋವಿಂದರಾಜು, ಫರ್ಮಾನ್, ಶರಣಪ್ಪ, ತಿಪ್ಪೆಸ್ವಾಮಿ, ಶ್ರೀನಿವಾಸ್, ಹನುಮಂತರಾಜು, ಸೌಮ್ಯಾ ರವರ ಕಾರ್ಯವನ್ನು ಕಾರ್ತಿಕ್ ರೆಡ್ಡಿ, ಮಾನ್ಯ ಪೊಲೀಸ್ ಅಧೀಕ್ಷಕರು, ರಾಮನಗರ ಜಿಲ್ಲೆ ರವರು ಶ್ಲಾಘಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು